• Sun. Apr 28th, 2024

ಬಂಗಾರಪೇಟೆಯಲ್ಲಿ ವಕೀಲ ವೆಂಕಟಾಚಲಪತಿರಿಗೆ ಸನ್ಮಾನ.

PLACE YOUR AD HERE AT LOWEST PRICE

ಡಾ. ಬಿಆರ್ ಅಂಬೇಡ್ಕರ್ ಅಭಯ ಸಂಘದ ವತಿಯಿಂದ ಜಿಲ್ಲಾ ಅಟ್ರಾಸಿಟಿ ಕಮಿಟಿ ಸದಸ್ಯ ಹಾಗೂ ವಕೀಲರಾದ ವೆಂಕಟಚಲಪತಿ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಪಟ್ಟಣದ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ ಕಿರಣ್ ಕುಮಾರ್ ಮಾತನಾಡಿ, ವೆಂಕಟಚಲಪತಿಯವರು ಸುಮಾರು ವರ್ಷದಿಂದ ನಾನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡು ಉತ್ತಮ ಸಮಾಜಸಭೆ ಮಾಡುತ್ತಿದ್ದಾರೆ.

ಬಡವರಿಗೆ ದೀನ ದಲಿತರಿಗೆ ಅಲ್ಪಸಂಖ್ಯಾತರಿಗೆ ಜನಸಾಮಾನ್ಯರಿಗೆ ಜಾತಿ ಭೇದ ತಾರತಮ್ಯವಿಲ್ಲದೆ ರಾತ್ರಿಹಗಲು ನಿರಂತರ ಸಹಕಾರ ನೀಡುತ್ತಾ ಸಮಾಜ ಸೇವೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.

ವಕೀಲರೂ ಆದ ವೆಂಕಟಾಚಲಪತಿರ ಸಹಾಯ ಮತ್ತು ಸಹಕಾರದಿಂದಾಗಿ ಅನೇಕರಿಗೆ ಅನುಕೂಲವಾಗಿದೆ. ಆದ್ದರಿಂದ ನಾವುಗಳು ಇವರ ಸಾಧನೆಯನ್ನು ಗುರುತಿಸಿ ಸನ್ಮಾನವನ್ನು ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ದಲಿತ ಮುಖಂಡರಾದ ರಮಣ್ ಕುಮಾರ್, ಪ್ರಕಾಶ್ ರಾಜ್, ಕೃಷ್ಣ, ಗಣೇಶ್, ಎಂ.ಎನ್.ಭಾರದ್ವಾಜ್, ಅನಿಲ್, ಗೋವಿಂದಪ್ಪ, ಅಶ್ವಥ್, ಅಶೋಕ್, ಅರುಣ್ ಕುಮಾರ್, ಜಶ್ವಂತ್, ಸುರೇಶ್, ರಘುನಾಥ್, ಪ್ರಶಾಂತ್, ಸುಮನ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!