• Wed. May 1st, 2024

ಕಳ್ಳಿಕುಪ್ಪ ಗ್ರಾಮದಲ್ಲಿ ಗಂಗಮ್ಮ ದೇವಾಲಯ ಪ್ರತಿಷ್ಠಾಪನೆ.

PLACE YOUR AD HERE AT LOWEST PRICE

ಬೇತಮಂಗಲ ಹೋಬಳಿ ಟಿ.ಗೊಲ್ಲಹಳ್ಳಿ ಗ್ರಾಪಂಯ ಕಳ್ಳಿಕುಪ್ಪ ಗ್ರಾಮದ ಗ್ರಾಮ ದೇವತೆ ಶ್ರೀ ಗಂಗಮ್ಮ ದೇವಾಲಯ, ಶ್ರೀ ಸತ್ಯಮ್ಮ ದೇವಿ, ಶ್ರೀ ಅಂಕಾಳಮ್ಮ ದೇವತೆಗಳ ನೂತನ ಬಿಂಬ ಪ್ರತಿಷ್ಟಾಪನಾ ಪೂಜಾ ಕೈಕರ್ಯಗಳು ಜ.24 ರಿಂದ ಜ.26ರವರೆಗೂ ನಡೆಯಲಿವೆ ಎಂದು ದೇವಾಲಯ ಸಮಿತಿಯ ಮುಖ್ಯಸ್ಥರು ತಿಳಿಸಿದ್ದಾರೆ.
ಕಳ್ಳಿಕುಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಂಗಮ್ಮ ದೇವಿ, ಸತ್ಯಮ್ಮ ದೇವಿ, ಅಂಕಾಳಮ್ಮ ದೇವಿಯ ದೇಗುಲಗಳ ಪ್ರತಿಷ್ಟಾಪನಾ ಪೂಜೆಗಳು ಮೃತಿಕಾ ಸಂಗ್ರಹಣ, ಗಣಪತಿ ಪೂಜೆ, ಗೋ ಪೂಜೆ, ವಾಸ್ತು ಹೋಮ, ಅಘೋರ ಅಸ್ತ್ರ ಹೋಮದ ಮೂಲಕ ಪ್ರಾರಂಭಗೊಳ್ಳಲಿವೆ.
ಕಳ್ಳಿಕುಪ್ಪ ಗ್ರಾಮಸ್ಥರು ಸುಮಾರು 1 ಕೋಟಿ ವೆಚ್ಚದಲ್ಲಿ ನೂತನವಾಗಿ ಸಂಪೂರ್ಣ ಕಲ್ಲಿನಿಂದಲೇ ನಿರ್ಮಿಸಿರುವ ದೇಗುಲವಾಗಿದೆ, ಸುತ್ತಮುತ್ತಲಿನ ಗ್ರಾಮಗಳಿಗೆ ದೊಡ್ಡ ದೇವಾಲಯ ಎಂದರೆ ತಪ್ಪಾಗಲಾರದು.
ನಾಳೆ ಬುಧವಾರ ಬೆಳಿಗ್ಗೆ ವೇದಪಾರಾಯಣ, ಗಣಪತಿ ಪೂಜೆ, ಕಳಶ ಸ್ಥಾಪನೆ, ಅಧಿತ್ಯಾತಿ ನವಗ್ರಹ ಆರಾಧನೆ, ಗ್ರಾಮ ದೇವತಾ ಆರಾಧನೆ, ಪ್ರತಿಷ್ಠಾಪನೆ, ಗಣಪತಿ ಹೋಮ, ನವಗ್ರಹ ಹೋಮ ಸೇರಿದಂತೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ.
ಗುರುವಾರ ಬೆಳಿಗ್ಗೆ ಶುಭ ಬ್ರಾಹ್ಮೀ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠಾಪನೆ, ಗಂಗಮ್ಮ ದೇವಾಲಯದ ಕಲಾ ಹೋಮ, ನವ ಚಂಡಿಕಾ ಹೋಮ, ಬಲಿಹರಣ ಮಹಾಪೂರ್ಣಾಹುತಿ, ಕುಂಭ ಅಭಿಷೇಕ, ಛಲ ಪಂಚಾಮೃತ ಅಭಿಷೇಕ, ಮಂಗಳ ದ್ರವ್ಯ ಅಭಿಷೇಕ, ಪುಪ್ಪ ಅಲಂಕಾರ ವಾದ್ಯ ಸೇವೆ ಹಾಗೂ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗದ ಮೂಲಕ ಪ್ರಾಣ ಪ್ರತಿಷ್ಠಾಪನಾ ಪೂಜಾ ಕೈಕರ್ಯಗಳು ಮುಕ್ತಾಯವಾಗಲಿವೆ.
ಗಂಗಮ್ಮ ದೇವಿಯ ಪ್ರಾಣ ಪ್ರತಿಷ್ಟಾಪನಾ ಪೂಜೆಗಳು ತುಮಕೂರು ಪ್ರಧಾನ ಆರ್ಚಕರಾದ ನಾಗರಾಜು ಸ್ವಾಮಿ, ಅಶ್ವಥ್ ನಾರಾಯಣ್, ರಾಘುವೇಂದ್ರ ಶರ್ಮ, ಅನಂತರಾಮು ಶರ್ಮ, ಸಾಯಿ ಸುಮಂತ್ ಶರ್ಮ, ನವೀನ್ ಶರ್ಮ, ಕೃಷ್ಣಮೂರ್ತಿ ಶರ್ಮ, ಸೂರ್ಯ ಪ್ರಕಾಶ ಶರ್ಮ, ಸಂತೋóಷ್ ಶರ್ಮ, ನಾಗೇಶ್ ಶರ್ಮ ತಂಡದಿಂದ ಪೂಜೆಗಳು ಮೂರು ದಿನಗಳ ಕಾಲ ಹೋಮ, ಹವನಗಳಿಂದ ನಡೆಯುತ್ತದೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!