PLACE YOUR AD HERE AT LOWEST PRICE
ಕೆಜಿಎಫ್/ಬೇತಮಂಗಲ:ಮಣಿಪುರದಲ್ಲಿ ನಡೆದಿರುವ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರವನ್ನು ಖಂಡಿಸಿ ಅಖಿಲ ಕರ್ನಾಟಕ ಅಂಬೇಡ್ಕರ್ ವೇದಿಕೆ ಹಾಗೂ ವಿವಿಧ ದಲಿತ ಪರ ಸಂಘಟನೆಗಳು ಬೇತಮಂಗಲ ಬಸ್ ನಿಲ್ಧಾಣದಲ್ಲಿ ಪ್ರತಿಭಟನೆ ನಡೆಸಿದರು.
ಬೇತಮಂಗಲ ಪಟ್ಟಣದ ಬಸ್ ನಿಲ್ದಾಣದಲ್ಲಿ ದಲಿತ ಮಹಿಳೆಯರು, ಯುವಕರು ಜಮಾಯಿಸಿ ಯುವಕರು ಶರ್ಟ್ ಬಿಚ್ಚಿ ಬೆತ್ತಲೆ ಪ್ರತಿಭಟನೆ ನಡೆಸಿ, ಮಣಿಪುರದಲ್ಲಿ ಓರ್ವ ಭಾರತೀಯ ಸೇನೆಯ ಪತ್ನಿಯನ್ನು ಸಹ ಬೆತ್ತಲೆ ಮಾಡಿ ಅತ್ಯಾಚಾರ ಮಾಡಿರುವುದು ಶೋಚನೀಯ ಎಂದು ಪ್ರತಿಭಟನಾಕಾರರು ಖಂಡಿಸಿದರು.
ಈ ವೇಳೆ ಸಾಮಾಜಿಕ ಯುವ ಹೋರಾಟಗಾರ ಜೈ ಭೀಮ್ ಶ್ರೀನಿವಾಸ್ ಮಾತನಾಡಿ, ಮಣಿಪುರ ಘಟನೆ ಇಡೀ ದೇಶವೇ ತಲೆ ತಗ್ಗಿಸುವ ಮತ್ತು ನಾಚಿಕೆಗೇಡಿನ ವಿಷಯವಾಗಿದೆ. ಹೆಣ್ಣನ್ನು ಭಾರತ ಮಾತೆ ಅನ್ನುತ್ತೇವೆ ಆದರೆ ಬೆತ್ತಲೆ ಮಾಡಿ ಅತ್ಯಾಚಾರ ಮಾಡಿರುವುದು ಖಂಡನೀಯ ಕೂಡಲೇ ಆರೋಪಿಗಳಿಗೆ ಗಲ್ಲು ಶಿಕ್ಷೆ ಹಾಕಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ನಾಸ್ತಿಕ್ ಶ್ರೀನಾಥ್ ಮಾತನಾಡಿ, ಪ್ರಧಾನಿ ಮೋದಿ ವಿಶ್ವ ಮೆಚ್ಚಿದ ನಾಯಕ ಎನ್ನುತ್ತಾರೆ. ಆದರೆ ಈ ಪ್ರಕರಣವು ನಡೆದು ೨ ತಿಂಗಳು ಕಳೆದರೂ ಏಕೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ. ಈ ಅತ್ಯಾಚಾರಿಗಳು ಬಿಜೆಪಿ, ಆರ್ಎಸ್ಎಸ್ ಅವರೇ ಎಂದು ಮೀನಾಮೇಷ ಎನಿಸುತ್ತಿದ್ದಾರೆಯೇ ಎಂದು ಆರೋಪಿಸಿದರು.
ರಾಜಸ್ವ ನಿರೀಕ್ಷಕ ಮುನಿವೆಂಕಟಸ್ವಾಮಿ ಮನವಿ ಪತ್ರ ಸ್ವೀಕರಿಸಿದರು. ಈ ವೇಳೆ ಮುಖಂಡರಾದ ಕೂಡಗಲ್ ಬಾಬು, ಕ್ಯಾಸಂಬಳ್ಳಿ ಸುಮತಿ, ಬೇತಮಂಗಲ ಅಕೀಬ್, ಬಟ್ರಕುಪ್ಪ ಅರುಣ್, ಅಂಬರೀಶ್, ಸುರೇಶ್, ಮಂಜು, ಅಶ್ವಥ್, ಸಂಜು, ಶಿವ, ಲವ ಮೊದಲಾವರಿದ್ದರು.