PLACE YOUR AD HERE AT LOWEST PRICE
ಕೆಜಿಎಫ್., ಡಿ. ೧೬ : ಆಂಡ್ರಸನ್ಪೇಟೆ ಪೊಲೀಸ್ ಠಾಣೆ ಸರಹದ್ದಿನ ಬಾಲಕರ ಸರ್ಕಾರಿ ಬಾಲಮಂದಿರದಿ0ದ ೨೦೧೬ರಲ್ಲಿ ನಾಪತ್ತೆಯಾಗಿದ್ದ ಬಾಲಕ/ಯುವಕನನ್ನು ೭ ವರ್ಷದ ಬಳಿಕ ಪತ್ತೆ ಮಾಡುವಲ್ಲಿ ಸಿಇಎನ್ ಕ್ರೈಂ ಪೊಲೀಸರು ಯಶಸ್ವಿಯಾಗಿದ್ದಾರೆ. ೨೦೧೬ರ ಸೆ.೫ ರಂದು ಸಂಜೆ ಕೆ.ಜಿ.ಎಫ್ ಮಸ್ಕಂನಲ್ಲಿನ ಬಾಲಕರ ಸರ್ಕಾರಿ ಬಾಲಮಂದಿರದಿoದ ೧೪ ವರ್ಷದ ಬಾಲಕ ಕಾಣೆಯಾಗಿರುತ್ತಾನೆಂದು ಬಾಲಮಂದಿರದ ಅಧೀಕ್ಷಕರು ನೀಡಿದ ದೂರಿನ ಮೇರೆಗೆ ಆಂಡ್ರಸನ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಆಂಡ್ರಸನ್ಪೇಟೆ ಪೊಲೀಸ್ ಠಾಣೆಯವರು ಸುಮಾರು ೬ ವರ್ಷಗಳ ಕಾಲ ತನಿಖೆಯನ್ನು ಕೈಗೊಂಡಿದ್ದು, ಸದರಿ ಬಾಲಕನು ಪತ್ತೆಯಾಗದ ಕಾರಣ ಮೇಲಾಧಿಕಾರಿಗಳ ಆದೇಶದಂತೆ, ಪೊಲೀಸ್ ನಿರೀಕ್ಷಕರು, ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆ ರವರು ತನಿಖೆ ವಹಿಸಿಕೊಂಡಿರುತ್ತಾರೆ.
ಈ ಕೇಸಿನ ತನಿಖೆಯನ್ನು ಮತ್ತು ಪತ್ತೆ ಕಾರ್ಯಕ್ಕೆ ಸಿ.ಇ.ಎನ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಜೆ.ಪರಿಮಳ ಮತ್ತು ಅಪರಾಧ ಸಿಬ್ಬಂದಿಗಳಾದ ಎಸ್.ಆರ್. ಚೇತನ್ ಯಾದವ್, ಚೇತನ್ ಕುಮಾರ್ ರವರನ್ನು ನೇಮಿಸಲಾಗಿತ್ತು. ಅದರಂತೆ, ಅಪರಾಧ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಕಾಣೆಯಾಗಿದ್ದ ಅಂದಿನ ೧೪ ವರ್ಷದ ಬಾಲಕ ಈಗ ೨೧ ವರ್ಷದ ಯುವಕನನ್ನು ಕೋಲಾರ ತಾಲ್ಲೂಕು, ರಾಮಸಂದ್ರ ಗ್ರಾಮದಲ್ಲಿ ಪತ್ತೆ ಮಾಡಲಾಯಿತು. ರಾಮಸಂದ್ರ ಗ್ರಾಮದ ಬೀರಪ್ಪ ಮತ್ತು ಭೂಲಕ್ಷ್ಮೀದೇವಿ ರವರ ಪೋಷಣೆಯಲ್ಲಿದ್ದವ ಯುವಕನನ್ನು ಪತ್ತೆ ಮಾಡಿ ಬಾಲಕರ ಸರ್ಕಾರಿ ಬಾಲಮಂದಿರ, ಮಸ್ಕಂ, ಕೆ.ಜಿ.ಎಫ್ ಸಂಸ್ಥೆಯಲ್ಲಿ ಹಾಜರು ಪಡಿಸಲಾಗಿರುತ್ತದೆ.