PLACE YOUR AD HERE AT LOWEST PRICE
ಕೆಜಿಎಫ್:ಸಿದ್ಧರಾಮಯ್ಯರವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಬಡವರು ಹಸಿವಿನಿಂದ ಬಳಲಬಾರದೆಂದು ಅನ್ನಭಾಗ್ಯ ಯೋಜನೆಯ ಮೂಲಕ ಜನರಿಗೆ ಅನ್ನದಾತರಾಗಿದ್ದರು, ಆದರೆ ಈಗಿನ ಸರ್ಕಾರ ಯೋಜನೆಯಲ್ಲಿ ತಲಾ 5ಕೆಜಿಗೆ ಇಳಿಕೆ ಮಾಡಿದೆ ಎಂದು ಶಾಸಕಿ ಎಂ.ರೂಪಕಲಾ ದೂರಿದರು.
ಅವರು ಬೇತಮಂಗಲ ಹೋಬಳಿ ಟಿ.ಗೊಲ್ಲಹಳ್ಳಿ ಗ್ರಾಪಂಯ ತಿಮ್ಮಸಂದ್ರ, ಟಿ.ಗೊಲ್ಲಹಳ್ಳಿ, ಮದ್ದಿನಾಯಕನಹಳ್ಳಿ, ಜಯಮಂಗಲ, ತಂಬಾರ್ಲಹಳ್ಳಿ ಗ್ರಾಮಗಳಲ್ಲಿ ಜನಾಶೀರ್ವಾದ ಕಾರ್ಯಕ್ರಮದಲ್ಲಿ ಮಾತನಾಡಿ,ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸವಿದೆ, ಬಡವರ ಶ್ರಮಿಕರ ಪರ ಕಾಂಗ್ರೆಸ್ ಸರ್ಕಾರ ಮಾತ್ರ ಚಿಂತನೆ ಮಾಡುತ್ತದೆ.
ಯಾವುದೇ ಬೇದಭಾವವಿಲ್ಲದೆ ಪ್ರತಿ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ, 200 ಯೂನಿಟ್ ವಿದ್ಯುತ್, ತಲಾ 10 ಕೆಜಿ ಅಕ್ಕಿ ಸೇರಿದಂತೆ ವಿದ್ಯಾವಂತ ಯುವಕರು ಪದವಿ ಓದುವ ಪ್ರತಿಯೊಬ್ಬರಿಗೂ ಪ್ರತಿ ತಿಂಗಳು 3 ಸಾವಿರ ಪ್ರೋತ್ಸಹ ಧನ ನೀಡುತ್ತದೆ ಎಂದು ಭರವಸೆ ನೀಡಿದರು.
ಕೆಜಿಎಫ್ ಕ್ಷೇತ್ರದಲ್ಲಿ ಬಡವರಿಗೆ 1200 ಮನೆಗಳನ್ನು ಮಂಜೂರು ಮಾಡಿದ್ದು, ಪ್ರತಿ ಗ್ರಾಮಕ್ಕೂ 10 ಮನೆಗಳ ವರೆಗೂ ಹಂಚಲಾಗಿದೆ. ಇದರಿಂದ ಗ್ರಾಪಂಗೆ 150ಕ್ಕೂ ಅಧಿಕ ಮನೆಗಳನ್ನು ಬಿಡುಗಡೆಗೊಳಿಸಿದ್ದು, ಅನುದಾನವನ್ನು ಸಹ ಮೀಸಲಿಟ್ಟಿದ್ದೇವೆ. ಚುನಾವಣೆ ನಂತರ ಆಯಾ ಫಲಾನುಭವಿಗಳಿಗೆ ಹಣ ಮಂಜೂರಾಗುತ್ತದೆ ಎಂದರು.
ಜಿಪಂ ಮಾಜಿ ಸದಸ್ಯ ಅ.ಮು ಲಕ್ಷ್ಮೀನಾರಾಯಣ್, ಬೇತಮಂಗಲ ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ವೆಂಕಟಾಚಲಪತಿ, ಗ್ರಾಪಂ ಅಧ್ಯಕ್ಷೆ ಪವಿತ್ರಾ ಗೋಪಾಲ್, ಉಪಾಧ್ಯಕ್ಷ ಶ್ರೀರಾಮಪ್ಪ, ಗ್ರಾಪಂ ಸದಸ್ಯ ಅಯ್ಯಪಲ್ಲಿ ಮಂಜುನಾಥ್, ಗೋಪಿ, ನಲ್ಲೂರು ಶಂಕರ್, ಸುರೇಂದ್ರಗೌಡ, ಜಯಮಂಗಲ ಮಣಿ, ರಮೇಶ್, ಶ್ರೀಧೇವಿ ಸಂಪಂತ್, ತಾಪಂ ಮಾಜಿ ಅಧ್ಯಕ್ಷೆ ಸುನಂದಮ್ಮ ರಾಮಕೃಷ್ಣರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣರೆಡ್ಡಿ, ವಕೀಲ ಪದ್ಮನಾಭರೆಡ್ಡಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ದಶರಥರೆಡ್ಡಿ ಮುಖಂಡರಾದ ಪಾಪಣ್ಣ, ಬ್ಯಾಟೇಗೌಡ, ಮುನೇಗೌಡ, ಕೃಷ್ಣಪ್ಪ, ಒಬಿಸಿ ಮುನಿಸ್ವಾಮಿ, ವಿಜಯೇಂದ್ರ, ಚಿದಂಭರಂ, ರಾಜಪ್ಪ ಮೊದಲಾದವರಿದ್ದರು.