• Sun. May 5th, 2024

ಪಡಿತರ ವಿತರಣೆಗೆ ಸೀಮಿತವಾಗಿದ್ದ ಸೊಸೈಟಿಗಳಿಗೆ ಕಾಯಕಲ್ಪ:ನಾಗಶೆಟ್ಟಿಹಳ್ಳಿಯಲ್ಲಿ ಶಾಸಕಿ ರೂಪಕಲಾ.

PLACE YOUR AD HERE AT LOWEST PRICE

 ಪಡಿತರ ವಿತರಣೆಗೆ ಸೀಮಿತವಾಗಿದ್ದ ಸೊಸೈಟಿಗಳಿಗೆ, ಡಿಸಿಸಿ ಬ್ಯಾಂಕ್‍ನ ಮೂಲಕ ಜೀವ ತುಂಬಿ ಆಧುನಿಕ, ಆರ್ಥಿಕವಾಗಿ ಸ್ಪರ್ಶವನ್ನು ನೀಡಲಾಗುತ್ತಿದೆ ಎಂದು ಶಾಸಕಿ ಎಂ.ರೂಪಕಲಾ ಹೇಳಿದರು.
ಅವರು ಕಮ್ಮಸಂದ್ರ ಗ್ರಾಪಂ ವ್ಯಾಪ್ತಿಯ ನಾಗಶೆಟ್ಟಿಹಳ್ಳಿ, ಕಮ್ಮಸಂದ್ರ, ಟಿ.ಗೊಲ್ಲಹಳ್ಳಿಯ ನಲ್ಲೂರು, ಶ್ರೀನಿವಾಸಸಂದ್ರ, ಘಟ್ಟುಮಾದಮಂಗಲ ಗ್ರಾಪಂಯ ಚೊಕ್ಕರ ಬಂಡೆ, ಕ್ಯಾಸಂಬಳ್ಳಿಯ ಬೂಚೇನಹಳ್ಳಿ ಗ್ರಾಮಗಳಲ್ಲಿ ಒಟ್ಟು 10 ಉಚಿತ ಬಸ್‍ಗಳನ್ನು ಓಂ ಶಕ್ತಿ ಮಾಲಾಧಾರೆಗಳಿಗೆ ವ್ಯವಸ್ಥೆ ಕಲ್ಪಿಸಿ ಮಾತನಾಡಿದರು.
 ಕ್ಷೇತ್ರದಲ್ಲಿ ಮಹಿಳೆಯರು ಸ್ವಯಂ ಉದ್ಯೋಗಳನ್ನು ಕಲ್ಪಿಸಿಕೊಂಡು ಸ್ವಾವಲಂಭಿ ಜೀವನ ರೂಪಿಸಿಕೊಳ್ಳಲು ಡಿಸಿಸಿ ಬ್ಯಾಂಕ್ ಮೂಲಕ ನೂರಾರು ಕೋಟಿ ಬಡ್ಡಿ ರಹಿತ ಸಾಲ ಒದಗಿಸಿದೆ. ಹಲವಾರು ವರ್ಷಗಳಿಂದ ಸೊಸೈಟಿಗಳು ಜೀವವಿಲ್ಲದೆ ನಷ್ಟದಲ್ಲಿ ತೊಡಗಿದ್ದವು.
 ಇಂತಹ ಸೊಸೈಟಿಗಳಿಗೆ ಶಕ್ತಿ ತುಂಬಿ ಮರು ಚಾಲ್ತಿ ನೀಡಲಾಗುತ್ತಿದ್ದು, ಕೇವಲ ಪಡಿತರ ವಿತರಣೆಯಲ್ಲಿದ್ದ ಸೊಸೈಟಿಗಳು ರೈತರಿಗೆ, ಮಹಿಳೆಯರಿಗೆ ಲಕ್ಷ್ಯಾಂತರ ರೂ., ಸಾಲ ನೀಡುವಷ್ಟು ಬೆಳೆದಿವೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಅ.ಮು ಲಕ್ಷ್ಮೀನಾರಾಯಣ್, ಕಮ್ಮಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ನಾಗರಾಜ್, ಬೇತಮಂಗಲ ಸೊಸೈಟಿ ಅಧ್ಯಕ್ಷ ಕಾರಿ ಪ್ರಸನ್ನ, ನಿರ್ದೇಶಕ ನಲ್ಲೂರು ಸುರೇಂದ್ರಗೌಡ, ಶಂಕರ್, ಮುಖಂಡರಾದ ಎನ್.ವಿ.ನಾಗಭೂಷನ್, ಅಯ್ಯಪಲ್ಲಿ ವೆಂಕಟೇಶ್ ರೆಡ್ಡಿ, ಕಮ್ಮಸಂದ್ರ ಓ.ಎಂ ಗೋಪಾಲ್,
ವಿಜಯರಾಘವ ರೆಡ್ಡಿ, ಬ್ಯಾಟರಾಯನಹಳ್ಳಿ ರಮೇಶ್, ದುರ್ಗಾಪ್ರಸಾದ್ ಮೊದಲಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!