• Sat. Sep 7th, 2024

PLACE YOUR AD HERE AT LOWEST PRICE

ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಜಿ.ಗೋಪಾಲರೆಡ್ಡಿ ನೇಮಕ

ಕೋಲಾರ,ಜುಲೈ.೨೩ : ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ದಾಸರಹೊಸಹಳ್ಳಿಯ ಜಿ.ಗೋಪಾಲರೆಡ್ಡಿ ಅವರನ್ನು ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ಕಾಯ್ದೆ ೧೯೮೭ರ ಕಲಂ(ಎ)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಲತಾ.ಕೆ ನೇಮಕ ಮಾಡಿ ಆದೇಶಿಸಿದ್ದಾರೆ.

ನೂತನ ಕೆಯುಡಿಎ ಅಧ್ಯಕ್ಷರಾಗಿ ನೇಮಕಗೊಂಡಿರುವ ಜಿ.ಗೋಪಾಲರೆಡ್ಡಿ ಅವರನ್ನು ಬಂಗಾರಪೇಟೆ ಶಾಸಕ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಹಾಗೂ ಹಣಕಾಸು ನಿಗಮ ಅಧ್ಯಕ್ಷ ಎಸ್.ಎನ್. ನಾರಾಯಣಸ್ವಾಮಿ ಅಭಿನಂದಿಸಿದ್ದಾರೆ.

ಬಹಳ ದಿನಗಳಿಂದ ಕೆಯುಡಿಎ ಅಧ್ಯಕ್ಷ ಹುದ್ದೆಗಾಗಿ ಹಲವು ಕಾಂಗ್ರೆಸ್ ಮುಖಂಡರು ಆಕಾಂಕ್ಷಿಗಳಾಗಿದ್ದರು, ಕೆಲವರು ಶಾಸಕರಿಗೂ ತಿಳಿಯದೆ ವಾಮ ಮಾರ್ಗದಲ್ಲಿ ಅಧ್ಯಕ್ಷರಾಗಲು ಶಿಫಾರಸ್ಸುಗಳನ್ನು ಹೊತ್ತು ಸರ್ಕಾರದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದರೂ ಅಂತಿಮವಾಗಿ ಬಂಗಾರಪೇಟೆ ಶಾಸಕರ ಆಪ್ತ ಬೆಂಬಲಿಗರಾದ ಗೋಪಾಲರೆಡ್ಡಿ ಅರ್ಹತೆಯ ಅಭ್ಯರ್ಥಿಯಾಗಿ ಸರ್ಕಾರದಿಂದ ನೇಮಿಸಲ್ಪಟ್ಟಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!