PLACE YOUR AD HERE AT LOWEST PRICE
ಶ್ರೀನಿವಾಸಪುರ:ತಾಲ್ಲೂಕಿನ ರಾಯಲ್ಪಾಡು ಗ್ರಾಮದಲ್ಲಿ ಉಡ ಮಾರಾಟ ಮಾಡುತ್ತಿದ್ದವರ ಮೇಲೆ ಬೆಂಗಳೂರಿನ ಜಾಲಹಳ್ಳಿ ಅರಣ್ಯ ಅಧಿಕಾರಿಗಳು ಸಿನಿಮೀಯ ರೀತಿಯಲ್ಲಿ ದಾಳಿ ಮಾಡಿ ಇಬ್ಬರನ್ನು ಬಂಧಿಸಿದ್ದಾರೆ.
ಉಡದ ಮಾಂಸ ರಕ್ತಕ್ಕೆ ಹೆಚ್ಚು ಬೇಡಿಕೆ ಇರುವ ಹಿನ್ನಲೆಯಲ್ಲಿ ಹೆಚ್ಚಿನ ಬೆಲೆಗೆ ಉಡಗಳನ್ನು ಮಾರುತ್ತಿದ್ದ ಇಬ್ಬರನ್ನು ರಾಯಲ್ಪಾಡು ಗ್ರಾಮದ ಡಾಬಾ ಬಳಿ ಬಂಧಿಸಲಾಗಿದೆ.
ಗೋವಿಂದ ಹಾಗೂ ಮಹಮ್ಮದ್ ರಫೀಕ್ ಬಂಧಿದ ಆರೋಪಿಗಳು. ಬಂದಿತರಿಂದ 2 ಲಕ್ಷ ರೂ ಮೌಲ್ಯದ 4 ಜೀವಂತ ಉಡಗಳನ್ನು ಜಾಲಹಳ್ಳಿ ಅರಣ್ಯ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಕೋಲಾರ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಉಡಗಳನ್ನು ಹಿಡಿದುಕೊಂಡು ಬಂದು ಡಾಬಾ ಹಾಗೂ ಹೋಟೆಲ್ ಗಳಿಗೆ ಮಾರಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದ ಸಂಚಾರಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸಿಬ್ಬಂದಿ ಸಿದ್ದರಾಜು, ಚಿದಾನಂದ ಹೆಚ್ ಆರ್, ಅಮೃತ್ ಹಾಗೂ ಅಶ್ವಿನ್ ಅವರು ಸಿನಿಮೀಯ ರೀತಿಯಲ್ಲಿ ಉಡಗಳನ್ನು ಕೊಂಡುಕೊಳ್ಳುವ ನೆಪದಲ್ಲಿ ಬಂದು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಡು ಪ್ರಾಣಿಗಳಿಗೆ ಬೆಲೆ ಕಟ್ಟುವುದು ಹಾಗೂ ಹಿಡಿದು ಕೊಲ್ಲುವುದು ಅಪರಾಧವಾಗಿದ್ದು ಸುಮಾರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ ನಾಲ್ಕು ಜೀವಂತ ಉಡಗಳನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಳಿವಿನಂಚಿನಲ್ಲಿ ಬರುವ ಪ್ರಭೇದಗಳಲ್ಲಿ ಒಂದಾದ ಉಡಗಳು ಮಾನವನಿಗೆ ಆಹಾರ ಆಗುವ ಮುನ್ನ ಅಧಿಕಾರಿಗಳು ರಕ್ಷಿಸಿದ್ದು ರಕ್ಷಣೆ ಮಾಡಿದ ಸಿಬ್ಬಂದಿಗಳನ್ನು ಹಿರಿಯ ಅರಣ್ಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.