• Tue. May 21st, 2024

PLACE YOUR AD HERE AT LOWEST PRICE

ಮುಳಬಾಗಿಲು:ಸಮಾಜದಲ್ಲಿ ಪ್ರತಿಯೊಬ್ಬ ಪೋಷಕರೂ ಜವಾಬ್ದಾರಿಯಿಂದ ವರ್ತಿಸುತ್ತಾ ಬಾಲ ಕಾರ್ಮಿಕತೆಗೆ ಕಡಿವಾಣ ಹಾಕಬೇಕಾಗಿದೆ, ಯಾರಾದರೂ ಬಾಲ ಕಾರ್ಮಿಕತೆಗೆ ಕುಮ್ಮುಕ್ಕು ನೀಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ರಕ್ಷಣಾಧಿಕಾರಿ ಎಂ.ನಾರಾಯಣ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು, ಪ್ರಸ್ತುತ ಸಮಾಜದಲ್ಲಿ ಬಡತನ, ಆರ್ಥಿಕ ಮುಗ್ಗಟ್ಟು, ವಿದ್ಯಾಭ್ಯಾಸದ ಕೊರತೆಯಿಂದಲೇ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದ್ದು ಕೇವಲ ಕಾರ್ಯಕ್ರಮಗಳ ಆಚರಣೆಯಿಂದ ಬಾಲಕಾರ್ಮಿಕತೆ ಹೋಗಲಾಡಿಸಲು ಸಾಧ್ಯವಿಲ್ಲ.

ಸರ್ಕಾರ ಮಕ್ಕಳ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದರೂ ಪೋಷಕರು ತಮ್ಮ ಮಕಳನ್ನು ಶೈಕ್ಷಣಿಕವಾಗಿ ದೂರವಿರಿಸಿ ದುರುಪಯೋಗ ಪಡಿಸಿಕೊಳ್ಳುತ್ತಿರುವುದರಿಂದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಪೋಷಕರು ಕುಟುಂಬ ಪೋಷಣೆಗಾಗಿ ೧೪ ವರ್ಷ ಒಳಗಿನ ಮಕ್ಕಳನ್ನು ಶೈಕ್ಷಣಿಕವಾಗಿ ವಂಚಿತಗೊಳಿಸಿ ಹೋಟೆಲ್, ಬೆಂಕಿ ಪೆಟ್ಟಿಗೆ ಕಾರ್ಖಾನೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ದುಡಿಯಲು ಹಾಕುತ್ತಿರುವುದರಿಂದ ಬಾಲಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ.

ಪೋಷಕರು ತಮ್ಮ ಮಕ್ಕಳೊಂದಿಗೆ ಅಕ್ಕ-ಪಕ್ಕದ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳುವುದನ್ನು ತಪ್ಪಿಸಲು ಅಧಿಕಾರಿಗಳೊಂದಿಗೆ ಜನಸಾಮಾನ್ಯರೂ ಸಮಾಜದಲ್ಲಿ ಜವಾಬ್ದಾರಿಯಿಂದ ವರ್ತಿಸಬೇಕಾಗಿದೆ, ಸ್ವಾತಂತ್ರ್ಯ ಬಂದು ೭೬ ವರ್ಷಗಳಾದರೂ ಇಡೀ ವಿಶ್ವದಲ್ಲಿಯೇ ಶೇ.೪೦ರಷ್ಟು ಬಾಲಕಾರ್ಮಿಕರು ಹಲವಾರುಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ.

ಇಂತಹ ಪಿಡುಗನ್ನು ಹೋಗಲಾಡಿಸಲು ಸಂವಿಧಾನದ ಮುಖಾಂತರ ಹಲವಾರು ಕಾನೂನುಗಳನ್ನು ರಚಿಸಲಾಗಿದ್ದರೂ ಕಾನೂನಿನ ತೀಕ್ಷ್ಣತೆ ಹಾಗೂ ಪರಿಣಾಮಗಳ ಕುರಿತು ವಿವಿಧ ಕಾರ್ಖಾನೆ ಮಾಲೀಕರು, ಹೋಟೆಲ್‌ಗಳು, ಬೇಕರಿಗಳು ಹಾಗೂ ಪೋಷಕರಿಗೆ ಅರಿವಿದ್ದರೂ ತಮ್ಮ ಹಿತಾಸಕ್ತಿಗಾಗಿ ಬಾಲಕಾರ್ಮಿಕರನ್ನು ದುಡಿಮೆಗೆ ಬಳಸಿಕೊಳ್ಳುತ್ತಿರುವುದು ಕಾನೂನು ಬಾಹಿರವಾಗಿದ್ದು ಇನ್ನು ಮುಂದೆ ಇದೇ ರೀತಿ ಮುಂದುವರೆದಲ್ಲಿ ಶಿಕ್ಷಾರ್ಹ ದಂಡನೆಗೆ ಗುರಿಯಾಗಬೇಕಾದೀತೆಂದು ಎಚ್ಚರಿಕೆ ನೀಡಿದ್ದಾರೆ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!