• Sat. May 18th, 2024

PLACE YOUR AD HERE AT LOWEST PRICE

ಕೆಜಿಎಫ್:ಬೇತಮಂಗಲ ಹೊರ ವಲಯದ ಕೆಜಿಎಫ್ ಮುಖ್ಯ ರಸ್ತೆಯ ಪಕ್ಕದಲ್ಲಿನ ಗೋಸಿನ ಕೆರೆಯಲ್ಲಿ ಮೀನು ಪಾಶುಪಾರು ಹಕ್ಕು ಬೇತಮಂಗಲ ಇತಿಹಾಸದಲ್ಲಿಯೇ ಮೊದಲ ಭಾರಿಗೆ ಅತಿಹೆಚ್ಚು ೨೩.೧೦ಲಕ್ಷಕ್ಕೆ ಹರಾಜು ಆಗುವ ಮೂಲಕ ಗ್ರಾಪಂಗೆ ಉತ್ತಮ ಆದಾಯ ಸಂಗ್ರಹವಾಗಿದೆ.

ಗ್ರಾಪಂಯ ಅವರಣದಲ್ಲಿ ಗುರುವಾರ ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್ ಅಧ್ಯಕ್ಷತೆಯಲ್ಲಿ ನಡೆದ ಮೀನು ಪಾಶುವಾರು ಬಹಿರಂಗ ಹರಾಜಿನಲ್ಲಿ ಗೋಸಿನ ಕೆರೆ ೨ವರ್ಷಗಳ ಅವಧಿಗೆ ಬರೊಬ್ಬರಿಯಾಗಿ ೨೩.೧೦ಲಕ್ಷದ ಮೊತ್ತಕ್ಕೆ ಹರಾಜು ನೀಡಲಾಗಿದೆ.

ಗೋಸಿನಕೆರೆಯ ಮೀನು ಪಾಶುವಾರು ಬಹಿರಂಗ ಹರಾಜಿನಲ್ಲಿ ಸುಮಾರು ೪೮ ಮಂದಿ ಮುಂಗಡ ಹಣವನ್ನು ಪಾವತಿ ಮಾಡುವ ಮೂಲಕ ಹರಾಜಿನಲ್ಲಿ ಭಾಗವಹಿಸಿದ್ದರು.  ಹಿಂದಿನ ೨ವರ್ಷಗಳ ಅವಧಿಯನ್ನು ೬ಲಕ್ಷಕ್ಕೆ ಹರಾಜು ನೀಡಲಾಗಿತ್ತು.

ಈ ಮುಂದಿನ ೨ವರ್ಷಗಳ ಅವಧಿಗೆ ನಡೆದ ಹರಾಜಿನಲ್ಲಿ ೨೩.೧೦ಲಕ್ಷಕ್ಕೆ ಬೀಟ್ ಕರೆಯುವ ಮೂಲಕ ಗ್ರಾಪಂಗೆ ಹೆಚ್ಚು ಆದಾಯ ತಂದುಕೊಡುವಲ್ಲಿ ಮೀನುಗಾರರು ಸಹಕಾರ ನೀಡಿದ್ದಾರೆ.

ಬೇತಮಂಗಲ ಗ್ರಾಮದ ಮೀನು ವ್ಯಾಪಾರಿ ಗಲೀಬ್ ಶರೀಫ್ ಅವರು ೨ ವರ್ಷಗಳ ಮೀನು ಪಾಶುವಾರು ಹಕ್ಕನ್ನು ಬಹಿರಂಗ ಹರಾಜಿನಲ್ಲಿ ೨೩.೧೦ಲಕ್ಷಕ್ಕೆ ಪಡೆಯುವ ಮೂಲಕ ಠೇವಣಿದಾರರ ಹಾಗೂ ಗ್ರಾಪಂಯ ಆಡಳಿತ ಮಂಡಳಿಗೆ ಆಚ್ಚರಿ ಮೂಡಿಸಿದ್ದಾರೆ.

೨೩.೧೦ಲಕ್ಷಕ್ಕೆ ಹರಾಜು ಪಡೆದ ಶರೀಫ್ ಅವರನ್ನು ಗ್ರಾಪಂಯ ಆಡಳಿತ ಮಂಡಳಿ ಹಾಗೂ ಸ್ಥಳೀಯ ಮುಖಂಡರು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.

ಗ್ರಾಪಂ ಅಧ್ಯಕ್ಷ ವಿನೂ ಕಾರ್ತಿಕ್ ಮಾತನಾಡಿ, ಗ್ರಾಪಂ ವ್ಯಾಪ್ತಿಗೆ ಬರುವಂತಹ ಗೋಸಿನಕೆರೆಯಲ್ಲಿ ಮೀನು ಪಾಶುವಾರು ಹಕ್ಕನ್ನು ಬಹಿರಂಗವಾಗಿ ಪಕ್ಷಾತೀತವಾಗಿ ಹರಾಜು ನಡೆಸಿದ ಹಿನ್ನಲೆ ಗ್ರಾಪಂಗೆ ಉತ್ತಮ ಆದಾಯ ಸಂಗ್ರಹವಾಗಿದೆ. ಗ್ರಾಪಂಯ ಹಳೆಯ ಕಟ್ಟದ ಜಾಗದಲ್ಲಿ ವಾಣಿಜ್ಯ ಕಟ್ಟಡ ಸೇರಿದಂತೆ ಗ್ರಾಮದ ಅಭಿವೃದ್ಧಿಗೆ ಹರಾಜಿನ ಹಣವನ್ನು ಬಳಸಿಕೊಳ್ಳಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಲುವೇಲಮ್ಮ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷರು, ಸದಸ್ಯರು, ಸ್ಥಳೀಯ ಮುಖಂಡರು ಹಾಗೂ ಮೀನುಗಾರರು ಭಾಗವಹಿಸಿದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!