• Tue. May 7th, 2024

PLACE YOUR AD HERE AT LOWEST PRICE

ಕೆಜಿಎಪ್:ತಾಲ್ಲೂಕಿನಾದ್ಯಾಂತ ಗ್ರಾಪಂಗಳಲ್ಲಿ ನರೇಗಾ ಕಾಮಗಾರಿಯನ್ನು ಜೆ.ಸಿ.ಬಿ ಗಳ ಮುಖಾಂತರ ಮಾಡಿ ಕೂಲಿ ಕಾರ್ಮಿಕರ ಜಾಬ್‍ಕಾರ್ಡ್ ದುರುಪಯೋ ಮಾಡಿಕೊಳ್ಳುತ್ತಿರುವವರ  ವಿರುದ್ದ ಕ್ರಮ ಕೈಗೊಳ್ಳಬೇಕು ಮತ್ತು ಇ-ಖಾತೆಗಳ ಆಕ್ರಮ ತನಿಖೆ ಮಾಡಬೇಕೆಂದು ರೈತ ಸಂಘದಿಂದ ತಾಲ್ಲೂಕು ಪಂಚಾಯಿತಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಈ ವೇಳೆ ಮಾತನಾಡಿದ ಮುಖಂದರು, ಕೇಂದ್ರ ಸರ್ಕಾರ ಕಟ್ಟಕಡೆಯ ಕೂಲಿಕಾರ್ಮಿಕರು ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಸಾವಿರಾರು ಕೋಟಿ ಅನುದಾನವನ್ನು ಮಹಾತ್ಮ ಗಾಂದಿ ನರೇಗಾ ಯೋಜನೆಯಲ್ಲಿ ಬಿಡುಗಡೆ ಮಾಡುತ್ತಿದೆ. ಪಂಚಾಯಿತಿಗಳ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ೆಂದು ಆರೋಪಿಸಿದರು.

ತಾಲ್ಲೂಕಿನಾದ್ಯಾಂತ ರಸ್ತೆ, ಕೆರೆಹೂಳು, ಕೆರೆಕಟ್ಟು ಅಭಿವೃದ್ದಿ ರಾಜಕಾಲುವೆಗಳ ಅಭಿವೃದ್ದಿ ಕಾಮಗಾರಿಗಳನ್ನು ದುಡಿಯುವ ಕೈಗೆ ಕೆಲಸ ನೀಡಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ಪೋಟೋ ಸಮೇತ ಕಾಮಗಾರಿಯ ಎಸ್.ಎಂ.ಎಸ್ ಮಾಡುವ ಆದೇಶ ಸರ್ಕಾರದ ಆದೇಶಕ್ಕೆ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ.

ನೆಪಮಾತ್ರಕ್ಕೆ ಪೊಟೊ ತೆಗೆಸಿನ ನಂತರ ಕಾಮಗಾರಿಗಳನ್ನು ಜೆ.ಸಿ.ಬಿಗಳ ಮುಖಾಂತರ ಕೆಲಸ ಮಾಡಿ ಬಡ ಕೂಲಿ ಕಾರ್ಮಿಕರ ಜಾಬ್‍ಕಾರ್ಡ್‍ಗಳನ್ನು ದುರುಪಯೋಗ ಪಡಿಸಿಕೊಳ್ಳುವ ದಂದೆ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಕಡೆ ಜಾಬ್ ಕಾರ್ಡ್ ದುರ್ಬಳಕೆ ಮತ್ತೊಂದು ಕಡೆ ಮಣ್ಣಿನ ಕಾಮಗಾರಿಗಳ ಹಗಲು ದರೋಡೆ ಇದಕ್ಕೆ ಕಡಿವಾಣ ಇಲ್ಲದಂತಾಗಿದೆ. ಪ್ರತಿ ಕಾಮಗಾರಿಗೆ 10 ಲಕ್ಷ, 25 ಲಕ್ಷ ಆರ್ಥಿಕ ಕ್ರಿಯಾ ಯೋಜನೆ ಸಿದ್ದಪಡಿಸಿ ಆ ಕಾಮಗಾರಿಯನ್ನು ಕೇವಲ ಎರಡು ದಿನದಲ್ಲಿ 3 ಲಕ್ಷ ವೆಚ್ಚದಲ್ಲಿ ಜೆ.ಸಿ.ಬಿ ಮುಖಾಂತರ ಕೆಲಸ ಮುಗಿಸಲಾಗುತ್ತಿದೆ.

ಉಳಿದ 7 ಲಕ್ಷ ಹಣವನ್ನು ಅಧಿಕಾರಿಗಳು ಗುತ್ತಿಗೆದಾರರು ಲೂಟಿ ಮಾಡುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕೆರೆ ಹೂಳೆತ್ತುವ ಯೋಜನೆ ಮತ್ತು ರಸ್ತೆಗಳ ಅಭಿವೃದ್ದಿಯಲ್ಲಿಯೇ  ಕೋಟಿ ಕೋಟಿ ಹಣ ಲೂಟಿ ಮಾಡುತ್ತಾರೆಂದು ಆರೋಪಿಸಿದರು.

