• Wed. May 8th, 2024

ಆರ್.ಪಿ.ಐ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆoಕಟಸ್ವಾಮಿಗೆ ಅಭಿನಂದನೆ

PLACE YOUR AD HERE AT LOWEST PRICE

ದೇಶದಲ್ಲಿ ಯಾವತ್ತು ದಲಿತರು ಗಾಂಧಿ ಕುಟುಂಬಕ್ಕೆ ಜೈ ಎನ್ನುವುದು ಬಿಟ್ಟು ಅಂಬೇಡ್ಕರ್ ಹೆಸರಿಗೆ ಜಿಂದಾಬಾದ್ ಕೂಗುತ್ತಾರೆ ಅವತ್ತು ರಾಜ್ಯ ಮತ್ತು ದೇಶವನ್ನು ದಲಿತರು ಅಳ್ವಿಕೆ ನಡೆಸುತ್ತಾರೆ ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಆರ್.ಪಿ.ಐ ಪಕ್ಷದ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆoಕಟಸ್ವಾಮಿ ತಿಳಿಸಿದರು

ನಗರದ ಹಳೆ ಬಸ್ ನಿಲ್ದಾಣದಲ್ಲಿ ಸೋಮವಾರ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಅಭಿನಂದನೆ ಸ್ವೀಕರಿಸಿ ಮಾತನಾಡಿ ಅವರು ದೇಶದಲ್ಲಿ ಸ್ವಾತಂತ್ರ‍್ಯ ಬಂದು ೭೫ ವರ್ಷಗಳಿಂದ ಕೂಡ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಜೀತವಾಗಿ ದುಡಿದಿದ್ದೇವೆ ದಲಿತರು ಕಾಂಗ್ರೆಸ್ ಪಕ್ಷಕ್ಕೆ ಗುಲಾಮರಾಗಿರುತ್ತೀರೋ ಅಥವಾ ಅಂಬೇಡ್ಕರ್ ವಾದಿಯಾಗಿರುತ್ತೀರೋ ನೀವೇ ನಿರ್ಧಾರ ಮಾಡಿಕೊಳ್ಳಿ ಎಂದು ಪ್ರಶ್ನಿಸಿದರು.

ಸಮಾಜದ ಎಲ್ಲಾ ವರ್ಗಗಳು ಪರಿವರ್ತನೆಗೊಂಡು ಅಂಬೇಡ್ಕರ್ ವಾದಿಗಳಾದಾಗ ಮಾತ್ರವೇ ಪ್ರಬುದ್ಧ ಭಾರತ ನಿರ್ಮಾಣವಾಗುತ್ತದೆ ಪ್ರತಿಯೊಂದು ಹಳ್ಳಿ ಹಳ್ಳಿಗಳಿಗೆ ನೀಲಿ ಬಾವುಟ ಹಿಡಿದು ನಾವು ಅಂಬೇಡ್ಕರ್ ವಾದಿ ಎಂದು ಹೇಳಿಕೊಂಡು ಹೋಗಬೇಕು ಹಿಂದಿನಿ0ದಲೂ ದಲಿತರು ಜೀತಗಾರರಾಗಿದ್ದರು. ನಾನು ಏಕೆ ಜೀತಗಾರನಾಗಬೇಕು ನಮ್ಮ ಪಕ್ಷದಲ್ಲಿ ಬೆಳೆದ ವ್ಯಕ್ತಿಗಳು ಅಂಬೇಡ್ಕರ್ ವಿರುದ್ಧ ಘೋಷಣೆ ಕೂಗುತ್ತಾರೆ ಎಂದರೆ ಅಂತಹ ವ್ಯಕ್ತಿಗಳನ್ನು ಗಡಿಪಾರು ಮಾಡಬೇಕು ಎಂದರು.

ಮು0ದಿನ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ವರ್ಧೆ ಮಾಡಲಿದ್ದಾರೆ ದಲಿತ ವಿರೋಧಿ ನೀತಿಗಳಿಂದ ಅವರು ಪ್ರಸಿದ್ಧರಾಗಿದ್ದು ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರನ್ನು ಇಷ್ಟಪಡುತ್ತೇನೆ ಆದರೆ ಅಹಿಂದ ಹುಟ್ಟು ಹಾಕಿದ್ದೇ ದಲಿತರು ಆದರೆ, ಅದನ್ನೇ ಸಿದ್ದರಾಮಯ್ಯ ಬಳಸಿಕೊಂಡು ಇವತ್ತು ಮಹಾನ್ ನಾಯಕರಾಗಿದ್ದಾರೆ ರಿಪಬ್ಲಿಕನ್ ಪಾರ್ಟಿಯ ಶಕ್ತಿಯನ್ನು ಮುಂದಿನ ೨೦೨೩ರ ಚುನಾವಣೆಯಲ್ಲಿ ತೋರಿಸಬೇಕಾಗಿದೆ.

