• Sun. Sep 8th, 2024

PLACE YOUR AD HERE AT LOWEST PRICE

ಕೆಜಿಎಫ್:ಕೆಜಿಎಫ್ ಮೀಸಲು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಸ್ಥಳೀಯ ಅಭ್ಯರ್ಥಿ ವಿ.ಮೋಹನ್ ಕೃಷ್ಣಗೆ ನೀಡಬೇಕೆಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕೆಜಿಎಫ್ ನಗರದ ಬಿಜೆಪಿ ಕಛೇರಿಯ ಮುಂಭಾಗದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸ್ಥಳೀಯ ಅಭ್ಯರ್ಥಿ ವಿ.ಮೋಹನ್ ಕೃಷ್ಣಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಮುಖಂಡರು, ವಿ.ಮೋಹನಕೃಷ್ಣ ಸುಮಾರು 4-5 ವರ್ಷಗಳಿಂದ ಸಮಾಜ ಸೇವೆ ಮಾಡುತ್ತಾ, ಬಿಜೆಪಿ ಪಕ್ಷ ಸಂಘಟನೆಗೆ ಪ್ರಾಮುಖ್ಯತೆ ನೀಡಿ ಸಾವಿರಾರೂ ಕಾರ್ಯಕರ್ತರನ್ನು ಸಂಘಟನೆ ಮಾಡಿದ್ದಾರೆ.

ಕೆಜಿಎಫ್ ಕ್ಷೇತ್ರದ ಬಿಜೆಪಿ ಪಕ್ಷದಲ್ಲಿನ ರಾಜಕೀಯ ಲೆಕ್ಕಾಚಾರಗಳು ಸಂಪೂರ್ಣವಾಗಿ ಜಿಲ್ಲಾ ಉಸ್ತುವರಿ ಸಚಿವ ಮುನಿರತ್ನರಿಗೆ ತಿಳಿದಿದ್ದರೂ ಏಕಾಏಕಿಯಾಗಿ ತಮ್ಮ ಆಪ್ತನನ್ನು ಬೆಂಗಳೂರಿನಿಂದ ಕೆಜಿಎಫ್ ಕ್ಷೇತ್ರಕ್ಕೆ ಕರೆತಂದಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಬೆಂಗಳೂರಿನ ಬಿಬಿಎಂಪಿ ಸದಸ್ಯರಾದ ವೇಲು ನಾಯಕರ್ ರನ್ನು ರಾತ್ರೋರಾತ್ರಿ ಕೆಜಿಎಫ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂದು ಕರೆದಂದಿದ್ದು ಯಾಕೆ ಎಂದು ನಗರ ಘಟಕ ಅಧ್ಯಕ್ಷ ಕಮಲ್ ನಾಥ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ನಾರಾಯಣ್ ಕುಟ್ಟಿ ಅವರನ್ನು ಕಾರ್ಯಕರ್ತರು ಇದೇ ವೇಳೆ ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಪಕ್ಷವು ಸಮಾಜ ಸೇವಕ ವಿ.ಮೋಹನ್ ಕೃಷ್ಣ ಅವರಿಗೆ ಟಿಕೆಟ್ ನೀಡದ ಸಮಯದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ವರ್ಧಿಸಿ ಗೆಲ್ಲಿಸಿಕೊಳ್ಳುತ್ತೇವೆಂದು ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ರವಿರೆಡ್ಡಿ, ತಾಪಂ ಮಾಜಿ ಸದಸ್ಯ ಬಾಬು, ಗ್ರಾಪಂ ಅಧ್ಯಕ್ಷರಾದ ಶ್ರೀನಿವಾಸ ಸಂದ್ರ ರಘು,  ರಾಮಸಾಗರ ಮುರಳಿ, ಮುಖಂಡರಾದ ವೆಂಕಟ್ ರಾಮ್, ಸುಧಾಕರ್ ರೆಡ್ಡಿ, ಚಲಪತಿ ನಾಯ್ಡು, ಗೋಪಾಲ್ ರೆಡ್ಡಿ, ಬಾಬು ರೆಡ್ಡಿ, ಓಂ ಸುರೇಶ್, ಗಂಗಿರೆಡ್ಡಿ, ಕೃಷ್ಣಪ್ಪ, ಶ್ರೀನಿವಾಸ್, ನಂದೀಶ್ ಗೌಡ, ಪರಂಧಾಮ, ತೇಜು, ಶಿವ, ಗೋವಿಂದ್, ಬಾಲಚಂದ್ರ, ಗಂಗಪ್ಪ, ಕೇಶವ, ಲಕ್ಷ್ಮಪ್ಪ ಮೊದಲಾದವರಿದ್ದರು.

Leave a Reply

Your email address will not be published. Required fields are marked *

You missed

error: Content is protected !!