PLACE YOUR AD HERE AT LOWEST PRICE
ಕೋಲಾರ:ಬಹು ವರ್ಷಗಳ ಕಾಲ ತಾಲೂಕಿನ ರೇಷ್ಮೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಉತ್ತಮ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದುತ್ತಿರುವ ಎಂ.ಮಂಜುನಾಥರನ್ನು ಜಿಲ್ಲಾ ರೇಷ್ಮೆ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಮತ್ತು ರೇಷ್ಮೆ ಬೆಳೆಗಾರರು ಆತ್ಮೀಯವಾಗಿ ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ಬೆಂಗಳೂರು ವಿಭಾಗ ಜಂಟಿ ನಿರ್ದೇಶಕ ತಿಮ್ಮಯ್ಯ ಮಾತನಾಡಿ, ಇಂತಹ ಉತ್ತಮ ಸೇವೆ ನೀಡುವ ಅಧಿಕಾರಿಗಳು ನಿವೃತ್ತಿ ಹೊಂದಿದಾಗ ಸಂಬಂಧಪಟ್ಟ ಇಲಾಖೆ ನಡೆಸಲು ಬಹಳ ಕಷ್ಟವಾಗುತ್ತೆ. ಇಲ್ಲಿ ಆಗಮಿಸಿರುವ ಜನಸಂಖ್ಯೆ ನೋಡಿದರೆ ಸಾಕು ಇಲಾಖೆಯಲ್ಲಿ ಜನಸಾಮಾನ್ಯರಿಗೆ ಎಂತಹ ಉತ್ತಮ ಸೇವೆ ನೀಡಿದ್ದಾರೆ ಎಂದು ಅರ್ಥವಾಗುತ್ತದೆ ಎಂದರು.
ಮಂಜುನಾಥ್ ಅವರ ನಡುವಳಿಕೆ ಪ್ರತಿಯೊಬ್ಬ ವ್ಯಕ್ತಿಯು ಮೆಚ್ಚುವಂತಹದು. ಅವರು ಯಾವುದೇ ವ್ಯಕ್ತಿಯನ್ನು ಸಹ ಕೋಪದಿಂದ ಮಾತನಾಡಿರುವ ದೃಶ್ಯ ನಾನು ನೋಡಿಲ್ಲ. ಇಲ್ಲಿ ಆಗಮಿಸಿರುವ ರೈತರು ಇವರ ಸೇವೆಯ ಕುರಿತು ತಿಳಿಸಿದಾಗ ತುಂಬಾ ಖುಷಿಯಾಯಿತು. ಇಂತಹ ವ್ಯಕ್ತಿಗಳಿಂದಲೇ ಇಲಾಖೆಗೆ ಒಳ್ಳೆಯ ಹೆಸರು ಬರಲು ಸಾಧ್ಯ ಎಂದರು.
ರೇಷ್ಮೆ ಇಲಾಖೆ ಉಪ ನಿರ್ದೇಶಕ ಟಿ.ಎಂ.ಕಾಳಪ್ಪ ಮಾತನಾಡಿ, ನಾನು ಇಲ್ಲಿಗೆ ಬಂದು ಎರಡು ವರ್ಷಗಳಾಗಿದೆ. ಅಂದಿನಿಂದ ನೋಡುತ್ತಿದ್ದೇನೆ ಮಂಜುನಾಥ್ ಅವರು ಬಹಳ ಸಮಾಧಾನದ ವ್ಯಕ್ತಿ. ಯಾವುದೇ ಕೆಲಸ ಹೇಳಿದರೂ ಆಯಿತು ಸಾರ್ ಮಾಡುತ್ತೇನೆ ಎಂಬ ತಾಳ್ಮೆ ಉತ್ತರ ನೀಡುತ್ತಿದ್ದರು.
ಆಗುವುದಿಲ್ಲ ಎಂಬ ಉತ್ತರವೇ ಅವರಲ್ಲಿರಲಿಲ್ಲ. ಇದಕ್ಕೂ ಮುಂಚೆ ಬೇರೆ ಇಲಾಖೆಗಳಲ್ಲಿ ಕೆಲಸ ಮಾಡಿದ್ದಾರೆ ಇದೆ ರೀತಿ ಅಲ್ಲಿಯೂ ಸಹ ಒಳ್ಳೆಯ ಹೆಸರು ಗಳಿಸಿದ್ದಾರೆ. ಅಂತಹ ವ್ಯಕ್ತಿ ಇಂದು ನಿವೃತ್ತಿ ಹೊಂದುತ್ತಿರುವುದು ನನಗೆ ದುಃಖದ ವಿಷಯವಾಗಿದೆ ಎಂದರು. ಅವರ ಜಾಗಕ್ಕೆ ಬೈರೇಗೌಡ ಅವರು ಬಂದಿದ್ದಾರೆ. ಅವರು ಸಹ ಇವರ ಮಾದರಿ ಉತ್ತಮ ಸೇವೆ ನೀಡುತ್ತಾರೆ ಎಂದರು.
ರೇಷ್ಮೆ ಗೂಡು ಮಾರುಕಟ್ಟೆ ಉಪ ನಿರ್ದೇಶಕ ಎಸ್.ಎನ್.ಶ್ರೀನಿವಾಸ್, ಮಂಜುನಾಥ್ ರಾಧಾ, ಡಾ ಮೇಘನಾ, ಪಿಳ್ಳೇಗೌಡ, ರೇಷ್ಮೆ ಸಹಾಯಕ ನಿರ್ದೇಶಕ ಬೈರೇಗೌಡ, ವೆಂಕಟೇಶ್, ರೆಡ್ಡಿ ಲಕ್ಷ್ಮೀಪುರ ಶ್ರೀನಿವಾಸಪುರ ಮತ್ತು ಮಾಲೂರು ಸಹಾಯಕ ನಿರ್ದೇಶಕ ವೆಂಕಟೇಶ್, ಮತ್ತು ರವಿಚಂದ್ರನ್, ರೇಷ್ಮೆ ನೀರಿಕ್ಷಕ ಕೋಲಾರ ಶ್ರೀನಿವಾಸ್ ಗೌಡ ಜಿ ವಿ, ಶ್ರೀಧರ್, ಚಂದ್ರ ಶೇಖರ್, ಪುರುಷೋತ್ತಮ್, ಸೇರಿದಂತೆ ಇತರರು ಇದ್ದರು.
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.