ಜಿಲ್ಲೆಯಲ್ಲಿ ದಲಿತ ವಿರೋಧಿ ಸಿದ್ದರಾಮಯ್ಯ ಕರಪತ್ರಗಳನ್ನು ಬೆಂಬಲಿಸುತ್ತೇನೆ. ಸಿದ್ದರಾಮಯ್ಯ ಅವರನ್ನು ಗೆಲ್ಲಿಸಿದರೆ ದಲಿತರನ್ನು ತುಳಿಯುತ್ತಾರೆ ಸಿದ್ದರಾಮಯ್ಯ ಸ್ಪರ್ಧಿಸಿದರೆ ಹಠಾವೋ ಘೋಷಣೆ ಮೊಳಗಿಸಬೇಕು ಅವರನ್ನು ಇಲ್ಲಿಗೆ ಕರೆದ ದಲಿತ ಮುಖಂಡರನ್ನು ನಂಬಬೇಡಿ ನಮ್ಮ ಕೈಯಲ್ಲಿ ಕಾಂಗ್ರೆಸ್ ಸೋಲಿಸಲು ಆಗುತ್ತಿಲ್ಲ. ಹೀಗಾಗಿ, ನಾವು ಬಿಜೆಪಿಗೆ ಬೆಂಬಲ ನೀಡುತ್ತೇವೆ ಕಾಂಗ್ರೆಸ್ ಮುಕ್ತ ಭಾರತ ಬಿಜೆಪಿಯಿಂದ ಆಗಲಿದೆ ಅದಕ್ಕಾಗಿ ಕಾಂಗ್ರೆಸ್ ಮುಕ್ತ ಮಾಡಲು ಬಿಜೆಪಿಯೊಂದಿಗೆ ಬೆಂಬಲಿಸಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ ಸಂವಿಧಾನ ಆಶಯಗಳನ್ನು ಜಾರಿ ಮಾಡುವ ಮೂಲಕ ನೈಜ ವಾಸ್ತವ ಸ್ಥಿತಿಯನ್ನು ಜನಕ್ಕೆ ತಿಳಿಸಬೇಕಾಗಿದೆ ಸಮಾಜದ ಸುಧಾರಣೆಗಾಗಿ ಅಖಂಡ ಭಾರತದ ಘನತೆ ಗೌರವಗಳನ್ನು ಎತ್ತಿಹಿಡಿದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೌಲಭ್ಯಗಳನ್ನು ನೀಡುವಂತೆ ಆಗಲಿ ಎಂದರು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ರಾಜ್ಯ ಅಧ್ಯಕ್ಷ ದಲಿತ ನಾರಾಯಣಸ್ವಾಮಿ ಮಾತನಾಡಿ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಮಾಡಬೇಕು. ದಲಿತ ನಾಯಕರನ್ನು ದಮನ ಮಾಡಿದ ಮಹಾನ್ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಬೇಕು ದಲಿತ ದೌರ್ಭಾಗ್ಯ ಕೊಟ್ಟವರು ನಮ್ಮ ಜಿಲ್ಲೆಗೆ ಬಂದಿದ್ದಾರೆ ಜಿಲ್ಲೆಯ ಕೆಲ ದಲಿತ ನಾಯಕರು ಕಾಮಗಾರಿಗಳನ್ನು ಗುತ್ತಿಗೆ ಪಡೆಯಲು ಸಿದ್ದರಾಮಯ್ಯ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸಿ ಕಳುಹಿಸೋಣ ಎಂದರು.

ವೇದಿಕೆಯಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ನಾಯಕರಾದ ಎಂ ಲಗುಮಯ್ಯ, ಹೊಸಮನಿ, ಸುಬ್ಬರಾಯುಡು, ರವೀಂದ್ರನಾಥ್, ಅನುರಾಗ ಅಶೋಕ್, ವೆಂಕಟರಮಣಪ್ಪ ಜೆಡಿಎಸ್ ಮುಖಂಡರಾದ ಬಣಕನಹಳ್ಳಿ ನಟರಾಜ್, ಸುಧಾಕರ್ ಮುಂತಾದವರು ಇದ್ದರು.

 

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!