PLACE YOUR AD HERE AT LOWEST PRICE
ಮುಂದಿನ ರಾಜ್ಯ ವಿಧಾನಸಭೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಇಲಾಖೆ ಅಧಿಕಾರಿಗಳು ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವ ನಿಟ್ಟಿನಲ್ಲಿ ಕರ್ತವ್ಯದಲ್ಲಿ ತೊಡಗಬೇಕು ಎಂದು ಅಬಕಾರಿ ಉಪ ಆಯುಕ್ತರು ರಮೇಶ್ ಕುಮಾರ್ ಹೇಳಿದರು.
ಕೆಜಿಎಫ್ ನಗರದ ಕ್ಲಬ್ ನಲ್ಲಿ ಹಮ್ಮಿಕೊಂಡಿದ್ದ ಅಬಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, ಅಬಕಾರಿ ಆಯುಕ್ತರು, ಬೆಂಗಳೂರು ರವರು ಸಭೆ ನಡೆಸಿ ನೀಡಿದ ಸೂಚನೆಗಳನ್ನು ಸಭೆಗೆ ವಿವರಿಸಿದರು.
ಜಂಟಿ ಆಯುಕ್ತರು, ಜಾ&ತ, ಬೆಂಗಳೂರು (ದಕ್ಷಿಣ) ನೀಡಿರುವ ಸೂಚನೆಗಳನ್ನು ಪಾಲಿಸುವ ನಿಟ್ಟಿನಲ್ಲಿ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಯವರ ಕರ್ತವ್ಯಗಳು ಕಡ್ಡಾಯವಾಗಿ ಅಧಿಕಾರಿ ಹಾಗೂ ಸಿಬ್ಬಂದಿ ಸನ್ನದು ಷರತ್ತುಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ತಿಳಿಸಿದರು.
2023ರ ವಿಧಾಸಭೆ ಚುನಾವಣೆಯು ಸನಿಹವಿದ್ದು ಅಕ್ರಮ ಮಾರಾಟ ಅಡ್ಡೆಗಳನ್ನು ಪತ್ತೆ ಹಚ್ಚಿ ಕ್ರಮ ವಹಿಸಬೇಕು ಅಬಕಾರಿ ನಿಯಮ ಮೀರಿ ಮಧ್ಯ ಸಾಗಟ ಮಾಡುವವರ ಮೇಲೆಯೂ ನಿಗ ವಹಿಸಿ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ವಿವರಿಸಿದರು.
ಸಭೆಯಲ್ಲಿ ಕೆಜಿಎಫ್ ಉಪ ವಿಭಾಗದ ಅಬಕಾರಿ ಉಪಾಧೀಕ್ಷಕರು, ನಿರೀಕ್ಷಕರು ಬಂಗಾರಪೇಟೆ ಮತ್ತು ಮುಳಬಾಗಿಲು ವಲಯದ ನಿರೀಕ್ಷಕರು, ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.