ಕಾಮಗಾರಿ ಮಾಡುವಾಗ ಸಾರ್ವಜನಿಕರ ದೂರುಗಳಿಂದ ತಪ್ಪಿಸಿಕೊಳ್ಳಲು ಗುತ್ತಿಗೆದಾರರು ಕಲ್ಲು ಮರಗಳ ಅಡ್ಡದ ನೆಪದಲ್ಲಿ ಜೆ.ಸಿ.ಬಿ ಮುಖಾಂತರ 2 ತಾಸು ಕೆಲಸ ಮಾಡಲು ಅನುಮತಿಯನ್ನು ಪಡೆದು ಅದನ್ನೇ ನೆಪವಾಗಿಸಿಕೊಂಡು ಕಾಮಗಾರಿಯನ್ನು ಮುಗಿಸುವ ದಂದೆ ಹೆಚ್ಚಾಗಿದೆ.

ಕೆ.ಜಿ.ಎಪ್ ತಾಲ್ಲೂಕಿನ ವ್ಯಾಪ್ತಿಯ ಎಲ್ಲಾ ಗ್ರಾಪಂಗಳಲ್ಲಿ ಕೆರೆ ರಾಜಕಾಲುವೆ ಗೋಮಾಳ ಗುಂಡುತೋಪುಗಳಿಗೆ ಆಕ್ರಮ ದಾಖಲೆಗಳನ್ನು ಸೃಷ್ಠಿ ಮಾಡಿ ಕಾನೂನು ಬಾಹಿರವಾಗಿ ಯಾವುದೇ ಸ್ಥಳ ಪರೀಶೀಲನೆ ಮಾಡದೆ ರಾತ್ರೋರಾತ್ರಿ ಆಕ್ರಮ ದಾಖಲೆಗಳ ಸೃಷ್ಠಿ ಮಾಡುವ ದಂದೆ ಹೆಚ್ಚಾಗಿದೆ.

ಅದರಲ್ಲೂ ಲೆಔಟ್‍ಗಳಿಗೆ ಹೆಚ್ಚಿನ ಆದ್ಯತೆ ನೀಡಿ ಸರ್ಕಾರಿ ಆಸ್ತಿಗಳಿಗೆ ಇ-ಖಾತೆ-ಬಿ-ಖಾತೆ ಮಾಡುವ ದಂದೆ ಹೆಚ್ಚಾಗಿದ್ದು, ಕಡಿವಾಣ ಹಾಕಬೇಕಾದ ಹಿರಿಯ ಅಧಿಕಾರಿಗಳೇ ಶಾಮೀಲಾಗಿರುವುದು ದುರಾದೃಷ್ಟಕರ ಎಂದು ಅರೋಪಿಸಿದರು.

24 ಗಂಟೆಯಲ್ಲಿ ಎಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ಸಭೆ ಕರೆದು ತಾಲ್ಲೂಕಿನಾದ್ಯಾಂತ ಪಂಚಾಯಿತಿಗಳಲ್ಲಿ ನರೇಗಾ ಕಾಮಗಾರಿಯನ್ನು ಜೆ.ಸಿ.ಬಿ ಗಳ ಮುಖಾಂತರ ಮಾಡಿ ಕೂಲಿ ಕಾರ್ಮಿಕರ ಜಾಬ್‍ಕಾರ್ಡ್ ದುರುಪಯೋಗ ಮಾಡಿಕೊಳ್ಳುತ್ತಿರುವ ಗುತ್ತಿಗೆದಾರರ ವಿರುದ್ದ, ಇ-ಖಾತೆ ಆಕ್ರಮ ತನಿಖೆ ಮಾಡಬೇಕು. ಇಲ್ಲವಾದರೆ ಶಾಸಕರ ಮನೆ ಮುಂದೆ ಮಣ್ಣು ಸಮೇತ ಹೋರಾಟ ಮಾಡುವ ಎಚ್ಚರಿಕೆಯೊಂದಿಗೆ ಮನವಿ ನೀಡಿದರು

ಈ ವೇಳೆ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾಲ್ಲೂಕು ಅದ್ಯಕ್ಷ ರಾಮಸಾಗರ ವೇಣು, ಹಸಿರು ಸೇನೆ ತಾಲ್ಲೂಕು ಅದ್ಯಕ್ಷ ಸಂದೀಪ್‍ರೆಡ್ಡಿ ಮುಖಂಡರಾದ ಸಂದೀಪ್‍ಗೌಡ, ಕಿರಣ್, ವೆಂಕಟರಮಣಪ್ಪ, ಸುರೇಶ್‍ಬಾಬು , ಪಾರಾಂಡಹಳ್ಳಿ ಮಂಜುನಾಥ್, ನಾಗಬೂಷಣ್, ಗೀರೀಶ್, ಮುಂತಾದವರಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!