PLACE YOUR AD HERE AT LOWEST PRICE
ಬಂಗಾರಪೇಟೆ:ಪಟ್ಟಣದ ಗೌತಮ್ ನಗರ್ ದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ 134 ನೇ ಹುಣ್ಣಿಮೆ ಪೂಜೆಯನ್ನು ಶ್ರೀ ರೇಣುಕಾ ಯಲ್ಲಮ್ಮ ದೇವಾಲಯ ಸೇವಾ ಟ್ರಸ್ಟ್, ವಿಜಯನಗರ ನಿವಾಸಿಗಳಾದ ಶ್ರೀಮತಿ ಟಿ ರತ್ನಮ್ಮ ಮತ್ತು ಶ್ರೀ ಎಂ ರಾಮಕೃಷ್ಣಪ್ಪ , ಜಿಲ್ಲಾ ಪಂಚಾಯತಿ ನಿವೃತ್ತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹಾಗೂ ಧನ್ವಿಕ ಎನ್, ಆರ್ಯ ಎಸ್ ಹಾಗೂ ರವಿಕುಮಾರ್ ಮತ್ತು ನವೀನ್ ಇವರ ಕುಟುಂಬದ ವತಿಯಿಂದ ಬೆಳಿಗ್ಗೆ 7-00 ಗಂಟೆಗೆ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಸಂಜೆ ಮಹಾಮಂಗಳಾರತಿ ಮತ್ತು ಅನ್ನದಾನ ಕಾರ್ಯಕ್ರಮ ಅದ್ದೂರಿ ಯಾಗಿ ನೆರವೇರಿತು.
ಪೂಜಾ ಸೇವಾಕರ್ತರಾದ ಶ್ರೀಮತಿ ಟಿ ರತ್ನಮ್ಮ ರವರು ಮಾತನಾಡಿ ನಮ್ಮಲ್ಲಿ ಪ್ರತಿ ದಿನ ನಡೆಯುವ ಅದೆಷ್ಟೋ ಘಟನೆಗಳ ಬಗ್ಗೆ ಯೋಚನೆ ಮಾಡಿ, ಸಮಸ್ಯೆ ಮತ್ತು ಸಂಸಾರದ ಸುಳಿಯಲ್ಲಿ ಸಿಲುಕುವ ಸಂದರ್ಭದಲ್ಲಿ ನಮಗೆ ತಕ್ಷಣಕ್ಕೆ ನೆನಪು ಬರುವುದು ತಾಯಿ ರೇಣುಕಾ ಯಲ್ಲಮ್ಮ ದೇವಿ, ಯಾಕೆಂದರೆ ಇಡೀ ಜಗದ ಪರಿವರ್ತನೆ ಅಥವಾ ಅಭ್ಯದಯದ ಮೂಲ ಕಾರಣ ಒಂದು ಅದ್ಭುತವಾದ ಶಕ್ತಿ. ಆ ಶಕ್ತಿಯೇ ರೇಣುಕಾ ಯಲ್ಲಮ್ಮ ದೇವಿಯ ಅವತಾರವು ಆಗಿದೆ.
ನಾವು ಹಿರಿಯರನ್ನು ಗೌರವಿಸುವ ಕೆಲಸ ಮಾಡಬೇಕು. ನಮಗೆ ಶಕ್ತಿ ಮತ್ತು ಮುಕ್ತಿಗಾಗಿ ದೇವಾಲಯಗಳ ಮೊರೆ ಹೋಗಬೇಕು. ಸಾಧ್ಯವಾದಷ್ಟು ಮಟ್ಟಿಗೆ ನಾವು ಅನ್ನದಾನದ ಸೇವೆ ಮಾಡಬೇಕು. ಹಸಿದವರಿಗೆ ಅನ್ನ ನೀಡುವಂತ ಕಾರ್ಯಕ್ರಮ ಆಯೋಜಿಸಬೇಕು ಎಂದ ಅವರು ಭಕ್ತಿಯೊಂದಿಗೆ ಅನ್ನದ ಶಕ್ತಿ ಬಗ್ಗೆಯ ಬಗ್ಗೆ ಭಕ್ತರಿಗೆ ಹೇಳಿದರು.
ಪ್ರತಿ ತಿಂಗಳು ನಡೆಯುವ ಹುಣ್ಣಿಮೆ ಪೂಜೆಗೆ ನಮ್ಮ ಕುಟುಂಬವು ನಿಮ್ಮ ಜೊತೆಗೂಡಿ ಬರುವೆವು ಎಂದು ದೇವಾಲಯದ ಟ್ರಸ್ಟಿಗಳಿಗೆ ಭರವಸೆ ನೀಡಿದರು. ಕಳೆದ 12 ವರ್ಷಗಳಿಂದ ಅನ್ನದಾನ ಮಾಡುತ್ತಿರುವುದು ಟ್ರಸ್ಟಿನ ಕಾರ್ಯ ಶ್ಲಾಘನೀಯ ಎಂದರು.
ಈ ಪೂಜೆ ಕಾರ್ಯಕ್ರಮದಲ್ಲಿ ಟ್ರಸ್ಟ್ ವತಿಯಿಂದ ಶ್ರೀಮತಿ ರತ್ನಮ್ಮ ಮತ್ತು ಅವರ ಮಕ್ಕಳಾದ ರವಿಕುಮಾರ್ ಮತ್ತು ನವೀನ್ ರವರುಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಎಂ ನಾರಾಯಣ ಸ್ವಾಮಿ, ಉಪಾಧ್ಯಕ್ಷರಾದ ಬಿ ಜಿ ವಿವೇಕಾನಂದ, ಕರವೇ ಚಲಪತಿ, ಪತ್ರಕರ್ತ ಕೆ.ರಾಮಮೂರ್ತಿ, ಭರತ್ ಕುಮಾರ್, ಉಪೇಂದ್ರ ( ರಾಜು ) ಗಾಯಕ ಕಿರಣ್, ಮಂಜು, ವಿ ನಾರಾಯಣ ಸ್ವಾಮಿ, ಹರೀಶ್ ಪಿ ವೆಂಕಟಾಚಲಪತಿ, ಕುಮಾರ್, ಅಶೋಕ್, ಸತ್ಯನಾರಾಯಣ, ಗಜೇಂದ್ರ , ಚಲಪತಿ ,ಕವಿ ವಿ ಲಕ್ಷ್ಮಯ್ಯ, ಅರ್ಚಕರಾದ ಷಣ್ಮುಖನಾಥಾನ್, ವಕೀಲರಾದ ರವಿಕುಮಾರ್, ಸದಾಶಿವ ,ಹರೀಶ್ ಕುಮಾರ್ ಹಾಗೂ ಸಮಸ್ತ ಭಕ್ತ ವೃಂದದವರು ಆಗಮಿಸಿ ದೇವಿಯ ಕೃಪೆಗೆ ಪಾತ್ರರಾದರು.