• Sun. May 5th, 2024

PLACE YOUR AD HERE AT LOWEST PRICE

ಈಗ ಎಲ್ಲರ ಕಣ್ಣು ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಮೇಲೆ ನೆಟ್ಟಿದೆ. ಸನ್ ಪಿಕ್ಚರ್ಸ್ ನಿರ್ಮಿಸಿ, ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ ಈ ಸಿನಿಮಾ ಆಗಸ್ಟ್ 10ರಂದು ರಿಲೀಸ್ ಆಗುತ್ತಿದೆ. ಇದೇ ಜೋಷ್‌ನಲ್ಲಿ ಈ ಸಿನಿಮಾದ ಟ್ರೈಲರ್ ಒಂದನ್ನು ರಿಲೀಸ್ ಮಾಡಲಾಗಿದೆ. ಅದರ ಒಂದು ಡೈಲಾಗ್ ಈಗ ಟ್ರೆಂಡ್ ಆಗುತ್ತಿದೆ.

‘ಜೈಲರ್’ ಸಿನಿಮಾದ ಟ್ರೈಲರ್ ಸೂಪರ್‌ಸ್ಟಾರ್ ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ. ರಜನಿಕಾಂತ್ ಸ್ಟೈಲ್ ಹಾಗೂ ಆಕ್ಷನ್ ಎರಡೂ ಪ್ರೇಕ್ಷಕರಿಗೆ ಇಷ್ಟ ಆಗಿದೆ. ಅದರಲ್ಲೂ ಟ್ರೈಲರ್‌ನಲ್ಲಿ ಬಂದಿರೋ ಕೆಲವು ಡೈಲಾಗ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿವೆ.

ಕಿಕ್ ಕೊಡ್ತಿದೆ ‘ಜೈಲರ್’ ಡೈಲಾಗ್ ಸೂಪರ್‌ಸ್ಟಾರ್ ಅಭಿಮಾನಿಗಳಲ್ಲಿ ‘ಜೈಲರ್’ ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆಗಳನ್ನು ಹುಟ್ಟಾಕಿದೆ. ಅದರಲ್ಲೂ ರಜನಿಗೆ ಇದೇ ಮೊದಲ ಬಾರಿಗೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಹೀಗಾಗಿ ನಿರೀಕ್ಷೆ ಸಹಜವಾಗಿಯೇ ದುಪ್ಪಟ್ಟಾಗಿದೆ.

ಜೊತೆಗೆ ಅನಿರುದ್ಧ್ ಟ್ಯೂನ್ ಹಾಕಿರೋ ಮೂರು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು, ಮೂರು ಹಾಡುಗಳೂ ಪ್ರೇಕ್ಷಕರ ಮನಗೆದ್ದಿದೆ. ಈ ಮಧ್ಯೆ ನಿನ್ನೆ (ಆಗಸ್ಟ್ 2) ಬಿಡುಗಡೆಯಾಗಿದ್ದ ಟ್ರೈಲರ್ ನೋಡಿ ಥ್ರಿಲ್ ಆಗಿರೋ ಅಭಿಮಾನಿಗಳು ಸಿಬಿಐ ಡೈಲಾಗ್ ಅನ್ನು ಟ್ರೆಂಡ್ ಮಾಡುತ್ತಿದ್ದಾರೆ.

ಆಡಿಯೋ ಲಾಂಚ್‌ನಲ್ಲೇ ರಜನಿ ವಾರ್ನಿಂಗ್ ಕಳೆದ ವಾರವಷ್ಟೇ ರಜನಿಕಾಂತ್ ‘ಜೈಲರ್’ ಸಿನಿಮಾದ ಆಡಿಯೋವನ್ನು ಅದ್ಧೂರಿಯಾಗಿ ರಿಲೀಸ್ ಮಾಡಲಾಗಿತ್ತು. ಈ ವೇಳೆ ರಜನಿ ಸಿನಿಮಾದ ಟೈಟಲ್ ಬಗ್ಗೆ ಆಡಿದ ಮಾತು ಕೂಡ ಟ್ರೆಂಡಿಂಗ್‌ನಲ್ಲಿದೆ. ಹಾಗೇ ರಜನಿ ತಮ್ಮ ಅಭಿಮಾನಿಗಳಿಗೆ ‘ಕಾಗೆ-ಗಿಡುಗ’ದ ಚಿಕ್ಕ ಕಥೆಯೊಂದನ್ನು ಹೇಳಿದ್ದರು.

ಈ ಕಥೆ ಬಗ್ಗೆನೂ ಈಗ ಚರ್ಚೆಯಾಗುತ್ತಿದೆ. ಸೂಪರ್‌ಸ್ಟಾರ್ ಪಟ್ಟದ ಕನಸು ಕಾಣುತ್ತಿರುವ ಯಂಗ್ ಹೀರೋಗಳಿಗೆ ತಲೈವಾ ಕೊಟ್ಟ ಎಚ್ಚರಿಕೆ ಎಂಬ ಮಾತು ತಮಿಳು ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಈ ಮಧ್ಯೆ ಟ್ರೈಲರ್ ಡೈಲಾಗ್ ಬೇರೆ ಟ್ರೆಂಡ್ ಆಗುತ್ತಿದೆ.

