PLACE YOUR AD HERE AT LOWEST PRICE
ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಅಽಕಾರಿಗಳು ಕೋಲಾರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ೬೯ ರೌಡಿ ಶೀಟರ್ಗಳು ಹಾಗೂ ೭೨ ಪುಡಿ ಕಳ್ಳರನ್ನು ಠಾಣೆಗೆ ಕರೆಯಿಸಿ ಅವರಿಂದ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವುದಿಲ್ಲ, ಶಾಂತಿ ಕದಡುವುದಿಲ್ಲವೆಂದು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.
ಫೆ೧೫ ರ ಇಡೀ ರಾತ್ರಿ ಬೆಳಗಿನ ಜಾವದವರೆವಿಗೂ ನಡೆದ ಈ ಕಾರ್ಯಾಚರಣೆಯನ್ನು ಮಾಡಿದ ಪೊಲೀಸರು ರೌಡಿ ಶೀಟರ್ಗಳು, ಪುಡಿ ಕಳ್ಳರು ಹಾಗೂ ರಾತ್ರಿ ವೇಳೆ ಅನಗತ್ಯವಾಗಿ ಬೀದಿ ಹೆದ್ದಾರಿಗಳಲ್ಲಿ ತಿರುಗಾಟ ನಡೆಸುತ್ತಿದ್ದವರಿಗೆ ಬುದ್ಧಿ ಕಲಿಸಿದರು.
ಕೋಲಾರ ನಗರ ಠಾಣೆ ವ್ಯಾಪ್ತಿಯಲ್ಲಿ ೫ ರೌಡಿಗಳು, ೬ ಚೋರರು, ಗಲ್ಪೇಟೆ ಠಾಣೆ ವ್ಯಾಪ್ತಿಯಲ್ಲಿ ೫ ರೌಡಿಗಳು, ೧೩ ಚೋರರು, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ೨ ರೌಡಿಗಳು, ಒಬ್ಬ ಚೋರ, ವೇಮಗಲ್ ಠಾಣೆ ವ್ಯಾಪ್ತಿಯಲ್ಲಿ ೫ ರೌಡಿಗಳು, ಒಬ್ಬ ಚೋರ, ಮಾಲೂರು ಠಾಣೆ ವ್ಯಾಪ್ತಿಯಲ್ಲಿ ೨೦ ರೌಡಿಗಳು, ೩ ಚೋರರು, ಮಾಸ್ತಿ ಠಾಣೆಯಲ್ಲಿ ೫ ರೌಡಿಗಳು, ಒಬ್ಬ ಚೋರ, ನಂಗಲಿ ಠಾಣೆ ವ್ಯಾಪ್ತಿಯಲ್ಲಿ ೫ ರೌಡಿಗಳು, ೧೦ ಮಂದಿ ಚೋರರಿಗೆ, ಶ್ರೀನಿವಾಸಪುರ ಠಾಣೆ ವ್ಯಾಪ್ತಿಯಲ್ಲಿ ೧೦ ಮಂದಿ ಚೋರರಿಗೆ, ಗೌನಿಪಲ್ಲಿ ಠಾಣೆಯಲ್ಲಿ ೧೨ ರೌಡಿಗಳು, ೨ ಚೋರರು, ರಾಯಲ್ಪಾಡ್ ಠಾಣೆಯಲ್ಲಿ ೩ ರೌಡಿಗಳು, ೪ ಚೋರರು, ಮುಳಬಾಗಿಲು ಠಾಣೆಯಲ್ಲಿ ೨ ರೌಡಿಗಳು ಹಾಗೂ ೪ ಚೋರರಿಂದ ಪೊಲೀಸರು ಮುಚ್ಚಳಿಕೆ ಬರೆಯಿಸಿಕೊಂಡಿದ್ದಾರೆ.
ಕೇಂದ್ರ ವಲಯ ಆರಕ್ಷಕ ಮಹಾ ನಿರೀಕ್ಷಕ ರವಿಕಾಂತೇಗೌಡ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಎಂ.ನಾರಾಯಣ, ಪೊಲೀಸ್ ಅಽಕ್ಷಕ ವಿ.ಬಿ.ಭಾಸ್ಕರ್ ಮುಂದಾಳತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.
ಸುದ್ದಿ ಓದಿ ಹಂಚಿ: