PLACE YOUR AD HERE AT LOWEST PRICE
ಬಂಗಾರಪೇಟೆ:ಕೇಂದ್ರದಲ್ಲಿ ನರೇಂದ್ರ ಮೋದಿರವರ ಸರ್ಕಾರ ಬಂದ ಮೇಲೆ ರೈತರಿಗೆ ತುಂಬಾ ರೀತಿ ಅನುಕೂಲ ಮಾಡಿದ್ದು, ರೈತ ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ ಎಂದು ಬಿಜೆಪಿ ಮುಖಂಡ ಕೆ.ಚಂದ್ರಾರೆಡ್ಡಿ ಹೇಳಿದರು.
ಅವರು ತಾಲ್ಲೂಕಿನ ಸೂಲಿಕುಂಟೆ ಗ್ರಾಮದಲ್ಲಿ ಪಿಎಂ ಕಿಸಾನ್ ಸಮ್ಮಾನ್ 14ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಮೋದಿ ಸರ್ಕಾರದಲ್ಲಿ ಯೂರಿಯಾವನ್ನು ಸಬ್ಸಿಡಿ ಮುಖಾಂತರ ನೀಡುತ್ತಿರುವುದರಿಂದ ರೈತರನಿಗೆ ನೆರವಾಗಿದೆ ಎಂದರು.
2,000 ಬೆಲೆ ಇರುವಂತ ಯೂರಿಯವನ್ನು ಕೇವಲ 290 ರುಗಳಿಗೆ ರೈತರಿಗೆ ನೀಡಲಾಗುತ್ತಿದೆ. ಜಿತೆಗೆ ಇನ್ನು ಮುಂದೆ ರೈತರು ತಾವು ಬೆಳೆದ ತರಕಾರಿ ಹಣ್ಣು ಹಂಪಲನ್ನು ಆನ್ ಲೈನ್ ಮುಖಾಂತರ ಮಾರಾಟ ಮಾಡಬಹುದಾಗಿದೆ.
ಆನ್ ಲೈನ್ ಮೂಲಕ ಯಾವ ರಾಜ್ಯದಲ್ಲಿ ಯಾವ ದರ ಇದೆ ಎಂದು ತಿಳಿದುಕೊಂಡು ರೈತ ತನ್ನ ಬೆಳೆಯನ್ನು ಉತ್ತಮ ಬೆಲೆಗೆ ಮಾರಾಟ ಮಾಡಬಹುದಾಗಿದ್ದು ಇದರಿಂದ ರೈತನಿಗೆ ದಲ್ಲಾಳಿಗಳ ಕಾಟ ತಪ್ಪಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಶ್ರೀನಿವಾಸ್ ಗೌಡ, ರಾಜಶೇಖರ್, ಶ್ರೀನಿವಾಸ್, ಮಂಜುನಾಥ್, ಆನಂದ್, ಕೃಷಿ ಅಧಿಕಾರಿಗಳು ಹಾಜರಿದ್ದರು.