PLACE YOUR AD HERE AT LOWEST PRICE
ನಾಳೆ ಬೆಳಿಗ್ಗೆ ಚಲನಚಿತ್ರ ನಾಯಕನಟ ಡಿ.ಬಾಸ್ ಖ್ಯಾತಿಯ ದರ್ಶನ್ ತೂಗುದೀಪ್ ರವರು ಬಂಗಾರಪೇಟೆ ಪಟ್ಟಣದಲ್ಲಿ ರೋಡ್ ಶೋ ಮೂಲಕ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಎಂದು ಮಾಜಿ ಶಾಸಕ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಮಾಹಿತಿ ನೀಡಿದರು.
ಪಟ್ಟಣದ ಕೆ.ಸಿ.ಆರ್ ಕಛೇರಿಯಲ್ಲಿ ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿದ ಅವರು ದರ್ಶನ್ ರವರಿಗೆ ಬಂಗಾರಪೇಟೆ ಕ್ಷೇತ್ರದಲ್ಲಿ ಸುಮಾರು 50 ಸಾವಿರ ಅಭಿಮಾನಿಗಳಿದ್ದು ನಮ್ಮ ಪಕ್ಷದ ಕಾರ್ಯಕರ್ತರ ಜೊತೆ ಅವರೂ ರೋಡ್ ಶೋಗೆ ಸೇರಿಕೊಳ್ಳಲಿದ್ದಾರೆಂದು ಹೇಳಿದರು.
ದರ್ಶನ್ ರವರು ಪಟ್ಟಣದ ಕೋಲಾರ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪ್ರಚಾರಕ್ಕೆ ಚಾಲನೆ ನೀಡಲಿದ್ದು, ಬಿಜೆಪಿ ಪಕ್ಷದ ಕಾರ್ಯರ್ತರು ಮತ್ತು ದರ್ಶನ್ ರವರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ರೋಡ್ ಶೋಗೆ ಬರಬೇಕೆಂದು ಕೋರಿದರು.
ಮುಂದಿನ ದಿನಗಳಲ್ಲಿ ಬಿಜೆಪಿ ಪರ ಪ್ರಚಾರಕ್ಕೆ ಇನ್ನಷ್ಟು ಫಿಲಂ ಸ್ಟಾರ್ ಗಳನ್ನು ಕರೆಸಲಾಗುವುದು. ದರ್ಶನ್ ರವರನ್ನು ಪ್ರಥಮವಾಗಿ ಕರೆಸಲಾಗುತ್ತಿದೆ. ಮುಂದೆ ಬೇರೆ ಬೇರೆ ಫಿಲಂ ಸ್ಟಾರ್ ಗಳು ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಲಿದ್ದಾರೆ ಎಂದರು.
ದರ್ಶನ್ ರವರ ಅಭಿಮಾನಿಗಳ ಆಸೆಯಂತೆ ಅವರನ್ನು ಕರೆಸುತ್ತಿದ್ದೇವೆ. ಈ ರೋಡ್ ಶೋನಲ್ಲಿ ಬಿಜೆಪಿ ಪಕ್ಷದ ಎಲ್ಲಾ ನಾಯಕರೂ ನಾಳೆ ನಡೆಯುವ ಕರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಜಾರ್ ರಸ್ತೆ ಮೂಲಕ ರೋಡ್ ಶೋ ನಡೆಯಲಿದೆ ಎಂದರು.
ಇದೇ ತಿಂಗಳ 30ರಂದು ಭಾನುವಾರ ಕೋಲಾರದ ಕೆಂದಟ್ಟಿ ಗೇಟ್ ಬಳಿ ನಡೆಯಲಿರುವ ಮತ ಪ್ರಚಾರ ಕಾರ್ಯಕ್ರಮಕ್ಕೆ ಪ್ರಧಾನ ಮಂತ್ರಿ ವಿಶ್ವಗುರು ಎನಿಸಿಕೊಂಡಿರುವ ನರೇಂದ್ರ ಮೋದಿರವರು ಆಗಮಿಸಲಿದ್ದು, ಹೆಚ್ಚಿನ ಜನ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮುಖಂಡರಾದ ಕೆ.ಚಂದ್ರಾರೆಡ್ಡಿ, ಬಿ.ವಿ.ಮಹೇಶ್, ಶೇಷು, ಹೊಸರಾಯಪ್ಪ, ನಾಗೇಶ್, ಮಾಗೇರಿ ನಾರಾಯಣಸ್ವಾಮಿ ಮೊದಲಾದವರಿದ್ದರು.