• Sun. May 5th, 2024

PLACE YOUR AD HERE AT LOWEST PRICE

ಕೆಜಿಎಫ್:ಬೇತಮಂಗಲದ ಗ್ರಾಮದ ಗ್ರಾಮೀಣ ಸಂಯುಕ್ತ ಪ್ರೌಢ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆಯಲ್ಲಿ ಶೇ ೯೬% ಮತದಾನ ನಡೆಯುವ ಮೂಲಕ ಯಶಸ್ವಿಯಾಗಿ ಚುನಾವಣೆ ನಡೆಯಿತು.

ಗ್ರಾಮದ ಗ್ರಾಮೀಣ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಚುನಾವಣೆಯು ಕಾನೂನು ಬದ್ಧವಾಗಿ ನಡೆಯಿತು.

ಗ್ರಾಮೀಣ ಪ್ರೌಢ ಶಾಲೆಯ ಶಾಲಾ ಸಂಸತ್‌ಗೆ ಒಟ್ಟು ೨೪ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು, ೩ ದಿನಗಳ ಕಾಲ ಶಾಲಾ ಅವರಣದಲ್ಲಿ ಅಭ್ಯರ್ಥಿಗಳು ಮತಯಾಚನೆಗೆ ಚುನಾವಣಾ ಆಯುಕ್ತರಾದ ಶಾಲಾ ಮುಖ್ಯ ಶಿಕ್ಷಕಿ ಶ್ಯಾಮಲ ಅವರು ಅವಕಾಶ ಕಲ್ಪಿಸಿದರು.

ಶಾಲಾ ಸಂಸತ್ ಚುನಾವಣಾ ಕಣದಲ್ಲಿನ ೨೪ ಅಭ್ಯರ್ಥಿಗಳು ಸಹ ೩ ದಿನಗಳಿಂದ ಮತದಾರರ ಬಳಿ ಸಕ್ರಿಯವಾಗಿ ಮತಯಾಚಣೆ ಮಾಡಿದರು. ಶನಿವಾರ ಯಾವುದೇ ಶಾಸಕರ ಹಾಗೂ ಸಂಸದರ ಚುನಾವಣೆಗೂ ಕಡಿಮೆ ಇಲ್ಲದಂತೆ ಕ್ರಮಬದ್ಧವಾಗಿ ಚುನಾವಣೆಯೂ ನಡೆಯಿತು.

ಶಾಲೆಯಲ್ಲಿ ಒಟ್ಟು ೭೦೦ ಮತದಾರರಲ್ಲಿ (ವಿದ್ಯಾರ್ಥಿಗಳಲ್ಲಿ) ಸುಮಾರು ೬೨೮ ಮತದಾರರು ಮತದಾನ ಮಾಡುವ ಮೂಲಕ ಶಾಲಾ ಸಂಸತ್ ಚುನಾವಣೆಯಲ್ಲಿ ಶೇ೯೬% ಮತದಾನ ಮಾಡಿದ್ದಾರೆ.

ಸುರಕ್ಷತವಾಗಿ ಮತದಾರರು ಮತದಾನ ಮಾಡುವುದಕ್ಕೆ ಚುನಾವಣಾ ಆಯುಕ್ತರಾದ ಶ್ಯಾಮಲ ಅವರು ೨ ಮತದಾನ ಕೇಂದ್ರಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದರು. ೨ ಮತದಾನ ಕೇಂದ್ರಗಳಿಗೂ ಚುನಾವಣಾ ಅಧಿಕಾರಿಗಳನ್ನು ನೇಮಿಸಿದರು.

ಶಾಲಾ ಸಂಸತ್ ಚುನಾವಣೆಯ ಮತದಾನ ಕೇಂದ್ರಗಳಲ್ಲಿ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು ಪ್ರತ್ಯೇಕ ಸರಧಿ ಸಾಲಿನಲ್ಲಿ ತೆರಳಿ ತಮ್ಮ ಮತವನ್ನು ಚಾಲಾಯಿಸಿದರು.  ಮತದಾನ ಕೇಂದ್ರಕ್ಕೆ ಗುರುತಿನ ಚೀಟಿಯಾಗಿ ಆಧಾರ ಕಾರ್ಡ್ ಕಡ್ಡಾಯಗೊಳಿಸಿದ್ದರು.

