PLACE YOUR AD HERE AT LOWEST PRICE
ಬಂಗಾರಪೇಟೆ:ನಾನು ನನ್ನ ಜೀವಮಾನದಲ್ಲಿ ಎಂದೂ ಯಾವುದೇ ಡೀಲ್ ಮಾಡಿ ಸಂಪಾದಿಸಿದವನಲ್ಲ. ನಾನು ಮತ್ತು ನನ್ನ ಹೆಂಡತಿ ಕೃಷಿಮಾಡಿ ಸಂಪಾದಿಸಿ ಬದುಕುತ್ತಿದ್ದೇವೆ ಎಂದು ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹೇಳಿದರು.
ಅವರು ಪಟ್ಟಣದ ಕೆ.ಸಿ.ಆರ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಾತನಾಡಿ, ನಾನು ಮತ್ತೊಮ್ಮೆ ಶಾಸಕನಾಗುವುದನ್ನು ತಡೆಯಲು ಕೆಲವರು ಕುತಂತ್ರದಿಂದ ಅಪಪ್ರಚಾರಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.
ನಾನು ಕೋಟಿಗಳಿಗೆ ಡೀಲ್ ಆಗಿದ್ದೇನೆ ಎಂದು ಅಪಪ್ರಚಾರ ಮಾಡುವವರು ನಾನು ಡೀಲ್ ಮಾಡಿಕೊಂಡಿರುವುದನ್ನು ಸಾಬೀತು ಪಡಿಸಿದರೆ ಸಾರ್ವಜನಿಕವಾಗಿ ನೇಣು ಹಾಕಿಕೊಳ್ಳಲು ಸಿದ್ದನಿದ್ದೇನೆ ಎಂದು ಸವಾಲೆಸೆದರು.
ನನಗೆ ವಯಸ್ಸಾಗಿದೆ. ಇದೊಂದು ಬಾರಿ ನನಗೆ ಅವಕಾಶ ಕೊಡಿ ಎಂದು ಆಕಾಂಕ್ಷಿಗಳಾದ ಬಿ.ವಿ.ಮಹೇಶ್, ವಿ.ಶೇಷು ಮೊದಲಾದವರನ್ನು ವಿನಂತಿ ಮಾಡಿಕೊಂಡೆ. ಅದಕ್ಕೆ ಅವರೆಲ್ಲಾ ದೊಡ್ಡ ಮನಸ್ಸು ಮಾಡಿ ನನಗೆ ಟಿಕೆಟ್ ಬಿಟ್ಟುಕೊಟ್ಟಿದ್ದಾರೆ.
ಈ ಕುರಿತು ಸಭೆಗಳನ್ನು ನಡೆಸಿ ತೀರ್ಮಾನಿಸಿರುವ ಬಗ್ಗೆ ಬಿಜೆಪಿ ಪಕ್ಷದ ಹೈಕಮಾಂಡ್ ಗೆ ಎಲ್ಲರೂ ಒಟ್ಟಿ ಹೋಗಿ ತಿಳಿಸಿದ್ದೇವೆ. ಎಲ್ಲಾ ಆಕಾಂಕ್ಷಿಗಳ ಬೆಂಬಲ ನನಗೆ ಇರುವುದರಿಂದ ಟಿಕೆಟ್ ನನಗೆ ನೀಡುತ್ತಾರೆಂಬ ಭರವಸೆ ಇದೆ ಎಂದರು.