• Mon. Apr 29th, 2024

PLACE YOUR AD HERE AT LOWEST PRICE

ಕೆಜಿಎಫ್:ಮನುಷ್ಯನ ದಿನ ನಿತ್ಯದ ಆರೋಗ್ಯಕ್ಕೆ ಯೋಗ ಬಹುಮುಖ್ಯವಾಗಿದೆ, ದೈನಂದಿನ ಕಾಯಕದ ಜತೆಗೆ ಸ್ವಲ್ಪ ಸಮಯವನ್ನು ಯೋಗಕ್ಕೆ ನೀಡಿದರೆ ಒಳ್ಳೆಯದಾಗುತ್ತದೆ ಎಂದು ಗ್ರಾಮೀಣ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಅ.ಮು.ಲಕ್ಷ್ಮೀನಾರಾಯಣ್ ಹೇಳಿದರು.

ಬೇತಮಂಗಲದ ಗ್ರಾಮದ ಗ್ರಾಮೀಣ ಪ್ರೌಢ ಶಾಲೆ, ಗ್ರಾಮೀಣ ಕಿರಿಯ ಕಾಲೇಜು, ಗ್ರಾಮೀಣ ಪ್ರಥಮ ದರ್ಜೆ ಕಾಲೇಜಿನಿಂದ ಹಮ್ಮಿಕೊಂಡಿದ್ದ 9ನೇ ವಿಶ್ವ ಯೋಗ ದಿನಾಚರಣೆಯುಲ್ಲಿ ಭಾಗವಹಿಸಿ ವಿದ್ಯರ್ಥಿಗಳನ್ನು ಕುರಿತು ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಯಾವುದೋ ಒಂದು ಕೆಲಸದಲ್ಲಿ ಮನುಷ್ಯ ತೋಡಗಿರುವುದರಿಂದ ಆರೋಗ್ಯದ ಕಡೆಗೆ ಹಾಗೂ ದೇಹದ ಕಡೆಗೆ ಗಮನ ಕೊಡಲು ಸಾಧ್ಯವಾಗದೆ ಅನಾರೋಗ್ಯಗಳಿಗೆ ತುತ್ತಾಗುತ್ತಿದ್ದಾರೆ ಎಂದರು.

ಪ್ರತಿನಿತ್ಯ ಸ್ವಲ್ಪ ಸಮಯ ಯೋಗ ಮಾಡುವುದರಿಂದ ಉತ್ತಮ ದೇಹವನ್ನು ಕಾಪಡಿಕೊಳ್ಳಬಹುದು ಹಾಗೂ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು ಎಂದರು. ವಿದ್ಯಾವಂತರು ತಮ್ಮ ಮನೆಗಳಲ್ಲಿಯೇ ನಿತ್ಯ ಯೋಗವನ್ನು ಮಾಡುವ ಮೂಲಕ ಹಿರಿಯರಿಗೆ ಹಾಗೂ ಪೋಷಕರಿಗೂ ಸಹ ಯೋಗದ ಮಹತ್ವವನ್ನುತಿಳಿಸಬೇಕೆಂದರು.

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ವಿಜೇಂದ್ರ, ಕಾಲೇಜು ಪ್ರಾಂಶುಪಾಲರಾದ ಶ್ರೀಮತಿ, ಮಲ್ಲಿಕಾರ್ಜುನ್, ಮುಖ್ಯ ಶಿಕ್ಷಕಿ ಶ್ಯಾಮಲ, ಕೋಶಾಧಿಕಾರಿ ಪ್ರಭಾಕರ್ ಸೇರಿದಂತೆ ಸಹ ಶಿಕ್ಷಕರು ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳು ಯೋಗದಲ್ಲಿ ಭಾಗವಹಿಸಿದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!