PLACE YOUR AD HERE AT LOWEST PRICE
ಬಂಗಾರಪೇಟೆ:ಕಂದಾಯ ಇಲಾಖೆಯ ಸಿಬ್ಬಂದಿ ಯಾರಿಗೂ ಹೆದರಬೇಡಿ, ನಿರ್ಭಯವಾಗಿ ಕೆಲಸ ಮಾಡಿ ,ವಿಳಂಬ ಧೋರಣೆ ಅನುಸರಿಸಬೇಡಿ, ಉತ್ತಮ ರೀತಿಯಲ್ಲಿ ಕೆಲಸ ಮಾಡಿ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂದಾಯ ಇಲಾಖೆಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಕಂದಾಯ ಇಲಾಖೆಯ ದಿನಾಚರಣೆಯ ಶುಭಾಶಯಗಳನ್ನು ಕೋರಿ ಕಂದಾಯ ಇಲಾಖೆ ಸಿಬ್ಬಂದಿಯವರು ಜನರನ್ನು ಅಲೆದಾಡಿಸದೆ ಅವರ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕಿವಿಮಾತು ಹೇಳಿದರು.
ನಗರ, ಗ್ರಾಮ ಮತ್ತು ರೈತರ ಬೆಳವಣಿಗೆಗೆ ನಿಮ್ಮಗಳ ಸೇವೆ ಅತ್ಯಗತ್ಯ ನಾನು ನಿಮ್ಮ ಸಹಾಯಕ್ಕೆ ಸದಾ ನಿಮ್ಮ ಬೆನ್ನೆಲುಬಾಗಿ ಇರುತ್ತೇನೆ, ಇಲಾಖೆಯ ಅಧಿಕಾರಿಗಳು ಯಾವುದೇ ಬ್ಲಾಕ್ ಮೇಲ್ ಗೆ ಹೆದರದೆ ಉತ್ತಮ ರೀತಿ ಸೇವೆಯನ್ನು ನೀಡಿ ಎಂದು ಹೇಳಿದರು.
ಯಾವುದೇ ರೈತರು ಹಾಗೂ ಸಾರ್ವಜನಿಕರು ಬಂದಾಗ ತಾಲೂಕ ಕಚೇರಿಯಲ್ಲಿ ಒಳ್ಳೆಯ ತಹಶೀಲ್ದಾರ್ ಬಂದಿದ್ದಾರೆ ಉತ್ತಮ ರೀತಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಬೇಕು. ಆ ರೀತಿ ಕೆಲಸ ಮಾಡಿ ನಾನು ಬಯಸುವುದು ಸಹ ಅಷ್ಟೇ.
ಹಿಂದೆ ಇದ್ದಂತಹ ತಾಹಸಿಲ್ದಾರ್ ಹಾಗೆ ಮಾಡು ಹೀಗೆ ಮಾಡು ಎಂದು ಬ್ಲಾಕ್ ಮೇಲ್ ಮಾಡುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ನಿಮಗಿಲ್ಲ ಧೈರ್ಯವಾಗಿ ಉತ್ತಮ ಸೇವೆಯನ್ನು ನೀಡಿ ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ರಶ್ಮಿ, ಉಪತಹಶೀಲ್ದಾರ್ ಚಂದ್ರಶೇಖರ್, ಕಂದಾಯ ಇಲಾಖೆ ಸಿಬ್ಬಂದಿ ಅಜಯ್,ಪವನ್ ಕುಮಾರ್,ಚೇತನ್, ಯೋಗಿ, ಗಾಯತ್ರಿ ಇನ್ನು ಮೊದಲಾದವರು ಇದ್ದರು.
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.