ಶಾಲಾ ಸಂಸತ್ ಚುನಾವಣೆಯ ನೋಡಲ್ ಅಧಿಕಾರಿಯಾಗಿ ಗಂಗುಲಪ್ಪ ಕಾರ್ಯ ನಿರ್ವಹಿಸಿದರು. ಚುನಾವಣಾ ನಿಮಿತ್ತ ಶಾಲಾ ವಿದ್ಯಾರ್ಥಿಗಳಲ್ಲಿಯೇ ಪೊಲೀಸ್ ಸಿಬ್ಬಂದಿಗಳಾಗಿ, ಆಶಾ ಕಾರ್ಯಕರ್ತೆಯರಾಗಿ, ಆರೋಗ್ಯ ಸಿಬ್ಬಂದಿಯಾಗಿ ನಿಯೋಜನೆ ಮಾಡಲಾಗಿತು.

ಶಾಲಾ ಸಂಸತ್ ಚುನಾವಣೆಯ ೨೪ ಅಭ್ಯರ್ಥಿಗಳ ಭವಿಷ್ಯವು ಮತ ಪಟ್ಟಿಗೆಗಳಲ್ಲಿ ಭದ್ರಪಡಿಸಲಾಗಿದೆ. ಬುಧವಾರ ಮತ ಏಣಿಕೆ ಕಾರ್ಯ ನಡೆಯುವುದಾಗಿ ಚುನಾವಣಾ ಆಯುಕ್ತರಾದ ಶ್ಯಾಮಲ ಹಾಗೂ ನೋಡಲ್ ಅಧಿಕಾರಿ ಗಂಗುಲಪ್ಪ ತಿಳಿಸಿದರು.

ಶಾಲಾ ಆಡಳಿತ ಮಂಡಳಿಯ ನಿರ್ದೇಶಕ ವಿಜೇಂದ್ರ, ಕೋಶಾಧಿಕಾರಿ ಪ್ರಭಾಕರ್ ಮತದಾನ ಕೇಂದ್ರಗಳಿಗೆ ಭೇಟಿ ನೀಡಿ ಮತದಾನವನ್ನು ಪರಿಶೀಲನೆ ನಡೆಸಿದರು.

ಈ ಶಾಲಾ ಸಂಸತ್ ಚುನಾವಣೆಯಲ್ಲಿ ಶಾಲಾ ಸಹ ಶಿಕ್ಷಕರಾದ ವಿ.ಮಂಜುಳಾ, ಪಾಪ, ಅನಂದ್ ಗೌಡ, ಮಂಜುಳಾ, ಕವಿತಾ, ಸವಿತಾ, ಶ್ರೀನಿವಾಸ್, ನಾರಾಯಣಸ್ವಾಮಿ, ಗೋಪಾಲ್, ವಿಕ್ರಮ್ ಕಾರ್ಯ ನಿರ್ವಹಿಸಿದ್ದರು.

ವಿದ್ಯಾರ್ಥಿ ಜೀವನದಿಂದಲ್ಲೇ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಶಿಕ್ಷಣ ಇಲಾಖೆ ಕೈಗೊಂಡಿರುವ ಮತದಾನವನ್ನು ನಮ್ಮ ಗ್ರಾಮೀಣ ಪ್ರೌಢ ಶಾಲೆಯಲ್ಲಿ ಕಟ್ಟು ನಿಟ್ಟಾಗಿ ಪಾಲಿಸಿ ವಿದ್ಯಾರ್ಥಿಗಳು ಸಕ್ರಿಯವಾಗಿ ಚುನಾವಣೆಯ ಕಾರ್ಯದಲ್ಲಿ ತೋಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಲಾ ಕಾರ್ಯದರ್ಶಿ ಅ.ಮು.ಲಕ್ಷ್ಮಿನಾರಾಯಣ್ ತಿಳಿಸಿದರು.

(ನಮ್ಮಸುದ್ದಿ.ನೆಟ್) nammasuddi.net

ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:

ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!