PLACE YOUR AD HERE AT LOWEST PRICE
ಬಂಗಾರಪೇಟೆ:ನನ್ನ ಉಸ್ತುವಾರಿಯಲ್ಲಿರುವ ಜಿಎಂಎಫ್ಐಎಲ್ ಸಂಸ್ಥೆಗೆ ಸೇರಿದ 17 ಎಕರೆ ಜಮೀನಿನಲ್ಲಿ ಗ್ರಾಮ ಲೆಕ್ಕಾಧಿಕಾರಿ ವಿನಯ್ಕುಮಾರ್ ಸಂಬಂಧವಿಲ್ಲದ ವ್ಯಕ್ತಿಗಳ ಜತೆ ಸೇರಿ ಸರ್ವೇ ಮಾಡಿ ಸುಳ್ಳು ದಾಖಲೆ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಜಿಎಂಎಫ್ಐಎಲ್ ಸಂಸ್ಥೆ ಉಸ್ತುವಾರಿ ಡಿ.ಸುಧ ಭಾರತೀಯ ದಲಿತ ಸೇನೆ ನೇತೃತ್ವದಲ್ಲಿ ತಹಶೀಲ್ದಾರ್ ಯು.ರಶ್ಮಿರಿಗೆ ದೂರು ಸಲ್ಲಿಸಿದರು.
ಮನವಿಯಲ್ಲಿ ತಾಲ್ಲೂಕಿನ ಡಿ.ಕೆ.ಹಳ್ಳಿ ಪ್ಲಾಂಟೇಷನ್ ವ್ಯಾಪ್ತಿಯಲ್ಲಿ ಜಿಎಂಎಫ್ಐಎಲ್ ಸಂಸ್ಥೆಗೆ ಸೇರಿದ 17 ಎಕರೆ ಜಮೀನಿದೆ. ಸದರಿ ಜಮೀನನ್ನು 1997-98ರಲ್ಲಿ ಸಂಸ್ಥೆ ನಿರ್ಧೇಶಕರಾದ ಪಿ.ಸಿ.ರೆಡ್ಡಿ ಅವರು ಜಮೀನು ಖರೀದಿಸಿದ್ದರು. ಸದರಿ ಸ್ವತ್ತಿನ ರಕ್ಷಣೆ ಹಾಗೂ ಉಸ್ತುವಾರಿಯನ್ನು ಸಂಸ್ಥೆ ಅಧ್ಯಕ್ಷ ಹರಿಗೋವಿಂದ ಸಿಂಗ್ ಅವರು ನನಗೆ ವಹಿಸಿದ್ದಾರೆ ಎಂದರು.
ನನಗೆ ಯಾವುದೇ ನೋಟೀಸ್ ನೀಡದೆ ಗ್ರಾಮ ಲೆಕ್ಕಾಧಿಕಾರಿ ವಿನಯ್ಕುಮಾರ್ ನಮ್ಮ ಜಮೀನು ಸರ್ವೆ ಮಾಡಿಸಿದ್ದಾರೆ. ಈ ಬಗ್ಗೆ ಕೇಳಿದರೆ ಸರಿಯಾದ ಮಾಹಿತಿ ನೀಡಿಲ್ಲ. ಅಲ್ಲದೆ ನನ್ನನ್ನು ಬೆದರಿಸಿ ಸುಳ್ಳು ದಾಖಲೆ ಸೃಷ್ಟಿಸಲು ಹೊರಟಿದ್ದಾರೆ ಎಂದು ದೂರಿದರು.
ಜಿಎಂಎಫ್ಐಎಲ್ ಸಂಸ್ಥೆಗೆ ಸೇರಿದ ಜಮೀನಿನಲ್ಲ ಸರ್ವೆ ಮಾಡಿ, ಸುಳ್ಳು ದಾಖಲೆ ಸೃಷ್ಟಿಸಲು ಉದ್ದೇಶಿಸಿರುವವರ ವಿರುದ್ಧ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಭಾರತೀಯ ದಲಿತ ಸೇನೆ ರಾಜ್ಯಾಧ್ಯಕ್ಷ ಎಂ.ನಾರಾಯಣಸ್ವಾಮಿ ಅವರು ತಹಶೀಲ್ದಾರ್ ಯು.ರಶ್ಮೀ ಅವರಿಗೆ ಮನವಿ ನೀಡಿದ್ದಾರೆ.
ತಪ್ಪಿದಸ್ಥರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಾಹುಕಾರ್ ಶಂಕರಪ್ಪ, ಮತ್ತಿಕುಂಟೆ ಕೃಷ್ಣ, ಹೆಚ್.ಎನ್.ಮೂರ್ತಿ ಮುಂತಾದವರು ಹಾಜರಿದ್ದರು.
(ನಮ್ಮಸುದ್ದಿ.ನೆಟ್) nammasuddi.net ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.