• Sat. May 18th, 2024

ಗದ್ದರ್ ಅಣ್ಣಾ, ಕವಿದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ:ಪ್ರೊ.ಚಂದ್ರಶೇಖರ ನಂಗಲಿ.

PLACE YOUR AD HERE AT LOWEST PRICE

ಗದ್ದರ್ ಅಣ್ಣಾ, ದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ:ಪ್ರೊ.ಚಂದ್ರಶೇಖರ ನಂಗಲಿ.

 ಬಡ ರೈತರ ನೊಗಕ್ಕೆ ಹೆಗಲು ಕೊಟ್ಟ

ಬಡ ಎತ್ತುಗಳ ಕೊರಳ ಕಿಂಕಿಣಿ ಪಟ್ಟಿಯನ್ನು

ಕಾಲಿನ ಕಿರುಗೆಜ್ಜೆಯಾಗಿ ಕಟ್ಟಿ ಕುಣಿಯುತ್ತಾ

ಕೇಕೆ ಹಾಕುತ್ತಾ ಆಳುವವವರ ಕಣ್ಣಿಗೆ ಧೂಳೆಬ್ಬಿಸುತ್ತಾ

ಶ್ರಮಜೀವಿಗಳ ಮನೋರಂಗಭೂಮಿಯಲ್ಲಿ

ನವಕ್ರಾಂತಿಯ ಗಾನವನ್ನು ಮೊಳಗಿಸಿದ ಗದ್ದರ್ !

 

ಓದು ಬರಹ ಗೊತ್ತಿಲ್ಲದ, ಅಡವಿ ಗ್ರಾಮದ

ನಡಮಂತರಂ ಯಾನಾದುಲ ಆತ್ಮಬಂಧುವಾಗಿ

ಮುಗ್ದಜನರ ದಗ್ಧಬದುಕಿನ ಬವಣೆಗಳನ್ನೇ

ಹಾಡು ಕಟ್ಟಿ ಕಣ್ತೆರೆಸಿದ, ಕಣ್ಣೊರೆಸಿದ,

ಕಪ್ಪುಕಂಬಳಿ ಹೊದ್ದುಕೊಂಡ ಕೆಂಪುಕರವಸ್ತ್ರವೇ!

ಜನರ ನಾಲಿಗೆಯಲ್ಲೇ ಹಾಡಿದ ಕೆಂಪುಗುಂಡಿಗೆಯೇ !

 

ಕೂಲಿಜನರು, ರೈತಾಪಿಗಳು, ಪೀಡಿತರು,

ಪೌರುಷ ಸಂತ್ರಸ್ತ ಮಹಿಳೆಯರು, ಬಾಲಕಾರ್ಮಿಕರು,

ದೀನರು, ಹೀನರು ನಾನಾಬಗೆಯ ಮೂಕಜೀವಿಗಳಿಗೆ

ದಿಟ್ಟ ಧ್ವನಿಯಾಗಿ ಉಳ್ಳವರ ಎದೆಯಲ್ಲಿ ನಡುಕ

ಹುಟ್ಟಿಸಿದ ಉಗ್ರ ನರಸಿಂಹ ರೂಪಿಯಾದ ಗದ್ದರ್ !

ಬೆವರನ್ನು ತಬ್ಬಿಕೊಂಡು ಉಬ್ಬಿದ ವಕ್ಷಸ್ಥಲವೇ !

 

ಅರುಣ ಸೂರ್ಯನಾಗಿ ಹುಟ್ಟಿ ಕೆಂಪುಸೂರ್ಯನಾಗಿ

ದೇಶ ದೇಶಗಳನು ಮೆಟ್ಟಿದ ಅಜ್ಞಾನ ತಿಮಿರದಹನವೇ !

ಮಧ್ಯಾಹ್ನದ ಸುಡುಬಿಸಿಲು ಇಳಿದು ಸಂಜೆಸೂರ್ಯನಾಗಿ ಗಿರಿಶಿಖರಗಳ ಮಧ್ಯೆ ಕಾಣದಾಗಿ ಕಣ್ಮರೆಯಾದೆಯಾ ?

ಕವಿದ ಕತ್ತಲೆಯಲ್ಲಿ ಎತ್ತ ಹೊರಳಿದೆಯೋ ಅಣ್ಣಾ ?

ನಮ್ಮೆಲ್ಲರ ಭಾವಜಲಕ್ಕೆ ನಿನ್ನ ಹಾಡುಗಳೇ ಸುಣ್ಣಾ !

ಪ್ರೊ:ವಿ.ಚಂದ್ರಶೇಖರ ನಂಗಲಿ.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!