PLACE YOUR AD HERE AT LOWEST PRICE
ಕೆಜಿಎಫ್:ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಹಣ ಪಡೆಯಬಾರದು ಎಂದು ಸರ್ಕಾರದಿಂದ ಆದೇಶ ಇದ್ದರೂ ಸಹ ಸರ್ಕಾರದ ಆದೇಶವನ್ನು ಲೆಕ್ಕಿಸದೆ ಸಾರ್ವಜನಿಕರ ಬಳಿ ಅರ್ಜಿ ಸಲ್ಲಿಸಲು ಬೇತಮಂಗಲದ ಗ್ರಾಮ ಒನ್ ಕೇಂದ್ರದಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡ ಕೆ.ವಿ.ಸುಬ್ರಮಣಿ ಆರೋಪಿಸಿದ್ದಾರೆ.
ಈ ಕುರಿತು ತಹಶೀಲ್ದಾರರಿಗೆ ಮನವಿ ಮಾಡಿರುವ ಅವರು ಬೆತಮಂಗಲದ ಗ್ರಾಮ ಒನ್ ಕೇಂದ್ರದಲ್ಲಿ ಒಂದು ಅರ್ಜಿಗೆ 100 ರೂ ನಂತೆ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಅಡ್ವಾನ್ಸ್ ಟೋಕನ್ಗಳನ್ನು ವಿತರಣೆ ಮಾಡಿ ಹಣವನ್ನು ಪಡೆಯಲಾಗಿದೆ ಎಂದು ಕೆಳಿಬಂದಿದ್ದು ಸೂಕ್ತ ಕ್ರಮ ಜರುಗಿಸಬೇಕು.
ಹಣ ವಸೂಲಿ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು ಈ ಬಗ್ಗೆ ಸಂಬಂಧಪಟ್ಟವರನ್ನು ಸಂಪರ್ಕಿಸಿದಾಗ ಈ ಯೋಜನೆಗೆ ನೋಂದಣಿ ಮಾಡಲು ಯಾವುದೇ ಶುಲ್ಕ ತೆಗೆದುಕೊಳ್ಳಲು ಅನುಮತಿ ನೀಡಿಲ್ಲ. ಗ್ರಾಮ ಒನ್ ಕೇಂದ್ರಕ್ಕೆ ಯಾರೇ ನೋಂದಣಿಗೆ ಬಂದರೆ ಉಚಿತವಾಗಿ ನೋದಣಿ ಮಾಡಿಕೊಡಬೇಕು ಎಂದು ತಿಳಿಸಿರುತ್ತಾರೆ.
ಈ ಬಗ್ಗೆ ಗ್ರಾಮ ಒನ್ ಕೇಂದ್ರವನ್ನು ನಾವು ಸಂಪರ್ಕಿಸಿ ಕೇಳಿದಾಗ ನಮಗೆ ಸರ್ಕಾರದಿಂದ ಹಣ ವಸೂಲಿಗೆ ಅನುಮತಿ ಇದೆ ಎಂದು ತಿಳಿಸಿರುತ್ತಾರೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸಿ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿರುವವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.