PLACE YOUR AD HERE AT LOWEST PRICE
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಅಗಣ್ಯ
ಬೆಳೆಯುವ ಮರ ಮೊಳಕೆಯಲ್ಲೇ ಕಾಣುತ್ತೆ ಎಂಬoತೆ, ಇಲ್ಲೊಂದು ಪುಟ್ಟ ಮಗು ತನ್ನ ಎರಡನೇ ವಯಸ್ಸಿನಲ್ಲಿ ತನಗಿರುವ ನೆನಪಿನ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ಸಾಧನೆ ಮಾಡಿ ತೋರಿದ್ದಾಳೆ.
ಕೋಲಾರ ತಾಲ್ಲೂಕಿನ ಕಾಮದೇನಹಳ್ಳಿ ಗ್ರಾಮದ ಅಗಣ್ಯ ಎಸ್ .ಮೂರ್ತಿ (ಜನನ ಆಗಸ್ಟ್ ೨೧ ೨೦೨೦ )ರವರು ತಮ್ಮ ೨ ವರ್ಷ ೪ ತಿಂಗಳು ಅತಿ ಕಿರಿ ವಯಸ್ಸಿನಲ್ಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್-೨೦೨೨ ಗೆ ಸೇರುವ ಮೂಲಕ ಸಾಧನೆ ಮಾಡಿ ಜಿಲ್ಲೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ.
ಇವರು ಪ್ರಾಣಿ, ಪಕ್ಷಿ, ಹಣ್ಣುಗಳನ್ನು, ದಿನಗಳನ್ನು ಗುರುತಿಸುವುದರ ಮೂಲಕ ಸಾಧನೆ ಮಾಡಿದ್ದಾರೆ. ೮ ಬಣ್ಣಗಳನ್ನು ,೨೪ ಹಣ್ಣುಗಳನ್ನು ,೨೪ ಸಾಕು ಪ್ರಾಣಿಗಳನ್ನು, ೨೪ ಕಾಡುಪ್ರಾಣಿಗಳನ್ನು, ೧೬ ದೇಹದ ಅಂಗಗಳನ್ನು ,೮ಪಕ್ಷಿಗಳನ್ನು ,೨೪ ತರಕಾರಿಗಳನ್ನು ,೧೧ ಜಲಚರ ಪ್ರಾಣಿಗಳನ್ನು, ೨೦ ವಾಹನಗಳನ್ನು, ೧೭ ಪ್ರಸಿದ್ಧ ವ್ಯಕ್ತಿಗಳನ್ನು, ೭ ದಿನಗಳನ್ನು ,೭ ದೇಶದ ಚಿಹ್ನೆಗಳನ್ನು ಮತ್ತು ೧-೧೦ರ ಇಂಗ್ಲಿಷ್ ಸಂಖ್ಯೆಗಳನ್ನು ಗುರುತು ಹಿಡಿದಿದ್ದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್- ೨೦೨೨ ಗೆ ಸೇರಿರುವುದು ಅಭಿನಂದನೀಯ ಹಾಗೂ ಗಮನಾರ್ಹ ಬೆಳವಣಿಗೆಯಾಗಿದೆ.