PLACE YOUR AD HERE AT LOWEST PRICE
ಕರ್ನಾಟಕ ರಾಜ್ಯ ಆಗಮಿಕ ಪ್ರೋತ್ಸಾಹ ಸಮಿತಿಯ ೫೦ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ಕೋಲಾರದ ದಕ್ಷಿಣ ಕಾಶಿ ಕ್ಷೇತ್ರ ಅಂತರಗಂಗೆ ಪ್ರಧಾನ ಅರ್ಚಕ ಶಿವ ಶ್ರೀ.ಡಾ.ವಿದ್ವಾನ್ ಕೆ.ಎಸ್.ಮಂಜುನಾಥ ದೀಕ್ಷಿತ್ ರವರಿಗೆ ಶೈವಾಗಮ ರತ್ನ ವಿಶಾರದ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
ಪ್ರತಿ ವರ್ಷವು ಸಹ ಆಗಮಶಾಸ್ತ್ರದಲ್ಲಿ ವಿಶೇಷ ಸಾಧನೆಯನ್ನು ಮಾಡಿರುವಂತಹ ಪ್ರತಿಭಾವಂತ ವಿದ್ವಾಂಸರುಗಳಿಗೆ ಪಂಡಿತರಿಗೆ ಸನ್ಮಾನವನ್ನು ನಡೆಸುತ್ತಾ ಬಂದಿರುತ್ತದೆ.
ಇದೇ ರೀತಿಯಾಗಿ ಈ ವರ್ಷ ಸಹ ಶೈವಾಗಮ ಶಾಸ್ತ್ರದಲಿ ವಿಶೇಷ ಸಾಧನೆಯನ್ನು ಮಾಡಿರುವಂತಹ ಹಾಗೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಡಾಕ್ಟರ್ ಪದವಿಯನ್ನು ಪಡೆದಿರುವಂತಹ ಕೋಲಾರದ ದಕ್ಷಿಣ ಕಾಶಿ ಕ್ಷೇತ್ರ ಅಂತರಗಂಗೆ ಪ್ರಧಾನ ಅರ್ಚಕ ಶಿವ ಶ್ರೀ.ಡಾ.ವಿದ್ವಾನ್ ಕೆ.ಎಸ್.ಮಂಜುನಾಥ ದೀಕ್ಷಿತ್ ರವರಿಗೆ ಶೈವಾಗಮ ರತ್ನ ವಿಶಾರದ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕರ್ನಾಟಕ ವಿಧಾನ ಮಂಡಲದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಶ್ರೀ ಯಾದಗಿರಿ ಯತಿರಾಜ ಮಹಾ ಸಂವಿಧಾನಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆಯ ಪ್ರಶಾಂತ ಆಗಮ ಪಂಡಿತರಾದ ಎಸ್.ಆರ್.ಶೇಷಾದ್ರಿ ಭಟ್ಟರ್ ಕೆ.ಎಸ್.ಎನ್.ದೀಕ್ಷಿತ್ ಲಕ್ಷ್ಮಿಕಾಂತ್ ಉಪಸ್ಥಿತರಿದ್ದರು.
ಸುದ್ದಿ ಓದಿ ಹಂಚಿ: