• Mon. Apr 29th, 2024

PLACE YOUR AD HERE AT LOWEST PRICE

ಕೆಜಿಎಫ್:ಆಂಡ್ರಸನ್ ಪೇಟ್ ಪೊಲೀಸರು ಹಾಕಿದ್ದ ಕೈಕೊಳ ಮತ್ತು ಚೈನು ಸಮೇತ ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಆಂಡ್ರಸನ್ ಪೇಟ್  ಪಕ್ಕದ ಸೈನೈಡ್ ಗುಡ್ಡದ ಬಳಿ ವರಧಿಯಾಗಿದೆ.

ಚಾಂಪಿಯನ್ ರೀಫ್ ನ ಡಿ.ಬ್ಲಾಕ್ ನಿವಾಸಿ ಹೆನ್ರಿ ಲಾರೆನ್ಸ್ ರ ಮಗನಾದ ಸುಭಾಷ್ ಚಂದ್ರಬೋಸ್ ಪೊಲೀಸರಿಂದ ಕೈಕೊಳ ಸಮೇತ ಪರಾರಿಯಾಗಿದ್ದಾನೆಂದು ವರಧಿಯಾಗಿದೆ.

ಮಂಗಳವಾರ ಕಳುವು ಪ್ರಕರಣಕ್ಕೆ ಸಂಬಂಧಸಿ ವಿಚಾರಣೆಗೆಂದು ಸುಭಾಷ್ ಚಂದ್ರಬೋಸ್ ನನ್ನು ವಿಚಾರಿಸಿದಾಗ ಆತನು ಸಹಚರರನ್ನು ತೋರಿಸುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಈ ಹಿನ್ನೆಲೆಯಲ್ಲಿ ಠಾಣಾ ವ್ಯಾಪ್ತಿಯ ಸೈನೈಡ್ ಗುಡ್ಡಗಳ ಬಳಿ ಕರೆದುಕೊಂಡು ಹೋಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಆರಕ್ಷಕ ಉಪ ನಿರೀಕ್ಷಕ ಸುನಿಲ್ ವಾಹನದಿಂದ ಇಳಿದಾಗ ಇಬ್ಬರು ಪೊಲೀಸರು ಸುಭಾಷ್ ಚಂದ್ರಬೋಸ್ ನನ್ನು ಹಿಡಿಕೊಂಡಿದ್ದರು.

ಆಗ ಸುಭಾಷ್ ಚಂದ್ರಬೋಸ್ ಇಬ್ಬರೂ ಪೊಲೀಸರನ್ನು ಕೆಳಗೆ ತಳ್ಳಿ ಗಿಡಗಳ ಪೊದೆಯಲ್ಲಿ ತಪ್ಪಿಸಿಕೊಂಡಿದ್ದಾನೆ ಎಂದು ಆಂಡ್ರಸನ್ ಪೇಟ್ ಪೊಲೀಸ್ ಠಾಣೆಯಲ್ಲಿ ಆರಕ್ಷಕ ಉಪ ನಿರೀಕ್ಷಕ ಸುನಿಲ್ ದೂರು ನಿಡಿದ್ದಾರೆ.

ಕೈಕೊಳ ಮತ್ತು ಚೈನು ಸಮೇತ ತಪ್ಪಿಸಿಕೊಂಡಿರುವ ಕಳ್ಳನನ್ನು ಅತೀ ಶೀಘ್ರದಲ್ಲೆ ಬಂಧಸುತ್ತೇವೆ. ಘಟನೆ ಹಿನ್ನೆಲೆ ಆರಕ್ಷಕ ಉಪ ನಿರೀಕ್ಷಕ ಸುನಿಲ್ ಮತ್ತು ಸಂಬಂಧಪಟ್ಟವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದು ಎಸ್.ಪಿ.ಡಾ,ಧರಣಿದೇವಿ ತಿಳಿಸಿರುವುದಾಗಿ ವರದಿಯಾಗಿದೆ.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!