CBI ಡೈಲಾಗ್ ಟ್ರೆಂಡ್ ಆಗ್ತಿರೋದ್ಯಾಕೆ? ಸೂಪರ್‌ಸ್ಟಾರ್ ರಜನಿಕಾಂತ್ ‘ಜೈಲರ್’ ಟ್ರೈಲರ್ ಇಂಟರ್‌ನೆಟ್‌ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಆಕ್ಷನ್ ಸೀನ್ ಮೂಲಕ ಆರಂಭವಾದ ಟ್ರೈಲರ್‌ನ ಮೊದಲ ಡೈಲಾಗ್ ಕಿಕ್ ಕೊಟ್ಟಿದೆ. “ನಾನು ಸಿಬಿಐನಿಂದ ಬಂದಿದ್ದೇವೆ” ಎನ್ನುವ ಡೈಲಾಗ್‌ಗೆ ನಟ ಸುನಿಲ್ “ನಿಮಗೆ ದೇಣಿಕೆ ಬೇಕಾ?” ಎಂದು ನೀಡುವ ಪ್ರತಿಕ್ರಿಯೆ ನೀಡುತ್ತಾರೆ.

ತಕ್ಷಣಕ್ಕೆ ಕಲಾನಿಧಿ ಮಾರನ್ ಪ್ರಸ್ತುತಿ ಅಂತ ಟೈಟಲ್ ಬರುತ್ತೆ. ಇದನ್ನು ನೋಡಿ ರಜನಿಕಾಂತ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇದು ಸಿಬಿಐ ಹಾಗೂ ಜಾರಿ ನಿರ್ದೇಶನಾಯಲದ ಕುರಿತಾದ ಸಿನಿಮಾ ಇರುಬಹುದು ಎಂದು ಅಂದಾಜು ಮಾಡಲಾಗುತ್ತಿದೆ.

ಟ್ರೈಲರ್‌ನಲ್ಲೇ ಟಾಂಗ್ ಕೊಟ್ರಾ? ಜೈಲರ್ ಸಿನಿಮಾವನ್ನು ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದರಿಂದ ರಾಜಕೀಯ ಕ್ಷೇತ್ರದಲ್ಲೂ ಗಮನ ಸೆಳೆದಿದೆ. ಕೆಲವು ತಿಂಗಳ ಹಿಂದಷ್ಟೇ ಜಾರಿ ನಿರ್ದೇಶನಲಾಯ ಡಿಎಂಕೆ ಮುಖಂಡರ ಆಸ್ತಿ ಮೇಲೆ ರೇಡ್ ಮಾಡಿತ್ತು.

ಇದಕ್ಕೆ ಟ್ರೈಲರ್‌ನಲ್ಲೇ ಟಾಂಗ್ ಕೊಟ್ಟಿದ್ದಾರೆ ಎನ್ನಲಾಗಿದೆ. ಇದೆಲ್ಲ ಏನೇ ಇದ್ದರೂ, ಸೂಪರ್‌ಸ್ಟಾರ್ ರಜನಿಕಾಂತ್ ಸಿನಿಮಾ ಅವರ ಅಭಿಮಾನಿಗಳಿಗೆ ಪಕ್ಕಾ ಕಮರ್ಷಿಯಲ್ ಪ್ಯಾಕೇಜ್ ಆಗಿರಬೇಕು ಎಂದು ಹೇಳಿದ್ದಾರೆ.

ಇನ್ನು ಚಿತ್ರದಲ್ಲಿ ಬಾಲಿವುಡ್ ಟು ಸ್ಯಾಂಡಲ್‌ವುಡ್‌ನ ಹಲವಾರು ನಟರು ನಟಿಸಿದ್ದದ್ದು ವಿಶೇಷವಾಗಿತ್ತು. ಈ ಪೈಕಿ ಟ್ರೈಲರ್‌ನಲ್ಲಿ ಬಾಲಿವುಡ್‌ನ ಜಾಕಿ ಶ್ರಾಫ್ ಹಾಗೂ ಟಾಲಿವುಡ್‌ನ ಸುನಿಲ್ ಅವರನ್ನು ತೋರಿಸಿದ್ದಾರೆ.

ಮಲಯಾಳಂನ ಮೋಹನ್ ಲಾಲ್ ಹಾಗೂ ಕನ್ನಡದ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರನ್ನು ತೋರಿಸಿಲ್ಲ. ಈ ಮೂಲಕ ಆ ಇಬ್ಬರದ್ದು ಚಿತ್ರದಲ್ಲಿ ಯಾವ ರೀತಿಯ ಪಾತ್ರ ಹಾಗೂ ಲುಕ್ ಎಂಬುದನ್ನು ನಿರ್ದೇಶಕ ಇನ್ನೂ ಸಹ ಗೌಪ್ಯವಾಗಿಯೇ ಇಟ್ಟಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!