PLACE YOUR AD HERE AT LOWEST PRICE
ಬಂಗಾರಪೇಟೆ:ಬಂಗಾರಪೇಟೆ ತಾಲೂಕು ಬಗರ್ ಹುಕ್ಕುಂ ಸಮಿತಿಗೆ ತಾಲೂಕಿನ ಮೂವರು ಕಾಂಗ್ರೆಸ್ ಮುಖಂಡರನ್ನು ಸರ್ಕಾರದ ನಾಮನಿರ್ದೇಶಿತ ಸದಸ್ಯರನ್ನಾಗಿ ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಭೂ ಮಂಜೂರಾತಿ ಇಲಾಖೆಯು ನೇಮಕ ಮಾಡಿ ಆದೇಶ ಮಾಡಿದೆ.
ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿರನ್ನು ತಾಲೂಕು ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು, ಇಲ್ಲಿನ ತಹಸೀಲ್ದಾರ್ ಯು.ರಶ್ಮಿ ಕಾರ್ಯದರ್ಶಿಯಾಗಿದ್ದು, ಉಳಿದಂತೆ ಮೂವರು ಸದಸ್ಯರನ್ನು ಸ್ಥಳೀಯ ಕಾಂಗ್ರೆಸ್ ಮುಖಂಡರನ್ನು ನೇಮಕ ಮಾಡಿ ಕಂದಾಯ ಇಲಾಖೆಯ ಭೂ ಮಂಜೂರಾತಿ ವಿಭಾಗದ ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಬಲರಾಮ್ ಆದೇಶ ಹೊರಡಿಸಿದ್ದಾರೆ.
ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಹಾಗೂ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರ ಬಲಗೈ ಬಂಟ ಟಿ.ಮಹದೇವಪ್ಪ, ಹುನ್ಕುಂದ ಗ್ರಾಪಂನ ಕಾಂಗ್ರೆಸ್ ಪ್ರಭಾವಿ ಮುಖಂಡ ದೊಡ್ರಹಳ್ಳಿ ಗಡ್ಡಂ ಗೋವಿಂದಪ್ಪ ಹಾಗೂ ತಾಲೂಕಿನ ಕಾಮಸಮುದ್ರ ವಿಎಸ್ಎಸ್ಎನ್ ಉಪಾಧ್ಯಕ್ಷ ರಂಗನಾಥಚಾರಿರ ಪತ್ನಿ ಚಂದ್ರಕಲಾ ಅವರನ್ನು ನೇಮಕ ಮಾಡಿದ್ದಾರೆ.