PLACE YOUR AD HERE AT LOWEST PRICE
ಬಂಗಾರಪೇಟೆ.ಬಹುನಿರೀಕ್ಷಿತ ಮೂರು ತಾಲೂಕಿನ ಜನರ ಕುಡಿಯುವ ನೀರಿನ ಭವಣೆ ನೀಗಿಸುವ ಯರಗೋಳ್ ಯೋಜನೆಯ ಡ್ಯಾಂ ನಿರ್ಮಾಣದ ಸ್ಥಳಕ್ಕೆ ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು.
೧೪ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಯರಗೋಳ್ ಯೋಜನೆ ಈಗ ಉದ್ಘಾಟನೆ ಹಂತಕ್ಕೆ ಬಂದಿದ್ದು ಡ್ಯಾಂ ಸಹ ಭರ್ತಿಯಾಗಿ ವರ್ಷವಾದರೂ ಸರ್ಕಾರ ಡ್ಯಾಂನ್ನು ಲೋಕಾರ್ಪಣೆಗೊಳಿಸದೆ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಗಳ ಕೇಳಿ ಬಂದ ಹಿನ್ನೆಲೆ ನಗರಾಭಿವೃದ್ದಿ ಇಲಾಖೆಯ ಅಧಿಕಾರಿಗಳು ಯೋಜನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಪಟ್ಟಣದ ಹೊರವಲಯದಲ್ಲಿರುವ ಆನಂದಗಿರಿ ಗ್ರಾಮದ ಬಳಿ ನಿರ್ಮಾಣ ಮಾಡಿರುವ ಪಂಪ್ ಹೌಸ್ಗೂ ತೆರಳಿ ಪರಿಶೀಲನೆ ಮಾಡಿದರು.ನಂತರ ಮಾತನಾಡಿದ ಎಂಜಿನಿಯರ್ ಶರಥ್ ಈಗಾಗಲೇ ಯೋಜನೆ ಸಂಪೂರ್ಣವಾಗಿ ಮುಗಿದಿದ್ದು ಯಾವ ಹಂತದಲ್ಲಿದೆ ಎಂದು ವರದಿ ಸರ್ಕಾರ ಕೇಳಿದ್ದರಿಂದ ನಾವು ಸ್ಥಳ ಪರಿಶೀಲನೆ ಮಾಡುತ್ತಿದ್ದೇವೆ.
ಆನಂದಗಿರಿಲ್ಲಿರುವ ಪಂಪ್ಹೌಸ್ನಿಂದ ಪಟ್ಟಣಕ್ಕೆ ನೀರನ್ನು ಶುದ್ದಿಕರಿಸಿ ಪಂಪ್ ಮಾಡಲಾಗಿ ಅದು ಯಶಸ್ವಿಯಾಗಿದೆ, ಅದೇ ರೀತಿ ಕೋಲಾರಕ್ಕೆ ಪಂಪ್ ಮಾಡಲಾಗಿದೆ ಎರಡು ದಿನದೊಳಗೆ ಕೋಲಾರ ತಲುಪಲಿದೆ. ಮಾಲೂರಕ್ಕೂ ನೀರನ್ನು ಪಂಪ್ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ನೀರನ್ನು ಪಂಪ್ ಮಾಡಿದಾಗ ಯಾವುದಾದರೂ ಸೋರಿಕೆ ಇಲ್ಲವೆ ಸಮಸ್ಯೆಗಳಿದೆಯೇ ಎಂಬುದನ್ನು ಪರಿಶೀಲನೆ ಮಾಡಬೇಕಿದೆ ಎಂದರು.
ಈ ವೇಳೆ ಎಇಇ ಹೆಚ್.ಟಿ.ರಾಜಶೇಖರ್,ರವೀಂದ್ರ,ಪುರಸಭೆ ಮುಖ್ಯಾಧಿಕಾರಿ ಮೀನಾಕ್ಷಿ,ಆರೋಗ್ಯಾಧಿಕಾರಿ ಗೋವಿಂದರಾಜು,ಮತ್ತು ರವಿ ಇದ್ದರು.