• Tue. May 7th, 2024

ಸಣ್ಣ ಕಾಮಗಾರಿ ಒಟ್ಟುಗೂಡಿಸಿ ಟೆಂಡರ್ ಕರೆ ಆದೇಶ ರದ್ದುಗೊಳಿಸಲು ಬೆಸ್ಕಾಂ ಗುತ್ತಿಗೆದಾರರ ಸಂಘ ಆಗ್ರಹ

PLACE YOUR AD HERE AT LOWEST PRICE

ಸಣ್ಣ ಸಣ್ಣ ಕಾಮಗಾರಿಗಳನ್ನು ಒಟ್ಟುಗೂಡಿಸಿ ಬೃಹತ್ ಟೆಂಡರ್ ಕರೆಯುವ ಆದೇಶವನ್ನು ರದ್ದುಪಡಿಸಬೇಕು ಜೊತೆಗೆ ಜಿಲ್ಲೆಯಲ್ಲಿ ವಿದ್ಯುತ್ ಗುತ್ತಿಗೆದಾರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕೋಲಾರ ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಸದಸ್ಯರು ಒತ್ತಾಯಿಸಿದರು.

ಈ ಕುರಿತು ಸರಕಾರವನ್ನು ಒತ್ತಾಯಿಸಿದ ಗುತ್ತಿಗೆದಾರರು ಜಿಲ್ಲೆಯಲ್ಲಿ ಸುಮಾರು ೨೫೦ ಕ್ಕೂ ಹೆಚ್ಚು ವಿದ್ಯುತ್ ಗುತ್ತಿಗೆದಾರರು ಇದ್ದು ಸರಕಾರ ೨೦೧೩ ರಲ್ಲಿ ಸಣ್ಣ ಪ್ರಮಾಣದ ಕಾಮಗಾರಿಗಳಿಗೂ ಬಹುಕೋಟಿ ಗುತ್ತಿಗೆದಾರರಿಗೆ ನೀಡುವ ಮೂಲಕ ಸಣ್ಣ ಗುತ್ತಿಗೆದಾರರನ್ನು ಬೀದಿಪಾಲು ಮಾಡಿದ್ದಾರೆ ಸ್ಥಳೀಯರಿಗೆ ಕಾಮಗಾರಿಗಳನ್ನು ನೀಡದೇ ಜನಪ್ರತಿನಿಽಗಳು ನಮ್ಮನ್ನು ನಿರ್ಲಕ್ಷ್ಯ ತೋರಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯಾದ್ಯಂತ ಇರುವ ಗುತ್ತಿಗೆದಾರರು ೫ ಲಕ್ಷದೊಳಗಿನ ಮೊತ್ತದ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಈಗಾಗಲೇ ಯೋಜನೆಗಳ ಕಾಮಗಾರಿಗಳಿಗೆ ಬಿಲ್‌ಗಳಿಗೆ ಬಜೆಟ್ ನಲ್ಲಿ ಬಿಡುಗಡೆಗೊಳಿಸಬೇಕು ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ತತ್ಕಾಲ್ ಯೋಜನೆ ಅಡಿಯಲ್ಲಿ ನೀಡುತ್ತಿದ್ದ ಅನುದಾನ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಲಕ್ಷಾಂತರ ರೈತರಿಗೆ ಅನಾನುಕೂಲವಾಗಿದೆ ಸರಕಾರ ಏಕರೂಪದ ಕೆಇಆರ್‌ಸಿ ನಿಯಮವನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯ ವಿದ್ಯುತ್ ಗುತ್ತಿಗೆದಾರರು ವಿವಿಧ ಇಲಾಖೆಗಳಾದ ಲೋಕೋಪಯೋಗಿ ಇಲಾಖೆ, ನೀರಾವರಿ ನಿಗಮ ಪಂಚಾಯತ್ ರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿವಿಲ್ ಕಾಮಗಾರಿಗಳ ನಡೆಸುತ್ತಾ ಇದ್ದು ಗುತ್ತಿಗೆದಾರರು ಕೂಡ ಕೂಲಿ ಕಾರ್ಮಿಕರ ರೀತಿಯಲ್ಲಿ ಕೆಲಸ ಮಾಡಿದರು ನಮ್ಮ ಕಷ್ಟ ಹೇಳಿಕೊಳ್ಳಲು ಆಗುತ್ತಾ ಇಲ್ಲ ಸರಕಾರ ಮತ್ತು ಜನಪ್ರತಿನಿಽಗಳು ನಮ್ಮ ಸಮಸ್ಯೆಗಳ ಬಗ್ಗೆ ಆಲಿಸಿ ಪರಿಹಾರ ಮಾಡಲಿ ಎಂದು ಒತ್ತಾಯಿಸಿದರು.

ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಡಿ ಗಣೇಶ್ ಪ್ರಸಾದ್, ಡಿ.ಎಲ್ ರಮೇಶ್ ಬಾಬು, ಚಂದ್ರಪ್ಪ, ಮಿಜಾಮಿಲ್, ಲೈಕ್ ಅಹಮದ್, ಶ್ರೀಧರ್, ಪ್ರಕಾಶ್, ಅಂಜಿನಪ್ಪ, ಅನ್ವರ್ ಪಾಷ, ನಾರಾಯಣಸ್ವಾಮಿ, ನಾರಾಯಣಪ್ಪ ಮುಂತಾದವರು ಇದ್ದರು.

 

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!