PLACE YOUR AD HERE AT LOWEST PRICE
ಬಂಗಾರಪೇಟೆ:ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಬಂಗಾರಪೇಟೆಯಿಂದ ಕೋಲಾರಕ್ಕೆ ಬೆಳಗಿನ ವೇಳೆ ಹೆಚ್ಚುವರಿ ಕೆ.ಎಸ್.ಆರ್.ಟಿ.ಸಿ ಬಸ್ಗಳನ್ನು ನಿಯೋಜನೆ ಮಾಡಲು ಕರ್ನಾಟಕ ದಲಿತ ರೈತಸೇನೆ ಅದ್ಯಕ್ಷ ಹುಣಸನಗಹಳ್ಳಿ ವೆಂಕಟೇಶ್ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಅವರು ಮಾತನಾಡಿ, ಆಂದ್ರ, ತಮಿಳುನಾಡುಗೆ ಹೊಂದಿಕೊಂಡಿರುವ ಗಡಿಭಾಗದ ತಾಲ್ಲೂಕಾದ ಬಂಗಾರಪೇಟೆಯಿಂದ ವಿದ್ಯಾರ್ಥಿಗಳು ಹೆಚ್ಚಿನ ವಿದ್ಯಾಭ್ಯಾಸಕ್ಕೆ ಕೋಲಾರಕ್ಕೆ ಹೋಗುತ್ತಿದ್ದು, ಪ್ರತಿನಿತ್ಯ ಬೆಳಿಗ್ಗೆ 7ಗಂಟೆಯಿಂದ 9ಗಂಟೆಯವರೆಗೂ ಬಸ್ಸುಗಳ ಸೌಲಭ್ಯ ಕಡಿಮೆ ಇದೆ.
ಬಳ್ಳಾರಿ ಎಕ್ಸ್ಪ್ರೆಸ್, ಮಂತ್ರಾಲಯ ಎಕ್ಸ್ಪ್ರೆಸ್ಗಳು ಹಾಗೂ ಇತರೆ ಮಾರ್ಗಗಳಿಗೆ ಬಸ್ಸುಗಳು ಚಲಿಸುತ್ತಿದ್ದು, ಈ ಪೈಕಿ ಕೆಜಿಎಫ್ ಡಿಪೋದಿಂದಲೇ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಬಂಗಾರಪೇಟೆ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿಯೇ ಬಸ್ಗಳು ತುಂಬಿರುತ್ತವೆ.
ಈ ಕಾರಣದಿಂದ ವಿದ್ಯಾರ್ಥಿಗಳು ಪ್ರಯಾಣಿಸಲಾಗದೆ ತುಂಬಾ ಹರಸಾಹಸ ಪಡುತ್ತಿದ್ದಾರೆ. ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ಬೆಳಗಿನ ವೇಳೆ ಹೆಚ್ಚುವರಿ ಬಸ್ಗಳನ್ನು ಬಂಗಾರಪೇಟೆಯಿಂದ ಕೋಲಾರಕ್ಕೆ ನಿಯೋಜನೆ ಮಾಡಲು ಮನವಿ ಮಾಡಿದರು.
ಈ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಬೇಕು, ನಮ್ಮ ಮನವಿಯನ್ನು ಪುರಸ್ಕರಿಸದಿದ್ದಲ್ಲಿ ತಾಲ್ಲೂಕಿನ ದಲಿತ, ರೈತ, ಕನ್ನಡಪರ, ಪ್ರಗತಿಪರ ಸಂಘಟನೆಗಳೊಟ್ಟಿಗೆ ಬಂಗಾರಪೇಟೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಐತಾಂಡಹಳ್ಳಿ ಮಂಜುನಾಥ್, ಕೀಲುಕೊಪ್ಪ ಮುನಿರಾಜು, ಹುಳದೇನಹಳ್ಳಿ ವೆಂಕಟೇಶ್, ಹುಣಸನಹಳ್ಳಿ ಸತೀಶ್ಕುಮಾರ್, ವರದರಾಜು, ಹಾಗೂ ಇತರರು ಇದ್ದರು.