ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಮುಳಬಾಗಿಲು:ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿಯಾಗಿ ಗದಗ ಜಿಲ್ಲೆಯ ಶಿರಹಟ್ಟಿ ತಾ.ಪಂ. ಇಓ ಎಸ್.ನಾರಾಯಣ್ ಅವರನ್ನು ವರ್ಗಾವಣೆ ಮಾಡಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ಬಾಲಪ್ಪ ಆದೇಶಿಸಿದ್ದಾರೆ.
ಖಾಲಿ ಇದ್ದ ಮುಳಬಾಗಿಲು ತಾ.ಪಂ. ಇಓ ಹುದ್ದೆಯಲ್ಲಿ ನಗರದ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಕೆ.ಸರ್ವೇಶ್ ೨೦೧೧ರ ನವಂಬರ್ ೧ ರಿಂದ ಪ್ರಭಾರ ಇಓ ಆಗಿ ಕಾರ್ಯನಿರ್ವಹಿಸುತ್ತಿದ್ದರು, ಆದರೆ ಪ್ರಸ್ತುತ ವರ್ಗಾವಣೆಗೊಂಡ ಡಾ.ಕೆ.ಸರ್ವೇಶ್ಗೆ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸ್ಥಳ ತೋರಿಸಿರುವುದಿಲ್ಲ.
ಅಷ್ಟೇ ಅಲ್ಲದೆ ಸದರೀ ವೈದ್ಯರು ಈ ಹಿಂದೆಯೂ ಪ್ರಭಾರ ಇಓ ಆಗಿ ೨೦೧೮ರ ಫೆ.೧೯ ರಿಂದ ೨೦೧೯ ರ ಏಪ್ರಿಲ್ ೧ ವರೆಗೆ, ಹಾಗೂ ೨೦೧೯ ರ ಮೇ ೩ ರಿಂದ ೨೦೧೯ ರ ಜೂನ್ ೨೬ರ ವರೆಗೆ ಪ್ರಭಾರ ಇಓ ಆಗಿ ಕಾರ್ಯನಿರ್ವಹಿಸಿ ಮಾತೃ ಇಲಾಖೆ ಹೋಗಿದ್ದರು.