PLACE YOUR AD HERE AT LOWEST PRICE
ಬಿಜೆಪಿಯಿಂದ ಬೃಹತ್ ಯುವ ಸೇರ್ಪಡೆ ಹಾಗೂ ಸದಸ್ಯತ್ವ ಅಭಿಯಾನವನ್ನು ಕೋಲಾರ ತಾಲೂಕಿನ ನರಸಾಪುರ ಕೈಗಾರಿಕಾ ಪ್ರದೇಶದ ಜೋಡಿ ಕೃಷ್ಣಾಪುರ ಗೇಟ್ ಬಳಿ ಫೆ.೫ರ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಹಮ್ಮಿಕೊಂಡಿರುವುದಾಗಿ ಕೋಲಾರ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.
ಶನಿವಾರ ಕೋಲಾರ ನಗರದ ಡೂಂಲೈಟ್ ವೃತ್ತದ ಓಂಶಕ್ತಿ ಫೌಂಡೇಶನ್ ಕಚೇರಿಯಲ್ಲಿ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಅವರು, ಕಾರ್ಯಕ್ರಮಕ್ಕೆ ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್, ಸಂಸದ ಎಸ್.ಮುನಿಸ್ವಾಮಿ, ನಟ ಪ್ರಥಮ್ ಮತ್ತಿತರ ಗಣ್ಯರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
೧೫ ದಿನಗಳಿಂದ ೫ ಗ್ರಾಪಂಗಳ ವ್ಯಾಪ್ತಿಯಲ್ಲಿ ೨೫ ರಿಂದ ೩೦ ಹಳ್ಳಿಗಳಿಗೆ ಸಂಪರ್ಕ ಮಾಡಿದ್ದೇವೆ. ಪ್ರತಿ ಹಳ್ಳಿಯಲ್ಲೂ ಸಭೆಗಳನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿ, ಗ್ರಾಪಂ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ನಡೆಸಿ, ನಮ್ಮ ಶಕ್ತಿ ಏನೆಂದು ತೋರಿಸುತ್ತೇವೆ ಎಂದರು.
ಆಯುಷ್ಮಾನ್ ಭಾರತ್, ಇ-ಶ್ರಮ್ ಸೇವೆಗಳನ್ನು ನಮ್ಮ ಕಚೇರಿಯಲ್ಲಿಯೇ ಉಚಿತವಾಗಿ ಮಾಡಲಾಗುತ್ತಿದೆ. ಯುವಕರಿಗೆ ಅಪಘಾತ ವಿಮೆ ೨ ಲಕ್ಷರೂ ನೀಡುವ ಯೋಜನೆಗೆ ಸಂಬಂಧಿಸಿದಂತೆ ೧೨೦ ರೂಗಳನ್ನೂ ನಾವೇ ಕಟ್ಟಲಿದ್ದೇವೆ.
ದೇಶದಲ್ಲಿ ಬಿಜೆಪಿ ಅನಿವಾರ್ಯ ಎಂದು ತಿಳಿದಿದೆ. ಪ್ರತಿ ಹಳ್ಳಿಗೆ ಹೋದಾಗಲೂ ಯುವಕರು ಒಲವು ತೋರಿಸುತ್ತಿದ್ದಾರೆ. ಯುವಕರು, ಗ್ರಾಪಂ ಸದಸ್ಯರು ಸೇರ್ಪಡೆ. ಸಾವಿರಾರು ಮಂದಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಕೋಲಾರದಲ್ಲಿ ಇರುವ ಮತದಾರರು ಬ್ಯಾಟರಾಯನಪುರದ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ಈಗಾಗಲೇ ಪಕ್ಷದಿಂದ ಪೇಜ್ ಪ್ರಮುಖ್ ನೇಮಿಸಲಾಗಿದೆ. ಪರಿಷ್ಕರಣೆ ಮಾಡಲಿದ್ದಾರೆ. ಮೊದಲು ಮತ ಹಾಕುವವರು ಬಿಜೆಪಿ, ಮೋದಿಗೆ ಹಾಕುತ್ತಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಾಲಾಜಿ, ಮುಖಂಡರಾದ ನಾಮಾಲ್ ಮಂಜು, ಗೋವಿಂದು, ಮಮತ, ನವೀನ್, ಓಹಿಲೇಶ್, ಸಿಂಗ್, ಏಕಾಂತ್, ಮುನಿರಾಜು, ಹರೀಶ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ದಿ ಓದಿ ಹಂಚಿ: