PLACE YOUR AD HERE AT LOWEST PRICE
ಮಾಲೂರು ತಾಲ್ಲೂಕು ದಲಿತರು ಅತಿ ಹೆಚ್ಚಿ ಸಂಖ್ಯೆಯಲ್ಲಿ ವಾಸವಿರುವ ಜಯಮಂಗಲದಲ್ಲಿ ಇಂಗ್ಲೀಷ್ ಶಿಕ್ಷಕರಾಗಿ ಉತ್ತಮ ಕೆಲಸ ಮಾಡುತ್ತಿದ್ದ ಚಂದ್ರಮ್ಮ ಎಂಬವವರನ್ನು ವರ್ಗಾವಣೆ ಮಾಡಿರುವ ಶಿಕ್ಷಣ ಇಲಾಖೆಯ ವಿರುದ್ದ ವಿದ್ಯಾರ್ಥಿಗಳು ಮತ್ತು ಪೋಷಕರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಈ ವೇಳೆ ಶಾಲಾಭಿವೃದ್ಧಿ ಸಮಿತಿ ಅದ್ಯಕ್ಷರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಯುವಕರ ಸಂಘದ ಮುಖಂಡ ಹರೀಶ್ ಮಾತನಾಡಿ, ಉನ್ನತೀಕರಿಸಿದ ಜಯಮಂಗಲ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಇಂಗ್ಲೀಷ್ ಟೀಚರ್ ಚಂದ್ರಮ್ಮ ಎಂಬುವವರು ಹಿಂದಿಯನ್ನೂ ಸಹ ಕಲಿಸುತ್ತಿದ್ದರು. ಅವರಿಂದಾಗಿ ಶಾಲೆಯಲ್ಲಿ ವಿದ್ಯಾರ್ಥಿಗಳು ಉತ್ತಮವಾಗಿ ವ್ಯಾಸಂಗ ಮಾಡುತ್ತಿದ್ದರು.
ಈ ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ 74 ಮಕ್ಕಳು ಓದುತ್ತಿದ್ದು, 4 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಈಗ ದಿಢೀರನೆ ಇಂಗ್ಲೀಷ್ ಶಿಕ್ಷಕರನ್ನು ವರ್ಗಾವಣೆ ಮಾಡಿರುವ ಬಗ್ಗೆ ಶಿಕ್ಷಣ ಇಲಾಖೆಯ ಆದೇಶವಾಗಿದೆ. ಇಂಗ್ಲೀಷ್ ಶಿಕ್ಷಕರು ಈ ಶಾಲೆಗೆ ಅತೀ ಅಗತ್ಯ ಶಿಕ್ಷಕರಾಗಿದ್ದಾರೆ.
ಆದ್ದರಿಂದ ಈ ಕೂಡಲೆ ಶಿಕ್ಷಣ ಇಲಾಖೆ ಮಾಡಿರುವ ವರ್ಗಾವಣೆ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದ ಎಂದು ಎಚ್ಚರಿಸಿದರು.