PLACE YOUR AD HERE AT LOWEST PRICE
ಶ್ರೀನಿವಾಸಪುರ ತಾಲ್ಲೂಕಿನ ಚಲ್ದಿಗಾನಹಳ್ಳಿ ಕೃಷಿಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದ ಗ್ರಾಮ ಕೆ.ರಾಕೇಶ್ ಸಾವಿನ ಪ್ರಕರಣದ ತನಿಖೆಗೆ ಆಗ್ರಹಿಸಿ ಜು.೩೧ರಂದು ಬೆಳಿಗ್ಗೆ ೧oಕ್ಕೆ ಚಲ್ದಿಗಾನಹಳ್ಳಿಯಿಂದ ತಾಲ್ಲೂಕು ಕಚೇರಿವರೆಗೆ ಪ್ರಗತಿಪರ ಸಂಘಟನೆಗಳ ಸಮನ್ವಯ ಒಕ್ಕೂಟದಿಂದ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಬದಲಾದ ಕಾಲಘಟದ್ದಲ್ಲಿ ಮುಕ್ತವಾಗಿ ಬೆರೆಯಲು, ಚರ್ಚಿಸಲು ಮೊಬೈಲ್ ಹೊರತುಪಡಿಸಿ ಸಾರ್ವಜನಿಕ ವೇದಿಕೆಗಳು ಸಿಗುತ್ತಿಲ್ಲ, ಎಲ್ಲಾ ಸಮುದಾಯಗಳು ಪರಸ್ಪರ ಮುಕ್ತವಾಗಿ ಮಾತನಾಡಿಕೊಂಡಾಗ ಸಮಾಜ ಸರಿದಾರಿಯಲ್ಲಿ ನಡೆಯುತ್ತದೆ. ಕೊಲೆ ಅತ್ಯಾಚಾರದಂತಹ ಹೇಯ ಕೃತ್ಯಗಳು ನಿಲ್ಲುತ್ತವೆ ಎಂದರು.
ತಾಲ್ಲೂಕಿನ ದಲಿತರ ಮೇಲೆ ದೌರ್ಜನ್ಯಗಳು ಹೆಚ್ಚುತ್ತಲೇ ಇದ್ದು, ಚಲ್ದಿಗಾನಹಳ್ಳಿಯ ಕೆ.ರಾಕೇಶ್ ಸಾವಿನ ಕುರಿತಾಗಿ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಿ ಎಂದು ಆಗ್ರಹಿಸಿದರು.
ಸುದ್ಧಿಗೋಷ್ಠಿಯಲ್ಲಿ ದಲಿತ ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ಸೀತಪ್ಪ, ಕೂಸಂದ್ರ ರೆಡ್ಡಿಪ್ಪ, ನರಸಿಂಹ, ಚಲಪತಿ, ಗೊರವಿಮಾಕಲಪಲ್ಲಿ ಶ್ರೀನಿವಾಸ್, ರಾಮಕೃಷ್ಣ, ಶ್ರೀನಿವಾಸ್, ವರ್ತನಹಳ್ಳಿ ವೆಂಕಡೇಶ್, ಪನಸಮಾಕಲಪಲ್ಲಿ ರಾಮಮೂರ್ತಿ, ಬಂದರ್ಲಹಳ್ಳಿ ಸಿ. ಮುನಿಯಪ್ಪ ಇದ್ದರು.