• Sat. May 4th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಜನ ಸಾಮಾನ್ಯರ ಕೈ ಸುಡುತ್ತಿರುವ ಅಡುಗೆ ಅನಿಲದ ಬೆಲೆ ಏರಿಕೆ ಹಾಗೂ ಕಾರ್ಮಿಕರ ಕೆಲಸದ ಅವದಿ 4 ತಾಸು ಏರಿಕೆ ಆದೇಶವನ್ನು ವಾಪಸ್ಸು ಪಡೆಯಬೇಕೆಂದು ಒತ್ತಾಯಿಸಿ ರೈತ ಸಂಘದಿಂದ ರೈಲ್ವೆ ಇಲಾಖೆ ಮುಂದೆ ಹೋರಾಟ ಮಾಡಿ ರೈಲ್ವೆ ಅಧಿಕಾರಿ ಮಂಡೇಲರ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಒಂದು ವಾರದೊಳಗೆ ಅಡುಗೆ ಅನಿಲದ ಬೆಲೆ ಏರಿಕೆ ಹಾಗೂ ಕಾರ್ಮಿಕರ ದುಡಿಮೆ ಅವಧಿ ಹೆಚ್ಚಳ ಆದೇಶ ವಾಪಸ್ಸು ಪಡೆಯದೇ ಇದ್ದರೆ ಪ್ರತಿ ಹಳ್ಳಿಯಲ್ಲೂ ಮತ ಹಾಕುವ ಬದಲು ಮುಖಕ್ಕೆ ಪೊರಕೆ ಮಂಗಳಾರತಿ ಮಾಡುವ ಚಳುವಳಿಯನ್ನು ಮಾಡಬೇಕಾಗುತ್ತದೆಂದು ಸರ್ಕಾರಗಳಿಗೆ ಎಚ್ಚರಿಕೆ ನೀಡಿದರು.

ಎರಡು ವರ್ಷ ಸಾಂಕ್ರಾಮಿಕ ರೋಗಗಳು ಮತ್ತೆರೆಡು ವರ್ಷ ಮುಂಗಾರು ಮಳೆ ಆರ್ಭಟ ಮತ್ತೆರಡು ವರ್ಷ ಕೇಂದ್ರ ಸರ್ಕಾರದ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜೀವನ ಅಸ್ಥವ್ಯಸ್ಥವಾಗಿ ಮತ್ತೆ ಸಹಜ ಜೀವನದತ್ತ ಮರುಕಳುಹಿಸಿರುವ ಕೂಲಿ ಕಾರ್ಮಿಕರ ಬದುಕಿನ ಜೊತೆ ಸರ್ಕಾರಗಳು ಚಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ಏಕಾಏಕಿ ತಮಗೆ ಇಷ್ಟ ಬಂದಹಾಗೆ ಡೀಜಲ್, ಪೆಟ್ರೋಲ್ ಏರಿಕೆಯೊಂದಿಗೆ ಅಡಿಗೆ ಅನೀಲದ ಬೆಲೆ ದಿಡೀರ್ ಏರಿಕೆಯಿಂದ ಸಿಲೆಂಡರ್ ಖರೀದಿ ಮಾಡಲಾದೆ ಜನ ಸಮಾನ್ಯರ ಬದುಕು ಮತ್ತೆ ಒಲೆ ಊದುವ ನಿರ್ಧಾರಕ್ಕೆ ಬಂದಿರುವುದಕ್ಕೆ ಇಂದಿನ ಸರ್ಕಾರಗಳ ಜನ ವಿರೋಧಿ ನೀತಿಗಳೇ ಕಾರಣವಾಗಿವೆಯೆಂದು ಅರೋಪ ಮಡಿದರು.

