• Fri. May 10th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಪಟ್ಟಣದ ಬೂದಿಕೋಟೆ ವೃತ್ತದ ಬಳಿಯಿರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ನಿತ್ಯ ಉಂಟಾಗುವ ಟ್ರಾಫಿಕ್ ಜಾಮ್‌ಗೆ ಮುಕ್ತಿಯಿಲ್ಲವೆ ಎಂದು ವಾಹನ ಸವಾರರು ಜನಪ್ರತಿನಿಧಿಗಳನ್ನು ಶಪಿಸಿಕೊಂಡೇ ಸಂಚರಿಸುವಂತಾಗಿದೆ.

ಪಟ್ಟಣದ ಬೂದಿಕೋಟೆ ವೃತ್ತದ ಬಳಿ ಈ ಹಿಂದೆ ರೈಲ್ವೆ ಗೇಟ್ ಅಳವಡಿಸಲಾಗಿತ್ತು. ಅದು ರೈಲು ಬಂದಾಗ ಮಾತ್ರ ಮುಚ್ಚಿ ಉಳಿದ ಸಮಯದಲ್ಲಿ ತೆರೆದಿಡಲಾಗುತ್ತಿತ್ತು. ಇದರಿಂದ ವಾಹನ ಸವಾರರಿಗೆ ಯಾವುದೇ ಸಮಸ್ಯೆಯಾಗದೆ ಸುಗಮವಾಗಿ ಸಂಚಾರ ವ್ಯವಸ್ಥೆ ಇತ್ತು.

ಆದರೆ ಕಳೆದ ನಾಲ್ಕು ವರ್ಷಗಳ ಹಿಂದೆ ದಿಡೀರನೆ ಗೇಟ್ ಮುಚ್ಚಿ ಅರ್ಥ ಕಿ.ಮೀ ದೂರ ಸುತ್ತಾಕಿಕೊಂಡು ವಾಹನ ಸವಾರರು ಹೋಗುವ ವ್ಯವಸ್ಥೆ ಮಾಡಿರುವುದೇ ನಿತ್ಯ ಇಲ್ಲಿ ವಾಹನಗಳ ಜಾಮ್ ಆಗಿ ಕಿರಿಕಿರಿ ಉಂಟಾಗಲು ಕಾರಣವಾಗಿದೆ.

ಬೆಳಗ್ಗೆ ಹಾಗೂ ಸಂಜೆ ವೇಳೆ ಇಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಅಲ್ಲದೆ ಈ ರಸ್ತೆ ಮಾಲೂರು ಮೂಲಕ ಬೆಂಗಳೂರು, ತಮಿಳುನಾಡುಗೆ ಸೇರಿದಂತೆ ಬೂದಿಕೋಟೆ ಹೋಬಳಿಯ ಗ್ರಾಮಗಳ ಸಂಪರ್ಕ ರಸ್ತೆಯಾಗಿರುವುದರಿಂದ ವಾಹನ ದಟ್ಟಣೆ ಹೆಚ್ಚಾಗಿದೆ.

ಪಟ್ಟಣದಿಂದ ಕೋಲಾರ ಮೂಲಕ ಚಿಕ್ಕಬಳ್ಳಾಪುರಕ್ಕೆ ರೈಲು ಸಂಪರ್ಕವಿದ್ದರೂ ನಿತ್ಯ ಬೆಳಗ್ಗೆ ಹಾಗೂ ಸಂಜೆ ಮಾತ್ರ ಪಟ್ಟಣದಿಂದ ಕೋಲಾರಕ್ಕೆ ಮಾತ್ರ ರೈಲು ಹೋಗಿ ಬರುತ್ತದೆ. ಇಷ್ಟಕ್ಕೆ ಇಲಾಖೆ ಇದ್ದ ರೈಲ್ವೆ ಗೇಟ್‌ಅನ್ನು ಮುಚ್ಚಿ ಅರ್ಥ ಕಿ.ಮೀ ದೂರ ಸುತ್ತಿಕೊಂಡು ವಾಹನಗಳು ಸಂಚರಿಸುವಂತೆ ಮಾಡಿರುವುದೇ  ಟ್ರಾಫಿಕ್ ಜಾಮ್ ಆಗಲು ಕಾರಣವಾಗಿದೆ.

