PLACE YOUR AD HERE AT LOWEST PRICE
ಕೋಲಾರ:ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ `ಗೃಹ ಜ್ಯೋತಿ’ ಯೋಜನೆಗೆ ನೋಂದಣಿ ಪ್ರಕ್ರಿಯೆ ನಗರದ ಬೆಸ್ಕಾಂ ಕಚೇರಿಯಲ್ಲಿ ಆರಂಭಿಸಲಾಗಿದೆ.
ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ನೋಂದಣಿ ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಬೆಸ್ಕಾಂ ಸಿಬ್ಬಂದಿಗಳು ನೊಂದಣಿ ಕಾರ್ಯದಲ್ಲಿ ತಲ್ಲೀನರಾಗಿದ್ದು ಗ್ರಾಹಕರಿಗೆ ಮಾಹಿತಿಯನ್ನು ತಿಳಿಸುವ ಮೂಲಕ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ.
ಆಗಾಗ ಸರ್ವರ್ ಕೈಕೊಡುತ್ತಿದ್ದು, ಗ್ರಾಹಕರು ನಿರಾಸೆಯಿಂದ ಸಮಯ ಕಳೆಯುವಂತಾಗಿ, ಕೆಲವರು ಮನೆಗಳಿಗೆ ತೆರಳಿದ ಘಟನೆ ನಡೆಯಿತು.
ಈ ವೇಳೆ ಬೆಸ್ಕಾಂ ಎಇಇ ಸ್ವಾಮಿ ಮಾತನಾಡಿ, ಗ್ರಾಹಕರು ತಮ್ಮ ಆಧಾರ್ ಕಾರ್ಡ್ ವಿದ್ಯುತ್ ಬಿಲ್ ತಂದು ನೋಂದಣಿ ಮಾಡಿಸಿಕೊಳ್ಳಬೇಕು. ಬಾಡಿಗೆದಾರರು, ಲೀಸ್ ನಲ್ಲಿರುವವರು ಸಹ ಆಧಾರ್ ಕಾರ್ಡ್ ವಿದ್ಯುತ್ ಬಿಲ್ ತಂದು ನೋಂದಣಿ ಮಾಡಿಸಬೇಕು.
ನೋಂದಣಿ ಕಾರ್ಯವು ಆರಂಭವಾಗಿದ್ದು ಸದ್ಯಕ್ಕೆ ಸರ್ವರ್ ಸಮಸ್ಯೆ ಇದೆ. ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಯಾಗದೇ ನೋಂದಣಿ ಸಲೀಸಾಗಿ ಆಗಲಿದೆ ಎಂದು ಮಾಹಿತಿ ನೀಡಿದರು.