PLACE YOUR AD HERE AT LOWEST PRICE
ಕೆಜಿಎಫ್:ಆಂಡ್ರಸನ್ ಪೇಟ್ ಪೊಲೀಸರು ಹಾಕಿದ್ದ ಕೈಕೊಳ ಮತ್ತು ಚೈನು ಸಮೇತ ಕಳ್ಳನೊಬ್ಬ ಪರಾರಿಯಾಗಿರುವ ಘಟನೆ ಆಂಡ್ರಸನ್ ಪೇಟ್ ಪಕ್ಕದ ಸೈನೈಡ್ ಗುಡ್ಡದ ಬಳಿ ವರಧಿಯಾಗಿದೆ.
ಚಾಂಪಿಯನ್ ರೀಫ್ ನ ಡಿ.ಬ್ಲಾಕ್ ನಿವಾಸಿ ಹೆನ್ರಿ ಲಾರೆನ್ಸ್ ರ ಮಗನಾದ ಸುಭಾಷ್ ಚಂದ್ರಬೋಸ್ ಪೊಲೀಸರಿಂದ ಕೈಕೊಳ ಸಮೇತ ಪರಾರಿಯಾಗಿದ್ದಾನೆಂದು ವರಧಿಯಾಗಿದೆ.
ಮಂಗಳವಾರ ಕಳುವು ಪ್ರಕರಣಕ್ಕೆ ಸಂಬಂಧಸಿ ವಿಚಾರಣೆಗೆಂದು ಸುಭಾಷ್ ಚಂದ್ರಬೋಸ್ ನನ್ನು ವಿಚಾರಿಸಿದಾಗ ಆತನು ಸಹಚರರನ್ನು ತೋರಿಸುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಠಾಣಾ ವ್ಯಾಪ್ತಿಯ ಸೈನೈಡ್ ಗುಡ್ಡಗಳ ಬಳಿ ಕರೆದುಕೊಂಡು ಹೋಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಆರಕ್ಷಕ ಉಪ ನಿರೀಕ್ಷಕ ಸುನಿಲ್ ವಾಹನದಿಂದ ಇಳಿದಾಗ ಇಬ್ಬರು ಪೊಲೀಸರು ಸುಭಾಷ್ ಚಂದ್ರಬೋಸ್ ನನ್ನು ಹಿಡಿಕೊಂಡಿದ್ದರು.
ಆಗ ಸುಭಾಷ್ ಚಂದ್ರಬೋಸ್ ಇಬ್ಬರೂ ಪೊಲೀಸರನ್ನು ಕೆಳಗೆ ತಳ್ಳಿ ಗಿಡಗಳ ಪೊದೆಯಲ್ಲಿ ತಪ್ಪಿಸಿಕೊಂಡಿದ್ದಾನೆ ಎಂದು ಆಂಡ್ರಸನ್ ಪೇಟ್ ಪೊಲೀಸ್ ಠಾಣೆಯಲ್ಲಿ ಆರಕ್ಷಕ ಉಪ ನಿರೀಕ್ಷಕ ಸುನಿಲ್ ದೂರು ನಿಡಿದ್ದಾರೆ.
ಕೈಕೊಳ ಮತ್ತು ಚೈನು ಸಮೇತ ತಪ್ಪಿಸಿಕೊಂಡಿರುವ ಕಳ್ಳನನ್ನು ಅತೀ ಶೀಘ್ರದಲ್ಲೆ ಬಂಧಸುತ್ತೇವೆ. ಘಟನೆ ಹಿನ್ನೆಲೆ ಆರಕ್ಷಕ ಉಪ ನಿರೀಕ್ಷಕ ಸುನಿಲ್ ಮತ್ತು ಸಂಬಂಧಪಟ್ಟವರಿಗೆ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದು ಎಸ್.ಪಿ.ಡಾ,ಧರಣಿದೇವಿ ತಿಳಿಸಿರುವುದಾಗಿ ವರದಿಯಾಗಿದೆ.
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.