ಇದರಿಂದ ತುರ್ತಾಗಿ ಸಂಚರಿಸಬೇಕಾದ ಶಾಲಾ ವಾಹನಗಳು. ಆಂಬ್ಯೂಲೆನ್ಸ್ಗಳೂ ಸಹ ಇಲ್ಲಿ ಕಾಯಲೇಕೇಕಾಗಿದೆ. ಈ ಬಗ್ಗೆ ವಾಹನ ಸವಾರರು ಹಾಗೂ ಸಾರ್ವಜನಿಕರು ಇಲಾಖೆಯ ಈ ಅವೈಜ್ಙಾನಿಕ ಪದ್ದತಿಯನ್ನು ವಿರೋಧಿಸಿ ಈ ಹಿಂದೆ ಇದ್ದಂತಹ ಗೇಟ್‌ನ್ನು ತೆಗೆದು ಅನುಕೂಲ ಮಾಡಿಕೊಡಿ ಎಂದು ಹಲವು ಬಾರಿ ಪ್ರತಿಭಟನೆ ಮಾಡಿದ್ದರು.

ಇಲಾಖೆ ಮಾತ್ರ ಕ್ಯಾರೇ ಎನ್ನಲಿಲ್ಲ. ಶಾಸಕ ಎಸ್.ಎನ್.ನಾರಾಯಣಸ್ವಾಮಿರವರೂ ಸಹ ಮುಚ್ಚಿರುವ ಗೇಟ್ ತೆಗೆಯದಿದ್ದರೆ ಇಲಾಖೆ ವಿರುದ್ದ ಕಾಂಗ್ರೆಸ್ ಪಕ್ಷದಿಂದ ಬೃಹತ್ ಹೋರಾಟ ಮಾಡುವ ಬಗ್ಗೆ ಎಚ್ಚರಿಕೆ ನೀಡಿದ್ದರೂ ಜಗ್ಗಲಿಲ್ಲ.

ಸಂಸದ ಎಸ್.ಮುನಿಸ್ವಾಮಿ ಗಮನಕ್ಕೆ ಸಾರ್ವಜನಿಕರು ತಂದು ಸಮಸ್ಯೆಯನ್ನು ನೀಗಿಸಲು ಒತ್ತಾಯ ಮಾಡಿದರು. ಈ ವಿವಾದಿತ ಸ್ಥಳದಲ್ಲಿ ಮುಚ್ಚಿರುವ ಗೇಟ್ ತೆಗೆಯುವ ಬದಲು ಅಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದರೆ ಹೆಚ್ಚಿನ ರೀತಿ ಅನುಕೂಲವಾಗಲಿದೆ ಎಂದು ಹೇಳಿ ಎರಡು ಬಾರಿ ರೈಲ್ವೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸ್ಥಳ ಪರಿಶೀಲನೆ ಮಾಡಿಸಿದರು.

ಇನ್ನೇನು ಮೇಲ್ಸೇತುವೆ ವರ್ಷದಲ್ಲಿ ನಿರ್ಮಾಣವಾಗಲಿದೆ ಎಂದು ಕನಸು ಕಂಡಿದ್ದ ವಾಹನ ಸವಾರರ ಕನಸು ಮಾತ್ರ ಈಡೇರಿಲ್ಲ. ಈ ವಿಷಯವನ್ನು ಸಂಸದರು ರಾಜಕೀಯವಾಗಿ ಬಳಸಿಕೊಂಡರೇ ವಿನಃಸಮಸ್ಯೆ ನೀಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ.

ಸಂಸದ ಎಸ್.ಮುನಿಸ್ವಾಮಿ ಅವಧಿ ಸಹ ಮುಂದಿನ ವರ್ಷ ಏಪ್ರಿಲ್‌ಗೆ ಅಂತ್ಯವಾಗುತ್ತಿದೆ. ಆದರೆ ಅವರು ಕೊಟ್ಟ ಮಾತು ಮಾತ್ರ ಈಡೇರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ನಿತ್ಯ ವಾಹನ ಸವಾರರು ಮಾತ್ರ ಈ ರಸ್ತೆಯಲ್ಲಿ ಸಂಚರಿಸುವಾಗ ಸಂಸದರೂ ಸೇರಿದಂತೆ ಚುನಾಯಿತ ಪ್ರತಿನಿಧಿಗಳನ್ನು ಶಪಿಸುವುದು ಮಾತ್ರ ಮರೆಯುವುದಿಲ್ಲ.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!