PLACE YOUR AD HERE AT LOWEST PRICE
ಬೆಂಗಳೂರು:ಕರ್ನಾಟಕ ರಾಜ್ಯ ರೆಡ್ಡಿ ಜನ ಸಂಘಕ್ಕೆ ಕೋಲಾರ ಜಿಲ್ಲೆಯ ನಿರ್ದೇಶಕರಾಗಿ ಕೆ.ಚಂದ್ರಾರೆಡ್ಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇದೇ ತಿಂಗಳು ೧೭ ರಂದು ನಡೆಯಲಿರುವ ಕರ್ನಾಟಕ ರಾಜ್ಯ ರೆಡ್ಡಿ ಜನ ಸಂಘದ ಕೋಲಾರ ಜಿಲ್ಲೆಯ ನಿರ್ದೆಶಕರ ಸ್ಥಾನಕ್ಕೆ ಬಂಗಾರಪೇಟೆ ಮುಖಂಡ ಕೆ.ಚಂದ್ರಾರೆಡ್ಡಿ ಮತ್ತು12ಜನ ನಾಮಪತ್ರ ಸಲ್ಲಿಸಿದ್ದರು.
ಬಂಗಾರಪೇಟೆ ತಾಲ್ಲೂಕಿನ ರೆಡ್ಡಿ ಜನ ಸಂಘದ ಗೌರವಾದ್ಯಕ್ಷರಾಗಿರುವ ಕೆ.ಚಂದ್ರಾರೆಡ್ಡಿರವರ ಅವಿರೋಧ ಆಯ್ಕೆ ಬೆಂಬಲಿಸಿ ತಾಲ್ಲೂಕು ಅಧ್ಯಕ್ಷ ತಿಪ್ಪಾರೆಡ್ಡಿ ಅಧ್ಯಕ್ಷತೆಯಲ್ಲಿ ಪದಾಧಿಕಾರಗಳ ಸಭೆಯಲ್ಲಿ ಈ ಹಿಂದೆ ತೀರ್ಮಾನಿಸಲಾಗಿತ್ತು.
ಕರ್ನಾಟಕ ರೆಡ್ಡಿ ಜನ ಸಂಘದ ಕೋಲಾರ ಜಿಲ್ಲೆಯ ನಿರ್ಧೇಶಕರ ಸ್ತಾನಕ್ಕೆ ಅಭ್ಯರ್ಥಿಗಳಾಗಿ ತಾಲ್ಲೂಕಿನಿಂದ ಕೆ.ಚಂದ್ರಾರೆಡ್ಡಿ, ಮಲ್ಲಿಕಾರ್ಜುನರೆಡ್ಡಿ ಮಂಜುನಾಥ್ ರೆಡ್ಡಿ(ಗೋಲ್ಡ್ ರೆಡ್ಡಿ) ನಾಮಪತ್ರ ಸಲ್ಲಿಸಿದ್ದರು. ಸಂಘದ ಪದಾಧಿಕಾರಿಗಳ ಸಲಹೆಯಂತೆ ಮಲ್ಲಿಕಾರ್ಜುನರೆಡ್ಡಿ, ಮಂಜುನಾಥ್ ರೆಡ್ಡಿ(ಗೋಲ್ಡ್ ರೆಡ್ಡಿ) ನಾಮಪತ್ರ ವಾಪಸ್ ಪಡೆಯಲು ಒಪ್ಪಿದ ಕಾರಣ ಕೆ.ಚಂದ್ರಾರೆಡ್ಡಿ ತಾಲ್ಲೂಕಿನ ಒಮ್ಮತದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದರು.
ಇಂದು ನಾಮಪತ್ರ ವಾಪಸಾತಿ ಪ್ರಕ್ರಿಯೆಯ ಕೊನೆಯ ದಿನವಾಗಿದ್ದು, ಜಿಲ್ಲಾ ಮಟ್ಟದಲ್ಲಿ ನಾಮಪತ್ರ ಸಲ್ಲಿಸಿದ್ದ 12ಜನರು ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿ ಚಂದ್ರಾರೆಡ್ಡಿ ಮತ್ತು ಮಾಲೂರಿನ ರವೀಂದ್ರ ಡಿ.ಎಸ್. ರವರನ್ನುಕೋಲಾರ ಜಿಲ್ಲೆಯ ಜಿಲ್ಲಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆ ಮಾಡಿದರು. ಈ ಹಿನ್ನೆಲೆಯಲ್ಲಿ ಉಳಿದವರು ನಾಮಪತ್ರ ವಾಪಸ್ ಪಡೆದ ಕಾರಣ ಕೆ.ಚಂದ್ರಾರೆಡ್ಡಿ ಮತ್ತು ಮಾಲೂರಿನ ರವೀಂದ್ರ ಡಿ.ಎನ್ ರವರು ಅವಿರೋಧವಾಗಿ ಆಯ್ಕೆಯಾದರು.
ಈ ವೇಳೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಶಾಸಕ ಸತೀಶ್ ರೆಡ್ಡಿ, ಮಾಜಿ ಎಂ.ಎಲ್.ಸಿ ಕೆ.ಸಿ.ರಾಮಮೂರ್ತಿ, ತಾಲ್ಲೂಕು ರೆಡ್ಡಿ ಜನ ಸಂಘದ ಅಧ್ಯಕ್ಷ ತಿಪ್ಪಾರೆಡ್ಡಿ ಕಾರ್ಯಧ್ಯಕ್ಷ ರಾಜಾರೆಡ್ಡಿ ಮುಖಂಡರಾದ ಮಲ್ಲಿಕಾರ್ಜುನರೆಡ್ಡಿ, ಮಂಜುನಾಥರೆಡ್ಡಿ(ಗೋಲ್ಡ್ ರೆಡ್ಡಿ), ಗೋವಿಂದರೆಡ್ಡಿ, ವಿಜಿರೆಡ್ಡಿ, ವಿಜಯರಾಘವರೆಡ್ಡಿ, ಗಂಗಿರೆಡ್ಡಿ, ಶಿವಾರೆಡ್ಡಿ ರಾಮಕೃಷ್ಣಾರೆಡ್ಡಿ, ಪ್ರಭಾಕರರೆಡ್ಡಿ, ಶ್ರೀನಿವಾಸರೆಡ್ಡಿ, ವಸಂತ್, ಜೀವನ್ ರೆಡ್ಡಿ ಮಾಲೂರು ಅಶ್ವಥರೆಡ್ಡಿ, ನವೀನ್ ಕುಮಾರ್, ಮುಳಬಾಗಿಲು ಅಶೋಕ್ ಆನಂದರೆಡ್ಡಿ, ಕೇಶವರೆಡ್ಡಿ, ಮೊದಲಾದವರಿದ್ದರು.