ಕೇಂದ್ರ ಸರ್ಕಾರ ಉಜ್ವಲ ಯೋಜನೆಯಡಿ ಸಿಲೆಂಡರ್ ಮತ್ತು ಒಲೆಗಳನ್ನು ವಿತರಣೆ ಮಾಡಿ, ಕಳೆದೊಂದು ವರ್ಷದಿಂದ ಏರುಗತಿಯಾಗುತ್ತಿರುವ ಸಿಲೆಂಡರ್ ಬೆಲೆ ಗ್ರಾಮೀಣ ಜನರ ಕೈ ಸುಡುತ್ತಿದೆ. 1150ರೂ ಕೊಟ್ಟು ಸಿಲೆಂಡರ್ ಖರೀದಿಸುವ ಸಾಮರ್ಥ್ಯ ಇಲ್ಲದವರು ಮತ್ತೆ ಹಳೇ ಪದ್ದತಿಯಲ್ಲಿ  ಸೌದೆಯಲ್ಲಿ ಅಡುಗೆ ಮಾಡುವ ಸ್ಥತಿ ನಿರ್ಮಾಣಾವಾಗಿದೆ ಎಂದು ದೂರಿದರು.

ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಮಾತನಾಡಿ ಒಂದು ಕಡೆ ನಿರಂತರ ಬೆಲೆ ಏರಿಕೆ ಮತ್ತೊಂದು ಕಡೆ ಬದುಕು ಕಟ್ಟಿಕೊಳ್ಳುತ್ತಿರುವ ಕಾರ್ಮಿಕರ ಜೀವನದ ಜೊತೆ ಸರ್ಕಾರ ಚಲ್ಲಾಟವಾಡುತ್ತಿದೆ. ದಿನದ 8 ತಾಸು ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕನ ಬೆವರ ಹನಿಗೆ ತಕ್ಕ ವೇತನ ಸಿಗುತ್ತಿಲ್ಲ. ಯಾವುದೇ ಮೂಲಭೂತ ಸೌಕರ್ಯಗಳಿಲ್ಲ.

ಜೊತೆಗೆ ಕಾರ್ಮಿಕರ ಅನುದಾನವನ್ನು ಕಾರ್ಮಿಕ ಇಲಾಖೆ ಅಕ್ರಮ ದಾಖಲೆ ಸಷ್ಟಿ ಮಾಡಿ ಕೋಟಿ ಕೋಟಿ ಹಣವನ್ನು ನುಂಗಿ ನೀರು ಕುಡಿಯುತ್ತಿದೆ. ಇಷ್ಟೆಲ್ಲಾ ಅವ್ಯವಸ್ತೆ ಇರುವಾಗ ಕಾರ್ಮಿಕರ ಜೊತೆ ಚರ್ಚೆ ಮಾಡದೆ ಏಕಾ ಏಕಿ ದುಡಿಯುವ ಅವಧಿಯನ್ನು 12 ಗಂಟೆ ಏರಿಕೆ ಮಾಡುವ ಮುಖಾಂತರ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಜಾರಿಗೆ ತರುತ್ತಿರುವುದನ್ನು ಖಂಡಿಸಿದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾಧ್ಯಕ್ಷೆ ಎ.ನಳಿನಿಗೌಡ, ಜಿಲ್ಲಾ ಕಾರ್ಯಧ್ಯಕ್ಷ ವಕ್ಕಲೇರಿ ಹನುಮಯ್ಯ, ಮುಖಂಡರಾದ ಕದರಿನತ್ತ ಅಪ್ಪೋಜಿರಾವ್, ಕಾಮಸಮುದ್ರ ಹೋಬಳಿ ಅಧ್ಯಕ್ಷ ಮುನಿಕೃಷ್ಣ, ಭೀಮಗಾನಹಳ್ಳಿ ಮುನಿರಾಜು, ವಿಶ್ವ, ಸಂದೀಪ್‌ರೆಡ್ಡಿ, ಸಂದೀಪ್‌ಗೌಡ, ಕಿರಣ್, ರಾಮಸಾಗರ ವೇಣು, ಚಾಂದ್‌ಪಾಷ, ಬಾಬಾಜಾನ್, ಆರೀಪ್, ಜಾವೀದ್, ಮಹ್ಮದ್ ಷೋಹಿಬ್, ಯಲ್ಲಣ್ಣ, ಮಂಗಸಂದ್ರ ತಿಮ್ಮಣ್ಣ, ಗಿರೀಶ್, ಹರೀಶ್, ಮಾಸ್ತಿ ವೆಂಕಟೇಶ್, ಐತಂಡಹಳ್ಳಿ ಮುನ್ನ, ಮುನಿಯಪ್ಪ, ಮುಂತಾದವರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!