PLACE YOUR AD HERE AT LOWEST PRICE
ಮುಳಬಾಗಿಲು ತಾಲ್ಲೂಕು ರೆಡ್ಡಿ ಜನಸಂಘದಲ್ಲಿ ಸಮುದಾಯದ ಸಂಘಟನೆ ಬಗ್ಗೆ ಚರ್ಚಿಸಲು ಪಟ್ಟಣದಲ್ಲಿ ಬುಧವಾರ ಕರೆದ ಸಭೆಯಲ್ಲಿ ಮುಳಬಾಗಿಲು ತಾಲ್ಲೂಕು ರೆಡ್ಡಿ ಜನಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕುಲ ಪ್ರಮುಖರು ಹಿರಿಯರಾದ ಮಾನ್ಯ ಶ್ರೀ ಜಯರಾಮ ರೆಡ್ಡಿ ರವರು ವಹಿಸಿದ್ದು ಕಗ್ಗಿನಹಳ್ಳಿ ಕೇಶವರೆಡ್ಡಿ ಅಧ್ಯಕ್ಷರಾಗಿ, ವಿಶ್ವನಾಥರೆಡ್ಡಿ ಪ್ರದಾನ ಕಾರ್ಯದರ್ಶಿಯಾಗಿ ಮತ್ತು ಒಟ್ಟು 25ಜನ ಪ್ರಮುಖರನ್ನು ಪದಾಧಿಕಾರಿಗಳು ಮತ್ತು ಸದಸ್ಯರಾಗಿ ಅವಿರೋದವಾಗಿ ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ರಾಜ್ಯ ರೆಡ್ಡಿ ಜನಸಂಘದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಂಘಟನಾ ಸಮಿತಿ ಅಧ್ಯಕ್ಷರು ಆದ ಪ್ರಭಾಕರರೆಡ್ಡಿ, ಸುರೇಶರೆಡ್ಡಿ ,ಕೋಲಾರ ಜಿಲ್ಲೆಯಿಂದ ನಿರ್ದೇಶಕರಾಗಿ ಆಯ್ಕೆಯಾಗಿರುವ ಬಂಗಾರಪೇಟೆಯ K. ಚಂದ್ರಾರೆಡ್ಡಿ ಮತ್ತು ಮಾಲೂರಿನ ರವೀಂದ್ರರೆಡ್ಡಿ, ಬಂಗಾರಪೇಟೆ ತಾಲ್ಲೂಕು ರೆಡ್ಡಿ ಜನಸಂಘದ ಗೌರವಾಧ್ಯಕ್ಷರಾದ G. ರಾಜಾರೆಡ್ಡಿ ಸಭೆಯಲ್ಲಿ ಸಮುದಾಯದ ಸಂಘಟನೆ ಬಗ್ಗೆ ತಮ್ಮ ಅಮೂಲ್ಯ ಸಲಹೆ ಸೂಚನೆ ಮಾರ್ಗದರ್ಶನಗಳನ್ನು ನೀಡಿದರು.
ಸಭೆಯಲ್ಲಿ ಕುಲಪ್ರಮುಖರಾದ ಅಶೋಕರೆಡ್ಡಿ, ರಾಮಕೃಷ್ಣರೆಡ್ಡಿ, ನಜುಂಡರೆಡ್ಡಿ, ಶ್ರೀನಿವಾಸರೆಡ್ಡಿ, ತಿಮ್ಮಾರೆಡ್ಡಿ, ಪ್ರಸಾದರೆಡ್ಡಿ,ಲೊಕೇಶರೆಡ್ಡಿ, ಮುಂತಾದ ಗಣ್ಯರು ಭಾಗವಹಿಸಿದ್ದರು.