PLACE YOUR AD HERE AT LOWEST PRICE
ಕೋಲಾರ,ಏಪ್ರಿಲ್.೧೮ : ಸ್ವಾತಂತ್ರ್ಯ ಬಂದು ೭೫ ವರ್ಷಗಳು ಕಳೆದರೂ ಅದೇ ಹಳೆಯ ಭರವಸೆಗಳು ಆಶ್ವಾಸನೆಗಳನ್ನು ಕಾಂಗ್ರೆಸ್, ಬಿಜೆಪಿ ಪಕ್ಷಗಳು ನೀಡುತ್ತಿವೆ. ಶೋಷಿತ ಸಮುದಾಯಗಳ ಧ್ವನಿಯಾಗಿ ಬಿಎಸ್ಪಿ ಪಕ್ಷ ಕೋಲಾರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸುತ್ತಿರುವುದಾಗಿ ಬಿಎಸ್ಪಿ ಅಭ್ಯರ್ಥಿ ಎಸ್.ಬಿ. ಸುರೇಶ್ ತಿಳಿಸಿದರು.
ನಗರದ ಬಂಗಾರಪೇಟೆ ವೃತ್ತದ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನೂರಾರು ಕಾರ್ಯಕರ್ತರೊಂದಿಗೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ಚುನಾವಣೆ ಕೇಂದ್ರಕ್ಕೆ ಆಗಮಿಸಿ ತಮ್ಮ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕೋಲಾರ ಕ್ಷೇತ್ರದಲ್ಲಿ ಇಲ್ಲಿಯವರೆಗೆ ಆಯ್ಕೆಯಾದ ಜನಪ್ರತಿನಿಧಿಗಳು ಕೋಲಾರವನ್ನು ಒಂದು ಹಳ್ಳಿಯಾಗೇ ಉಳಿಸಿದ್ದಾರೆ. ಮತ್ತೊಂದು ಕಡೆ ಸಂವಿಧಾನ ಅಪಾಯದಲ್ಲಿದೆ, ಸಂವಿಧಾನದ ಆಶಯಗಳೂ ಈಡೇರಲಿಲ್ಲ ಎಂದರು.
ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳು ವರ್ಣರಂಜಿತ ಪ್ರಣಾಳಿಕೆಗಳನ್ನು ಬಿಡುಗಡೆಗೊಳಸಿ ಚುನಾವಣೆ ಗೆದ್ದ ಮೇಲೆ ಮೆರೆತುಬಿಡುತ್ತಿದ್ದಾವೆ. ಆದರೆ, ಬಿಎಸ್ಪಿ ಸಂವಿಧಾನವನ್ನೇ ತನ್ನ ಪ್ರಣಾಳಿಕೆಯಾಗಿ ಘೋಷಿಸಿಕೊಂಡು ಕೆಲಸ ಮಾಡಲಿದೆ.
ಇಲ್ಲಿಯ ವರೆಗಿನ ಜನ ವಿರೋಧಿ ಸರ್ಕಾರಳಿಂದ ಬೇಸತ್ತ ಜನತೆ ಈ ಬಾರಿ ಬದಲಾವಣೆಗಾಗಿ ಬಿಎಸ್ಪಿ ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಜಿ.ಎಫ್. ಅಭ್ಯರ್ಥಿ ಕೋದಂಡರಾಮ್, ಬಂಗಾರಪೇಟೆಯ ರಮಣಕುಮಾರ್, ಕುಪ್ಪನಹಳ್ಳಿ ಆನಂದ, ಜಿಲ್ಲಾಧ್ಯಕ್ಷ ದಿಂಬಚಾಮನಹಳ್ಳಿ ಆನಂದ್ ಭಾಗವಹಿಸಿದ್ದರು.