• Tue. Apr 30th, 2024

PLACE YOUR AD HERE AT LOWEST PRICE

ಶ್ರೀನಿವಾಸಪುರ:ದಲಿತ ಮಹಿಳೆಯರ ಮೇಲೆ ಮಾರಣಾoತಿಕ ಹಲ್ಲೆಮಾಡಿ ಜಾತಿ ನಿಂದನೆ ಮಾಡಿರುವ ಪುಂಡರನ್ನು ಕೂಡಲೇ ಬಂದಿಸಬೇಕೆಂದು ನೊಂದ ಮಹಿಳೆಯರ ಸಂಬಂದಿಕರು ಮತ್ತು ದಲಿತ ಮುಖಂಡರು ಆಗ್ರಹಿಸಿದ್ದಾರೆ.

ತಾಲ್ಲೂಕಿನ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಡಗಲ್ ಗ್ರಾಮದ ಅಲಿ, ಸಿದ್ದಿಕ್, ಮುಖಿರ್, ಅಸ್ಲಾಂ, ಅರ್ಬಜ್, ಇಮ್ರಾನ್ ಹಾಗೂ ತನ್ವಿರ್ ಎಂಬ ಯುವಕರು ಇದೇ ಗ್ರಾಮದ ಮಹಿಳೆಯರು ಕುರಿ ಮೇಯಿಸುತ್ತಿದ್ದ ವಿಚಾರವಾಗಿ ಮಾರಣಾoತಿಕ ಹಲ್ಲೆ ನಡೆಸಿದ್ದಾರೆ.

ಈ ಬಗ್ಗೆ ಮಹಿಳೆಯರ ಸಂಬಂದಿಕರು ಗೌನಿಪಲ್ಲಿ ಠಾಣೆ ಮೆಟ್ಟಿಲೇರಿದ್ದು, ಸೋಮವಾರ ಮದ್ಯಹ್ನ ಅಡ್ಡಗಲ್ ಗ್ರಾಮದ ಸಮೀಪ ಸರ್ಕಾರಿ ಜಮೀನು ಒಂದರಲ್ಲಿ ಮಹಿಳೆಯರು ಕುರಿಗಳನ್ನು ಮೇಯಿಸುತ್ತಿದ್ದರು.

ಈ ವೇಳೆ ಕೆಲ ಕುರಿಗಳು ಅಲಿ ಎಂಬಾತನು ಬೆಳೆ ಹಾಕಿದ್ದ ಜಮೀನಿನಲ್ಲಿ ಆಕಸ್ಮಿಕವಾಗಿ ಪ್ರವೇಶ ಮಾಡಿವೆ. ಈ ಕಾರಣದಿಂದ ಕೋಪಗೊಂಡ ಅಲಿ ಮಹಿಳೆಯರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿ ಜಾತಿನಿಂದನೆ ಮಾಡಿ ಮಾರಣಾoತಿಕ ಹಲ್ಲೆ ನಡೆಸಿದ್ದಾನೆ.

ಘಟನೆ ತಿಳಿದ ಕುಟುಂಬಿಕರು ಅಲಿ ಮತ್ತಿತರರನ್ನು ಪ್ರಶ್ನೆ ಮಾಡಲಾಗಿ  ಪ್ರಶ್ನೆ ಮಾಡಿದವರ ಮೇಲೆ ಏಕ ಏಕಿ ಪುನ್ಹ ಹಲ್ಲೆ ಮಾಡಿದ್ದಾರೆ. ಹಳ್ಳೆಗೋಳಗಾದ ಮಹಿಳೆಯರು ಕೂಡಲೇ ಶ್ರೀನಿವಾಸಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿದ್ದಾರೆ.

ದೂರು ನೀಡಿದ ಹಿನ್ನೆಲೆ ಗೌನಿಪಲ್ಲಿ ಪೊಲೀಸರು ಅಲಿ ಮತ್ತು ಅನುಚರರ ವಿರುದ್ಧ ಪ್ರಕರಣ ದಾಖಲಿಸಿದ್ದು ಆರೋಪಿಗಳ ಬಂಧನ ತಡವಾಗುತ್ತಿರುವ ಕಾರಣ ಮಹಿಳೆಯರ ಕುಟುಂಬಿಕರು ಹಾಗೂ ದಲಿತ ಮುಖಂಡರು ಹಲ್ಲೆ ಮಾಡಿದ ಪುಂಡರನ್ನ ಕೂಡಲೇ ಬಂಧಿಸಿ ಸಂತ್ರಸ್ತರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸರನ್ನು ಒತ್ತಾಯಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!