ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೋಲಾರ. ಜ .18 : ನಗರದ ಟಿಎಪಿಸಿಎಂಎಸ್ ಕಛೇರಿಯಲ್ಲಿ ಗುರುವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ವಡಗೂರು ರಾಮು ಅಧ್ಯಕ್ಷರಾಗಿ ಮತ್ತು ರಾಜಣ್ಣ ಅವರು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿ ಗೆಲುವು ಸಾಧಿಸಿದರು.
ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಮಾತನಾಡಿ ಈ ಸಂಸ್ಥೆಯಲ್ಲಿ ಮಾಜಿ ಶಾಸಕರ ನೇತೃತ್ವದಲ್ಲಿ ಅವಿರೋಧ ಆಯ್ಕೆ ಮಾಡಿದ 14 ಸದಸ್ಯರಿಗೂ ಕೃತಜ್ಞತೆಗಳು. ಮತ್ತು 5 ವರ್ಷದ ಆಡಳಿತ ಅವಧಿಯಲ್ಲಿ ನಮ್ಮ ಶಕ್ತಿಗೂ ಮೀರಿ ಈ ಸಂಸ್ಥೆ ಅಭಿವೃದ್ಧಿಗೆ ಶ್ರಮಿಸುತ್ತೇವೆ.
ಯಾವುದೇ ಗೊಂದಲವಿಲ್ಲದೆ ಆಚಾತುರ್ಯ ನಿರ್ಧಾರಗಳು ತೆಗೆದುಕೊಳ್ಳದೆ ಎಲ್ಲರ ಒಮ್ಮತದ ಮೇರೆಗೆ ಉತ್ತಮ ಕಾರ್ಯ ಯೋಜನೆಗಳ ರೂಪಿಸಲು ಸಹಕರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕೆ ಶ್ರೀನಿವಾಸ್ ಗೌಡ, ನಾಗನಾಳ ಸೋಮಣ್ಣ, ತಂಬಳ್ಳಿ ಮುನಿಯಪ್ಪ, ಮುನಿರಾಜು, ಶಿಲ್ಪಾ ಮಂಜುನಾಥ್, ಸೇರಿದಂತೆ ಸದಸ್ಯರು ಮತ್ತು ಕಛೇರಿ ಸಿಬ್ಬಂದಿಗಳು ಇತರರು ಇದ್ದರು.