PLACE YOUR AD HERE AT LOWEST PRICE
ಸಮಾಜ ಸೇವಕ ಜಮಾಲ್ ಷಾ ನಗರದ ಅಪ್ಸರ್ ಖಾನ್ರಿಂದ ಬಡವರಿಗಾಗಿ ವಿವಿಧ ಸರ್ಕಾರಿ ಯೋಜನೆಗಳ ತಲುಪಿಸುವ ಉಚಿತ ಸೇವಾ ಶಿಭಿರ
ಕೋಲಾರ ನಗರದ ೧೬ನೇ ವಾರ್ಡ್ ಹಾಗೂ ಕೊಂಡರಾಜನಹಳ್ಳಿ ಪಂಚಾಯ್ತಿಯ ಜಮಾಲ್ ಷಾ ನಗರದಲ್ಲಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯ್ತಿ ಸಮಾಜ ಸೇವಕ ಅಪ್ಸರ್ ಖಾನ್ ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸ್ಥಳೀಯ ಸಮಾಜ ಮನಸ್ಕ ಯುವಕ ಸಹಕಾರದಲ್ಲಿ ಜಮಾಲ್ ಷಾ ನಗರದಲ್ಲಿ ಉಚಿತವಾಗಿ ವಿವಿಧ ಸರ್ಕಾರಿ ಯೋಜನೆಗಳಿಗೆ ಸಂಬoಧಪಟ್ಟ ಕಾರ್ಡುಗಳ ಸೇವೆಯನ್ನು ಜನರಿಗೆ ತಲುಪಿಸುವ ಶಿಭಿರವನ್ನು ಹಮ್ಮಿಕೊಂಡಿದ್ದರು.
ಈ ಉಚಿತ ಸೇವಾ ಶಿಭಿರದಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಈಶ್ರಾಮ್ ಕಾರ್ಮಿಕ ಕಾರ್ಡುಗಳು, ಆಯುಶ್ಮಾನ್ ಭಾರತ ಆರೋಗ್ಯ ಕಾರ್ಡುಗಳು ಹಾಗೂ ಮತದಾರ ಚೀಟಿ ಹೊಸ ಸೇರ್ಪಡೆ, ತಿದ್ದುಪಡಿ, ಹೊಸ ಕಾರ್ಡುಗಳ ವಿತರಣೆ ಸೌಲಭ್ಯಗಳನ್ನು ಜನರಿಗೆ ತಲುಪಿಸಲಾಗುತ್ತಿದೆ ಎಂದು ಶಿಭಿರದ ವ್ಯವಸ್ಥಾಪಕ ಅಪ್ಸರ್ಖಾನ್ ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಮುಸ್ತಫಾ, ಸ್ಥಳೀಯ ಮುಖಂಡರಾದ ಮುಖ್ತಿಯಾರ್, ಸಯದ್ ಅಲೀಂ, ಸಯದ್ಭಾಷಾ, ಪ್ಯಾರೇಝಾನ್ ಉಪಸ್ಥಿತಿರಿದ್ದರು.