• Thu. Sep 19th, 2024

PLACE YOUR AD HERE AT LOWEST PRICE

ಕೋಲಾರ : ಮೂವರು ಹಂತಕರಿಂದ ಶಿಕ್ಷಕಿಯ ಕುತ್ತಿಗೆ ಕುಯ್ದು ಕೊಲೆ ಮಾಡಿರುವ ಕೃತ್ಯ ಕೋಲಾರ ಜಿಲ್ಲೆಯಲ್ಲಿ ಜರುಗಿದೆ.

ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಮುತ್ಯಾಲಪೇಟೆ ಬಡಾವಣೆಯಲ್ಲಿ ಘಟನೆ ನಡೆದಿದ್ದು, ಕೊಲೆಯಾದ ಶಿಕ್ಷಕಿ ದಿವ್ಯಶ್ರೀ (42) ಎಂದು ತಿಳಿದು ಬಂದಿದೆ.

ಮುತ್ಯಾಲಪೇಟೆಯ ಮನೆಯಲ್ಲಿ ತನ್ನ ಮಗಳೊಂದಿಗೆ ಇದ್ದಾಗ ಕೊಲೆ ಮಾಡಿರುವ ಹಂತಕರು  ಮಗಳನ್ನು ಕೊಲೆ ಮಾಡಲು ಯತ್ನ ಮಾಡಿದ್ದು , ಈ ವೇಳೆ ಮಗಳು ಬಚಾವ್ ಆಗಿದ್ದಾಳೆ.

ಶಿಕ್ಷಕಿ ಕೊಲೆಯಿಂದ  ಮುಳಬಾಗಿಲು ನಗರದ ಜನ ಬೆಚ್ವಿ ಬಿದ್ದಿದ್ದು, ಸುದ್ದಿ ತಿಳಿದ ತಕ್ಷಣ ಕೋಲಾರ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಹಾಗೂ ಮುಳಬಾಗಿಲು ಶಾಸಕ  ಸಮೃದ್ದಿ ಮಂಜುನಾಥ್ ಬೇಟಿ ನೀಡಿದ್ದಾರೆ‌ .

ಮೃತ ಶಿಕ್ಷಕಿ ಮುಳಬಾಗಿಲು ತಾಲ್ಲೂಕು ಮುಡಿಯನೂರು  ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಇವರು  ಉದ್ಯಮಿ ಪದ್ಮನಾಭ್ ರವರ ಪತ್ನಿ ಎಂದು ಹೇಳಲಾಗಿದೆ.

ಸ್ಥಳಕ್ಕೆ ಎಫ್.ಎಸ್.ಎಲ್‌ ಹಾಗೂ ಶ್ವಾನ ದಳದ ಸಿಬ್ಬಂದಿ ಬೇಟಿ, ಮುಳಬಾಗಿಲು ನಗರ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

Leave a Reply

Your email address will not be published. Required fields are marked *

You missed

error: Content is protected !!