PLACE YOUR AD HERE AT LOWEST PRICE
ಕೆ. ಜಿ. ಎಫ್ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಮಾಜ ಸೇವಕ ಮೋಹನ ಕೃಷ್ಣರಿಂದ 17 ಡೇಸ್ಕ್ ಕೊಡುಗೆ.
ಕೆಜಿಎಫ್ ನಗರದ ಪೊಟ್ಟೇಪಲ್ಲಿ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಡೆಸ್ಕ್ಗಳ ಅಗತ್ಯವನ್ನು ಮನಗಂಡ ಸಮಾಜಸೇವಕ ಮೋಹನ ಕೃಷ್ಣ ತಮ್ಮ ಸ್ವಂತ ಹಣದಿಂದ 17 ಡೆಸ್ಕ್ಗಳನ್ನು ಕೊಡುಗೆಯಾಗಿ ನೀಡಿದರು.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಉಚಿತ ನೋಟ್ ಬುಕ್ ವಿತರಣೆ ಮಾಡುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕುಳಿತುಕೊಳ್ಳಲು ಡೆಸ್ಕ್ ಇಲ್ಲದೆ ಅವ್ಯವಸ್ಥೆ ಬಗ್ಗೆ ಗಮನಿಸಿ ನೀಡಿದ ಭರವಸೆಯಂತೆ ಇಂದು 17 ಡೆಸ್ಕ್ ಗಳನ್ನು ಕೊಡುಗೆಯಾಗಿ ನೀಡಿದರು.
ಈ ವೇಳೆ ಬಿಜೆಪಿ ನಗರ ಘಟಕದ ಅಧ್ಯಕ್ಷ ಕಮಲನಾಥನ್, ಗ್ರಾಮಾಂತರ ಬಿಜೆಪಿ ಘಟಕದ ಅಧ್ಯಕ್ಷ ಜಯಪ್ರಕಾಶ್ ನಾಯ್ಡು, ಸರ್ಕಾರಿ ನೌಕರರ ಸಂಘದ ಮಾಜಿ ಅದ್ಯಕ್ಷ ರವಿರೆಡ್ಡಿ, ಕೃಷ್ಣಪ್ಪ ಮೊದಲಾದವರಿದ್ದರು.