• Sat. May 18th, 2024

೩೦ ವರ್ಷಗಳ ನಂತರ ಪ್ರೀತಿಯ ಮೇಷ್ಟ್ರಿಗೆ ಗುರುವಂದನೆ ಸಲ್ಲಿಸಿದ ಹಳೇ ವಿದ್ಯಾರ್ಥಿಗಳು

PLACE YOUR AD HERE AT LOWEST PRICE

 

೩೦ ವರ್ಷಗಳ ನಂತರ ತಮಗೆ ವಿದ್ಯೆ ಕಲಿಸಿದ ಗುರುಗಳನ್ನು ಭೇಟಿ ಮಾಡಿದ ಕೋಲಾರದ ಸಿದ್ದಾರ್ಥ ಪ್ರೌಡಶಾಲೆಯ ಹಳೆದ ವಿದ್ಯಾರ್ಥಿಗಳನ್ನು ಕಂಡು ಸಂತಸಗೊಂಡ ಮೇಷ್ಟುಗೆ ವಿದ್ಯಾರ್ಥಿಗಳು ಪ್ರೀತಿಯಿಂದ ಸನ್ಮಾನಿಸಿದರು.

ಭಾನುವಾರ ಬೆಳಿಗ್ಗೆ ಕೋಲಾರ ನಗರದ ಸಿದ್ಧಾರ್ಥ ಪ್ರೌಡಶಾಲೆಯ ನಿವೃತ್ತ ಶಿಕ್ಷಕ ವಿ. ನಾರಾಯಣ್ ರವರು ಅನಾರೋಗ್ಯದಿಂದ ಇದ್ದಾರೆ ಎಂದು ತಿಳಿದುಕೊಂಡ ಸಿದ್ಧಾರ್ಥ ಪ್ರೌಡಶಾಲೆಯ ಹಳೇ ವಿದ್ಯಾರ್ಥಿಗಳು ಭಾನುವಾರ ಅವರು ವಾಸವಾಗಿರುವ ಕೋಲಾರ ತಾಲ್ಲೂಕಿನ ಮಣಿಘಟ್ಟ ರಸ್ತೆಯ ಚಿನ್ನಾಪುರದಲ್ಲಿರುವ ಅವರ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿ ಸಂತೈಸಿದರು.

ವಿದ್ಯಾರ್ಥಿಗಳಿಗೆ ವಿ.ಎನ್.ಎಂದೇ ಚಿರಪರಿಚಿತರಾದ ತಮ್ಮ ಪ್ರೀತಿಯ ಹಿಂದಿ ಮೇಷ್ಟುç ವಿ.ಎನ್. ದಂಪತಿಗಳಿಗೆ ಶಾಲು ಹೊದಿಸಿ ಮೈಸೂರು ಪೇಟಾ ಧರಿಸಿ ಹಣ್ಣು ಹಂಪಲು ಕೊಟ್ಟು ಅತ್ಯಂತ ಪ್ರೀತಿಗೌರವದೊಂದಿಗೆ ಗುರುನಮನ ಸಲ್ಲಿಸಿದರು. ಸನ್ಮಾನ ಸ್ವೀಕರಿಸಿದ ಗುರುಗಳು ಮಿತಭಾಷಿಕರಾಗಿದ್ದು, ಎಲ್ಲಾ ವಿದ್ಯಾರ್ಥಿಗಳನ್ನು ಸುಮಾರು ವರ್ಷಗಳ ನಂತರ ಕಂಡು ಸಂತಸಗೊಂಡು ಆರ್ಶೀವಾಧಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಸಿ.ಶ್ರೀರಾಮ, ಎಂ.ಸಂತೋಷ್, ವಿ.ಮಂಜುನಾಥ್, ಆರ್.ಅರುಣ್‌ಕುಮಾರ್, ಎಂ.ವಿ.ನರೇಂದ್ರಕುಮಾರ್, ವಿ.ರೇಣುಕುಮಾರ್, ಕೆ.ಮಂಜುನಾಥ್, ಹೆಚ್,ಬಾಲಾಜಿ, ಆರ್.ಮಂಜುಳಕುಮಾರಿ, ಬಿ.ಶೋಭಾ, ಶಾರದಾ, ಭಾರತಿ, ಎಸ್.ಶೋಭಾ, ವಿ.ಉಷಾರಾಣಿ, ಯಶೋಧ, ಅಶ್ವಿನಿ, ಯಶೋದ, ಲಕ್ಷ್ಮಿದೇವಿ, ನಾಗಮಣಿ ಇದ್ದರು.

Related Post

ಎಪಿಎಂಸಿ ಕಾರ್ಯದರ್ಶಿ ವಿಜಯಲಕ್ಷ್ಮಿ ವಜಾಗೊಳಿಸಲು ತರಕಾರಿ ಮಂಡಿ ಮಾಲೀಕರ ಒತ್ತಾಯ. ಆರೋಪ ನಿರಾಕರಿಸಿದ ಎಪಿಎಂಸಿ ಕಾರ್ಯದರ್ಶಿ
ಯರಗೋಳ್ ಗ್ರಾಮದಲ್ಲಿ “ದಿ 1979 ಅನ್ ಟೋಲ್ಡ್ ಸ್ಟೋರಿ” ಸಿನಿಮಾದ ಅಂತಿಮ ಚಿತ್ರೀಕರಣ
ಶಿಕ್ಷಕರ ಸಮಸ್ಯೆಗಳನ್ನು ಬಗೆಹರಸದೆ, ಶಿಕ್ಷಕರಿಗೆ ದ್ರೋಹವೆಸಗಿದ ಎಂ.ಎಲ್.ಸಿ. ವೈ.ಎ.ನಾರಾಯಣಸ್ವಾಮಿ : ರುಪ್ಸಾ ಅಧ್ಯಕ್ಷ ಹಾಗೂ ಪಕ್ಷೇತರ ಅಭ್ಯರ್ಥಿ ಲೋಕೇಶ್ ತಾಳಿಕಟ್ಟೆ ಆರೋಪ

Leave a Reply

Your email address will not be published. Required fields are marked *

You missed

error: Content is protected !!